ಕೋಟೆಗಳ ನಾಡು ಚಿತ್ರದುರ್ಗ ಇನ್ಮುಂದೆ ಬಿಜೆಪಿ ಭದ್ರಕೋಟೆ.!
ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿನ ಕಾಂಗ್ರೆಸ್ ಭದ್ರಕೋಟೆಯನ್ನ ಹೊಡೆದುರುಳಿಸುವಲ್ಲಿ ಬಿಜೆಪಿ ಪ್ಲಾನ್ ಸಕ್ಸಸ್ ಆಗಿದೆ. ಕಳೆದ ಬಾರಿ ನಾಲ್ಕು ಕಾಂಗ್ರೆಸ್ ಅಭ್ಯರ್ಥಿಗಳನ್ನು ಆರಿಸಿದ್ದ ಈ ಜಿಲ್ಲೆಯಲ್ಲಿ ಇದೀಗ ಬಿಜೆಪಿ ಪಕ್ಷದ್ದೇ ಪಾರುಪತ್ಯ.
ಆರು ಸ್ಥಾನಗಳಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಸ್ಥಾನಗಳು ಬಿಜೆಪಿ ಪಾಲಾಗಿವೆ. ಒಂದೇ ಒಂದು ಸ್ಥಾನ ಗಳಿಸುವಲ್ಲಿ ಮಾತ್ರ ಕಾಂಗ್ರೆಸ್ ಶಕ್ತವಾಗಿದೆ. ಮೊಳಕಾಲ್ಮೂರಿನ ಅದೃಷ್ಟ ಪರೀಕ್ಷೆಯಲ್ಲಿ ಶ್ರೀರಾಮುಲು ಪಾಸ್ ಆಗಿದ್ದಾರೆ.
ಗದಗ ಜಿಲ್ಲೆಯಲ್ಲಿ ಕಮಲ ಪಕ್ಷ ಮತ್ತೆ ಕಿಲ ಕಿಲ
ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಲಾಭವಾಗಿದೆ. ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಗೂಳಿಹಟ್ಟಿ ಶೇಖರ್ ಈ ಬಾರಿ ಕಮಲ ಹಿಡಿದು ಕಣಕ್ಕೆ ಇಳಿದಿದ್ದರಿಂದ ಗೆಲುವಿನ ನಗೆ ಬೀರಿದ್ದಾರೆ.
ಇನ್ನೂ ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಆಂಜಿನೇಯ ರವರಿಗೆ ಹೊಳಲ್ಕೆರೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಿಲ್ಲ.
ಚಿತ್ರದುರ್ಗ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:
ಕ್ಷೇತ್ರ | ಗೆದ್ದವರು | ಪಕ್ಷ | ಗಳಿಸಿದ ಮತಗಳು | ಸೋತವರು | ಪಕ್ಷ | ಗಳಿಸಿದ ಮತಗಳು |
ಮೊಳಕಾಲ್ಮೂರು |
ಬಿ.ಶ್ರೀರಾಮುಲು | ಬಿಜೆಪಿ |
84018 |
ಡಾ.ಬಿ.ಯೋಗೇಶ್
ಬಾಬು |
ಕಾಂಗ್ರೆಸ್ | 41973 |
ಚಳ್ಳಕೆರೆ | ಟಿ.ರಘುಮೂರ್ತಿ | ಕಾಂಗ್ರೆಸ್ | 72874 | ರವೀಶ್ ಕುಮಾರ್ | ಜೆಡಿಎಸ್ | 59335 |
ಚಿತ್ರದುರ್ಗ | ಜಿ.ಎಚ್.ತಿಪ್ಪರೆಡ್ಡಿ | ಬಿಜೆಪಿ | 82896 | ಕೆ.ಸಿ.ವೀರೇಂದ್ರ | ಜೆಡಿಎಸ್ | 49911 |
ಹಿರಿಯೂರು | ಕೆ.ಪೂರ್ಣಿಮ | ಬಿಜೆಪಿ | 77733 | ಡಿ.ಸುಧಾಕರ್ | ಕಾಂಗ್ರೆಸ್ | 64858 |
ಹೊಸದುರ್ಗ | ಗೂಳಿಹಟ್ಟಿ ಶೇಖರ್ | ಬಿಜೆಪಿ | 90562 | ಬಿಜಿ ಗೋವಿಂದಪ್ಪ | ಕಾಂಗ್ರೆಸ್ | 64570 |
ಹೊಳಲ್ಕೆರೆ | ಎಂ.ಚಂದ್ರಪ್ಪ | ಬಿಜೆಪಿ | 107976 | ಎಚ್.ಆಂಜನೇಯ | ಕಾಂಗ್ರೆಸ್ | 69036 |