ಚಿಕ್ಕನಾಯಕನಹಳ್ಳಿ ಕ್ಷೇತ್ರ: ಕೊಬ್ಬರಿ- ಹೈನುಗಾರಿಕೆ ಜೀವಾಳ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯವಸಾಯ ಪ್ರಾಶಸ್ತ್ಯವಿರುವ, ಕೊಬ್ಬರಿಯಿಂದ ಆದಾಯ ನಿರೀಕ್ಷೆ ಮಾಡುವ, ಸಾಂಸ್ಕೃತಿಕವಾಗಿ ಚಟುವಟಿಕೆಯಿಂದ ಇರುವ ತಾಲೂಕು ಅಥವಾ ಕ್ಷೇತ್ರ. ಹೈನುಗಾರಿಕೆ- ಕುರಿ ಸಾಕಣೆಗೂ ಇಲ್ಲಿ ಪ್ರಾಶಸ್ತ್ಯವಿದೆ. ಜೆಡಿಎಸ್ ನ ಸಿ.ಬಿ.ಸುರೇಶ್ ಬಾಬು ಶಾಸಕರು. ಬಿಜೆಪಿಯಿಂದ ಇಲ್ಲಿ ಪೈಪೋಟಿ ನೀಡುವ ಎಲ್ಲ ಸಾಧ್ಯತೆ ಇದೆ.
ಆದರೆ, ಬಿಜೆಪಿ ಒಳಗೆ ಪರಿಹರಿಸಿಕೊಳ್ಳಬೇಕಾದ ಒಂದಿಷ್ಟು ಮನಸ್ತಾಪ- ಅಸಮಾಧಾನ ಇದೆ. ಇದು ಉಳಿದ ಕ್ಷೇತ್ರಗಳಲ್ಲೂ ಇರುವ ಕೆಜೆಪಿ- ಬಿಜೆಪಿಯ ಸಂಘರ್ಷ. ಜತೆಗೆ ಇಡೀ ತುಮಕೂರಿನ ಯಾವ ಕ್ಷೇತ್ರದಲ್ಲಿ ಗಮನಿಸಿದರೂ ಜೆಡಿಎಸ್- ಕಾಂಗ್ರೆಸ್ ನ ಹಣಾಹಣಿ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣ್ಣು ಕೋರೈಸುವ ಬೆಳಕು, ಕೆಲವೆಡೆ ಕತ್ತಲು
ಜೆ.ಸಿ.ಮಾಧುಸ್ವಾಮಿ ಅವರ ಕಾರಣಕ್ಕೆ ಬಿಜೆಪಿಯ ಪಾಲಿಗೆ ಇಲ್ಲೊಂದು ಹೋರಾಟದ ಭರವಸೆ ಇದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯದಂಥ ಸಮಸ್ಯೆ ಈ ಕ್ಷೇತ್ರದ ಜನರ ಪಾಲಿಗೆ ಅಗತ್ಯದಂತೆ ಕಂಡುಬಂದರೆ, ಪಶುವೈದ್ಯಕೀಯ ವ್ಯವಸ್ಥೆ ತುರ್ತಾಗಿ ಮಾಡಿಕೊಡಬೇಕಾದ ಅನುಕೂಲ.
ಸಚಿವರಾದ ಟಿ.ಬಿ.ಜಯಚಂದ್ರ ಮಗ ಸಂತೋಷ್ ಜಯಚಂದ್ರ ಇಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಆಗಿದ್ದಾರೆ. ಈ ಕ್ಷೇತ್ರದ ಮೇಲೆ ಜಯಚಂದ್ರ ಅವರ ಹಿಡಿತ ಸ್ವಲ್ಪ ಮಟ್ಟಿಗೆ ಇರುವುದರಿಂದ ತಮ್ಮ ಮಗನನ್ನು ಇಲ್ಲಿಂದ ಕಣಕ್ಕೆ ಇಳಿಸಿದ್ದಾರೆ. ಆದರೂ ಇಲ್ಲಿ ಮಾಧುಸ್ವಾಮಿ ಹಾಗೂ ಸುರೇಶ್ ಬಾಬು ಮಧ್ಯೆ ಹಣಾಹಣಿ ಎಂದು ಜನ ಮಾತನಾಡುತ್ತಾರೆ.
ಕೊರಟಗೆರೆ ಕ್ಷೇತ್ರದಲ್ಲಿ ಲಕ್ಷ್ಮಿದೇವಿ ದೇವಾಲಯ ಫೇಮಸ್, ಸೌಕರ್ಯ ಮೈನಸ್
ಸಾಹಿತ್ಯಕ್ಕೂ ಹೆಸರಾದ ಈ ತಾಲೂಕಿನಲ್ಲಿ ರಸ್ತೆ, ನೀರು ಮುಂತಾದ ಮೂಲ ಸೌಕರ್ಯಕ್ಕೆ ಸಮಸ್ಯೆಗಳಿವೆ. ಇನ್ನು ಜಾತಿ ಸಂಘರ್ಷಗಳು ಸಹ ಆಗಾಗ ಕಾಣಿಸಿಕೊಂಡಿದ್ದಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜನರ ಒಅಲವು ಯಾರ ಕಡೆಗೋ ಎಂಬ ಕುತೂಹಲ ಅಂತೂ ಇದ್ದೇ ಇದೆ.