ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ್ ಬಂಗಾರಪ್ಪ ಅವರ ಕನಸಿನ ಕರ್ನಾಟಕ ಹೇಗಿರಬೇಕು?

|
Google Oneindia Kannada News

Recommended Video

My Dream Of Karnataka |ಕುಮಾರ್ ಬಂಗಾರಪ್ಪ ಅವರ ಕನಸಿನ ಕರ್ನಾಟಕ ಹೇಗಿರಬೇಕು? | Oneindia Kannada

ಬೆಂಗಳೂರು, ಮೇ 05 : 'ನೀರು ಸಮುದ್ರಕ್ಕೆ ಹರಿದು ಹೋಗಿ ಅದನ್ನು ಶುದ್ಧೀಕರಿಸಿ ಕುಡಿಯುವಂತಹ ಕಾಲ ಬರಬಾರದು. ನನ್ನ ಕನಸಿನ ಕರ್ನಾಟಕದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಜಲ ಸುಲಭವಾಗಿ ದೊರೆಯಬೇಕು' ಎಂದು ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಹೇಳಿದರು.

ಕುಮಾರ್ ಬಂಗಾರಪ್ಪ ಅವರ ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಅವರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದರು. 'ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನನ್ನ ಕನಸಿನ ಕರ್ನಾಟಕದಲ್ಲಿ ಜೀವಜಲ ನೀರು ಎಲ್ಲರ ಕೈಗೆ ಸಿಗಬೇಕು' ಎಂದರು.

ಕುಮಾರ್ ಬಂಗಾರಪ್ಪ ಸಂದರ್ಶ ಓದಿಕುಮಾರ್ ಬಂಗಾರಪ್ಪ ಸಂದರ್ಶ ಓದಿ

'ನೀರು ಸಿಕ್ಕರೆ ನೆಲ ಹಸಿರಾಗುತ್ತದೆ, ಜನರು ನೆಮ್ಮದಿಯಿಂದ ಬಾಳುವಂತಾಗುತ್ತದೆ. ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿ ಅದನ್ನು ಶುದ್ಧೀಕರಿಸಿ ಕುಡಿಯುವಂತಹ ಕಾಲ ರಾಜ್ಯದಲ್ಲಿ ಬರಬಾರದು' ಎಂಬುದು ನನ್ನ ಆಶಯ ಎಂದು ಹೇಳಿದರು.

ಸ್ವಾಭಿಮಾನಿ ಕರ್ನಾಟಕ ನನ್ನದಾಗಬೇಕು: ನರೇಂದ್ರ ಬಾಬುಸ್ವಾಭಿಮಾನಿ ಕರ್ನಾಟಕ ನನ್ನದಾಗಬೇಕು: ನರೇಂದ್ರ ಬಾಬು

Kumar Bangarapap shares his dream about Karnataka

'ಪ್ರಧಾನಿ ನರೇಂದ್ರ ಮೋದಿ ಅವರು ನೆಮ್ಮದಿಯ ಭಾರತವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಅವರ ಜೊತೆ ನಾವೆಲ್ಲರೂ ಇದ್ದೇವೆ. ನೆಮ್ಮದಿಯ ಕರ್ನಾಟಕ, ನೆಮ್ಮದಿಯ ಭಾರತ ಖಂಡಿತ ನಿರ್ಮಾಣವಾಗಲಿದೆ' ಎಂದು ವಿಶ್ವಾಸ ವ್ಯಕ್ತಪಸಿದರು.

English summary
Shivamogga district Sorab assembly constituency BJP candidate Kumar Bangarapap shares his dream about Karnataka. In a video he said that Government should focus on providing water to all districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X