ಕೆ.ಎಸ್.ಈಶ್ವರಪ್ಪ ಕನಸಿನ ಕರ್ನಾಟಕ ಹೇಗಿರಬೇಕು?
Recommended Video
ಶಿವಮೊಗ್ಗ, ಮೇ 08 : 'ಪ್ರತಿ ವ್ಯಕ್ತಿಯು ನೆಮ್ಮದಿಯಿಂದ ಬಾಳುವಂತಹ ಕನಸಿನ ಕರ್ನಾಟಕ ನನ್ನದಾಗಬೇಕು' ಎಂದು ಶಿವಮೊಗ್ಗ ನಗರದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು, ಮಾಜಿ ಉಪ ಮುಖ್ಯಮಂತ್ರಿ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ
ಪ್ರಚಾರದ ಬ್ಯುಸಿಯ ನಡುವೆಯೂ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಅವರು ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಅಭಿಪ್ರಾಯ ಹಂಚಿಕೊಂಡರು. ಶಿವಮೊಗ್ಗ ಕ್ಷೇತ್ರದಲ್ಲಿನ ಚನಾವಣೆ ಸಿದ್ಧತೆ, ಜನರ ಪ್ರತಿಕ್ರಿಯೆ ಬಗ್ಗೆ ಸಂದರ್ಶನ ನೀಡಿದರು.
'ಪ್ರತಿ ವ್ಯಕ್ತಿಯು ನೆಮ್ಮದಿಯ ಬಾಳು ಬದುಕಬೇಕು. ಮನೆ, ಆಹಾರ, ಶಿಕ್ಷಣ ಎಲ್ಲಾ ಸೌಲಭ್ಯಗಳು ಸಿಗುವಂತಹ ವಸ್ಯಸ್ಥೆಗಳು ಆಗಬೇಕು. ಅಂತಹ ಕನಸಿನ ಕರ್ನಾಟಕ ನನ್ನದಾಗಬೇಕು' ಎಂದು ಈಶ್ವರಪ್ಪ ಹೇಳಿದರು.
ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?
'ಉತ್ತಮವಾದ ಸಾಂಸ್ಕೃತಿಕ, ಸಾಹಿತ್ಯದ ವಾತಾವರಣ ನಿರ್ಮಾಣವಾಗಬೇಕು. ನನ್ನ ಕನಸಿನ ಕರ್ನಾಟಕದಲ್ಲಿ ಎಲ್ಲಾ ವ್ಯಕ್ತಿಗಳಿಗೂ ಅಗತ್ಯ ಸೌಲಭ್ಯಗಳು ಸಿಗಬೇಕು' ಎಂದು ಈಶ್ವರಪ್ಪ ಅಭಿಪ್ರಾಯಹಂಚಿಕೊಂಡರು.