ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 22: ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಭಾನುವಾರದಂದು ಪ್ರಕಟಿಸಿದೆ. ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದಾರೆ ಎಂಬುದು ಮುಖ್ಯವಾಗಿ ಈ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ.

ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಗೊಂದಲದ ಗೂಡಾಗಿದ್ದ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ.

ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಅಂತಿಮ ಪಟ್ಟಿ :
* ಕಿತ್ತೂರು : ಡಾ. ಬಿ ಇನಾಂದರ್
* ಬಾದಾಮಿ : ಸಿದ್ದರಾಮಯ್ಯ (ಡಾ. ದೇವರಾಜ್ ಪಾಟೀಲ್ ಬದಲಿಗೆ), ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
* ನಾಗಠಾಣ(ಎಸ್ ಸಿ) : ವಿಠಲ್ ಧೊಂಡಿಬಾ ಕಟಕದೊಂಡ
* ಸಿಂದಗಿ : ಮಲ್ಲಣ್ಣ ನಾಗಣ್ಣ ಸಾಲಿ

* ರಾಯಚೂರು : ಸೈಯದ್ ಯಾಸಿನ್
* ಜಗಳೂರು (ಎಸ್ ಟಿ): ಎಚ್. ಪಿ ರಾಜೇಶ್ (ಎ.ಎಲ್ ಪುಷ್ಪಾ ಬದಲಿಗೆ)

* ತಿಪಟೂರು : ಕೆ ಷಡಕ್ಷರಿ (ಬಿ ನಂಜಾಮರಿ ಬದಲಿಗೆ)
* ಮಲ್ಲೇಶ್ವರಂ : ಕೆಂಗಲ್ ಶ್ರೀಪಾದ ರೇಣು (ಎಂ. ಆರ್ ಸೀತಾರಾಮ್ ಬದಲಿಗೆ)
* ಶಾಂತಿನಗರ : ಎನ್. ಎ ಹ್ಯಾರೀಸ್.
* ಪದ್ಮನಾಭನಗರ: ಎಂ ಶ್ರೀನಿವಾಸ್ (ಬಿ ಗುರಪ್ಪ ನಾಯ್ಡು ಬದಲಿಗೆ)

* ಮಡಿಕೇರಿ : ಕೆ.ಪಿ ಚಂದ್ರಕಲಾ (ಎಚ್. ಎಸ್ ಚಂದ್ರಮೌಳಿ)

English summary
KPCC today(April 15) announced official list of candidates for Karnataka assembly elections 2018. The state assembly polls on 12th May and results will be declared on May 15, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X