ನರಸಿಂಹರಾಜ : ತನ್ವೀರ್ ಸೇಠ್ಗೆ ಮತ್ತೆ ಗೆಲುವು?
ರಾಜಕೀಯ ಮಹತ್ವ : ರಾಜಕೀಯ ಮುತ್ಸದ್ಧಿಯಾಗಿದ್ದ ಅಜೀಜ್ ಸೇಠ್ ಅವರ ಪುತ್ರ ತನ್ವೀರ್ ಸೇಠ್ (ಚಿತ್ರದಲ್ಲಿರುವವರು) ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. ಹ್ಯಾಟ್ರಿಕ್ ಬಾರಿಸಿರುವ ತನ್ವೀರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಪ್ರಮುಖ ಸ್ಪರ್ಧಿಗಳು : ತನ್ವೀರ್ ಸೇಠ್ಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಮಾರುತಿರಾವ್ ಪವಾರ್, ಬಿ.ಪಿ ಮಂಜುನಾಥ್ ಆಕಾಂಕ್ಷಿಗಳು. ಜೆಡಿಎಸ್ನಿಂದ ಸಂದೇಶ್ಸ್ವಾಮಿ ಸ್ಪರ್ಧಿಸುವ ಸಂಭವ ಇದೆ.
ಗೆಲುವಿನ ಲೆಕ್ಕಾಚಾರ : ಮುಸ್ಲಿಮರ ಪ್ರಭಾವ ಇರುವ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷ 3 ಕಡೆ ಗೆದ್ದಿದೆ. ಆ ಪಕ್ಷವೇನಾದರೂ ಮತ ವಿಭಜನೆ ಮಾಡಿದರೆ ತನ್ವೀರ್ಗೆ ಹಿನ್ನಡೆ ಸಂಭವ. ಆದ್ರೂ ಮುಸ್ಲಿಂರು ತಮ್ಮನ್ನು ಕೈ ಬಿಡಲ್ಲ ಅನ್ನೋದೆ ಸೇಠ್ ಲೆಕ್ಕಾಚಾರ. ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡಿರೋ ಎಸ್ಡಿಪಿಐ ಮುಸ್ಲಿಂ ಮತಗಳನ್ನು ವಿಭಜಿಸೋ ಕಾರಣ ಜೆಡಿಎಸ್ಗೆ ಅನುಕೂಲವಾಗಬಹುದು ಎಂಬ ಲೆಕ್ಕ ಜೆಡಿಎಸ್ ನಲ್ಲಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಳಿಸಿದ ಮತಗಳ : ಒಟ್ಟು ವಾರ್ಡ್ ಸಂಖ್ಯೆ - 21. ಕಾಂಗ್ರೆಸ್ಗೆ - 38,023 ಮತ, ಬಿಜೆಪಿ - 9,854 ಮತಗಳು, ಜೆಡಿಎಸ್ - 28,854 ಮತಗಳು, ಎಸ್ಡಿಪಿಐ - 11,535 ಮತಗಳು ಪಡೆದಿವೆ.
ಮತದಾರರ ವಿವರ
ಪುರುಷ ಮತದಾರರು - 94,187
ಮಹಿಳಾ ಮತದಾರರು - 94,645
ಒಟ್ಟು ಮತದಾರರು - 188,832
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ