ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕಣಕ್ಕೆ ಇಳಿದ ಉಪ್ಪಿ ತೊರೆದ KPJP ಪಕ್ಷದ ಅಭ್ಯರ್ಥಿಗಳು

By Harshitha
|
Google Oneindia Kannada News

ಅಂದುಕೊಂಡಂತೆ ಆಗಿದ್ದರೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ) ಪಕ್ಷದಿಂದ ಈ ಬಾರಿಯ ಚುನಾವಣೆಗೆ ಸ್ಪರ್ಧಿ ಮಾಡಬೇಕಿತ್ತು. ಆದರೆ ಉಪ್ಪಿ ಲೆಕ್ಕಾಚಾರವೆಲ್ಲ ಉಲ್ಪಾ ಆಗಿ ಅವರೇ ಆ ಪಾರ್ಟಿಯಿಂದ ಹೊರ ಬಂದರು.

ಕರ್ನಾಟಕ ಚುನಾವಣೆಗೆ ಎಲ್ಲ ಪಕ್ಷಗಳು ಬಿಡುವಿಲ್ಲದೆ ಪ್ರಚಾರ ಮಾಡುತ್ತಿವೆ. ಹೀಗಿರುವಾಗ, ಕೆಪಿಜೆಪಿ ಪಕ್ಷ ಈ ಬಾರಿಯ ಚುನಾವಣೆಗೆ ಯಾವ ರೀತಿ ಸಿದ್ಧವಾಗಿದೆ ಎನ್ನುವ ಕುತೂಹಲ ಮೂಡಿದೆ. ಒಂದು ಕಡೆ ಉಪೇಂದ್ರ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಬಿಜಿ ಇದ್ದಾರೆ. ಉಪೇಂದ್ರ ಹೊರ ಬಂದ ಮೇಲೆ ಕೆಪಿಜೆಪಿಯ ಸ್ಥಿತಿ ಹೇಗಿದೆ ಎನ್ನುವ ಪ್ರಶ್ನೆ ಇನ್ನೊಂದು ಕಡೆ ಇದೆ.

ಉಪ್ಪಿ ಶುರು ಮಾಡುತ್ತಿದ್ದಾರೆ 'ಉತ್ತಮ ಪ್ರಜಾಕೀಯ ಪಾರ್ಟಿ'ಉಪ್ಪಿ ಶುರು ಮಾಡುತ್ತಿದ್ದಾರೆ 'ಉತ್ತಮ ಪ್ರಜಾಕೀಯ ಪಾರ್ಟಿ'

ಅಂದಹಾಗೆ, ಇದೀಗ ತಮ್ಮ ಚುನಾವಣೆಯ ತಯಾರಿಯ ಬಗ್ಗೆ ಸ್ವತಃ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ. ಮುಂದೆ ಓದಿ...

32 ಕ್ಷೇತ್ರದಿಂದ ಸ್ಪರ್ಧೆ

32 ಕ್ಷೇತ್ರದಿಂದ ಸ್ಪರ್ಧೆ

ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ 32 ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದೆ. ಮೊದಲು 60 ಜನರಿಗೆ ಬಿ ಫಾರಂ ನೀಡಿದ್ದು, ಆಮೇಲೆ 45 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಆಲೋಚನೆಯಲ್ಲಿ ಇದ್ದರಂತೆ. ಆದರೆ ಕೊನೆಗೆ 32 ಸ್ಪರ್ಧಿಗಳು ಫೈನಲ್ ಆದರಂತೆ.

13 ಜಿಲ್ಲೆಗಳಲ್ಲಿ ಸ್ಪರ್ಧೆ

13 ಜಿಲ್ಲೆಗಳಲ್ಲಿ ಸ್ಪರ್ಧೆ

ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಮುಖ್ಯವಾಗಿ ಬೆಂಗಳೂರನ್ನು ಗಮನ ಹರಿಸಿದೆ. 32 ಅಭ್ಯರ್ಥಿಗಳ ಪೈಕಿ ಬೆಂಗಳೂರಿನ 11 ಕ್ಷೇತ್ರದಲ್ಲಿ ಕೆಪಿಜೆಪಿ ಪಕ್ಷ ಸ್ಪರ್ಧೆ ಮಾಡಲಿದೆ. ಉಳಿದಂತೆ ಮುಖ್ಯವಾಗಿ ತುಮಕೂರುನಲ್ಲಿ 3 ಕ್ಷೇತ್ರ, ಮೈಸೂರು ಮತ್ತು ಮಂಡ್ಯದಲ್ಲಿ ತಲಾ 2 ಹಾಗೂ ದಾವಣಗೆರೆಯ 3 ಕ್ಷೇತ್ರದಿಂದ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ

ಡಾಕ್ಟರ್, ಇಂಜಿನಿಯರ್, ಲಾಯರ್ ಸಹ ಇದ್ದಾರೆ

ಡಾಕ್ಟರ್, ಇಂಜಿನಿಯರ್, ಲಾಯರ್ ಸಹ ಇದ್ದಾರೆ

ಕೆಪಿಜೆಪಿ ಪಕ್ಷದ ಅಭ್ಯರ್ಥಿಗಳಲ್ಲಿ ಡಾಕ್ಟರ್, ಇಂಜಿನಿಯರ್, ಲಾಯರ್, ಅಧ್ಯಾಪಕರು ಸಹ ಇದ್ದಾರಂತೆ. ತಮ್ಮ ತಮ್ಮ ಕ್ಷೇತ್ರದ ಬಗ್ಗೆ ಎಲ್ಲ ವಿಷಯವನ್ನು ತಿಳಿದುಕೊಂಡವರಿಗೆ ಟಿಕೆಟ್ ನೀಡಲಾಗಿದೆಯಂತೆ. ಪಕ್ಷದಲ್ಲಿ ಎಲ್ಲರ ಜೊತೆಗೆ ಮಾತುಕತೆ ನಡೆಸಿ ಸರಿ ಎನ್ನಿಸಿದವರಿಗೆ ಅವಕಾಶ ನೀಡಲಾಗಿದೆಯಂತೆ.

ಪ್ರಚಾರ ಚೆನ್ನಾಗಿ ನಡೆಯುತ್ತಿದೆ

ಪ್ರಚಾರ ಚೆನ್ನಾಗಿ ನಡೆಯುತ್ತಿದೆ

ಕೆಪಿಜೆಪಿ ಪಕ್ಷದ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ ಎಂದು ಮಹೇಶ್ ಗೌಡ ತಿಳಿಸಿದ್ದಾರೆ. ಈಗಾಗಲೇ ಅನೇಕ ವಿಧಾನಸಭೆ ಕ್ಷೇತ್ರಗಳಿಗೆ ಹೋಗಿದ್ದು, ಇಂದು ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಕಾರ್ಯಕ್ರಮ ಮಾಡಲಾಗುವುದಂತೆ. ನಾಳೆ ರಾಣೆಬೆನ್ನೂರಿನಲ್ಲಿ ಪ್ರಚಾರ ಕೆಲಸ ನಡೆಯಲಿದೆ.

ಉಪೇಂದ್ರ ಬಿಟ್ಟ ಮೇಲೆ ಯಾವುದು ಪರಿಣಾಮ ಆಗಿಲ್ಲ

ಉಪೇಂದ್ರ ಬಿಟ್ಟ ಮೇಲೆ ಯಾವುದು ಪರಿಣಾಮ ಆಗಿಲ್ಲ

''ಉಪೇಂದ್ರ ಅವರು ನಮ್ಮ ಪಕ್ಷದಿಂದ ಹೊರ ಹೋಗಿರುವುದು ನಮ್ಮ ಪಾರ್ಟಿಗೆ ಯಾವುದೇ ಪರಿಣಾಮ ಬೀರಿಲ್ಲ. ಅವರು ಪಕ್ಷ ಬಿಟ್ಟ ಮೇಲೆ ಅದು ನಮಗೆ ಒಳ್ಳೆಯದು ಆಗಿಲ್ಲ, ಕೆಟ್ಟದ್ದು ಆಗಿಲ್ಲ. ಈ ಬಾರಿ ಕರ್ನಾಟಕದ ಜನ ಬದಲಾವಣೆ ಬಯಸಿದ್ದಾರೆ. ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ಇಟ್ಟಿದ್ದಾರೆ. ಅದು ನಮಗೆ ಸಂತೋಷ ತಂದಿದೆ. ಚುನಾವಣೆಯಲ್ಲಿ ನಮ್ಮ ಪ್ರಯತ್ನ ನಾವು ಮಾಡುತ್ತ ಇದ್ದೇವೆ.'' ಎಂದು ಮಾತು ಮುಗಿಸಿದರು ಕೆಪಿಜೆಪಿಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ

English summary
Karnataka Election 2018 : Karnataka Pragnyavantha Janatha Party president Mahesh Gowda spoke about their preparation for election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X