ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಥಹಳ್ಳಿದಲ್ಲಿ ಅರಳಿದ ಕಮಲ, ಅರಗ ಜ್ಞಾನೇಂದ್ರಗೆ ಗೆಲುವು

By Mahesh
|
Google Oneindia Kannada News

ಬೆಂಗಳೂರು, ಮೇ 15 : ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಇದೀಗ ಹೊರ ಬಂದಿದೆ. ಸತತ ಎರಡು ಬಾರಿ ಸೋಲಿನ ನಂತರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಮಲ ಮತ್ತೆ ಅರಳಿದೆ. ಅರಗ ಜ್ಞಾನೇಂದ್ರ ಅವರು ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನ ಘೋಷಣೆಯಷ್ಟೆ ಬಾಕಿಯಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿ ಫಲಿತಾಂಶವನ್ನು ನೀಡಿತ್ತು. ಆದರೆ, ಮೇ 15ರ ಜನಾದೇಶದಲ್ಲಿ ಬಿಜೆಪಿಗೆ ಬಹುಮತ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

Karnataka election results 2018 : BJP Araga Jnanendra wins Thirthahalli

ದೆಹಲಿಯಲ್ಲಿ ನರೇಂದ್ರ, ತೀರ್ಥಹಳ್ಳಿಯಲ್ಲಿ ಜ್ಞಾನೇಂದ್ರ

ಈ ಸಮಯಕ್ಕೆ (10.35) ಬಿಜೆಪಿಯ ಅಭ್ಯರ್ಥಿ ಅರಗ ಜ್ಞಾನೇಂದ್ರ ಅವರಿಗೆ 21854 ಮತಗಳು ಬಂದಿದೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಅಭ್ಯರ್ಥಿ, ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ 15442 ಮತಗಳು ಬಂದಿವೆ. ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ನ ಆರ್ ಎಂ ಮಂಜುನಾಥಗೌಡ ಅವರು 12669 ಮತಗಳನ್ನು ಗಳಿಸಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಅರಗ ಜ್ಞಾನೇಂದ್ರ ಗೆಲುವು ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ. ಇನ್ನು ಎರಡು ಸುತ್ತಿನ ಎಣಿಕೆ ಮಾತ್ರ ಬಾಕಿಯಿದೆ.

English summary
Karnataka election results 2018 : BJP Araga Jnanendra registers his victory against Congress leader Kimmane Rathnakara in Thirthahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X