ಮಹಾಲಕ್ಷ್ಮಿ ಲೇಔಟ್: ಮತ್ತೆ ನೆಲ ಬಾಬುಗೆ ಜಯ?
* ಸಾಧನೆಗಳು: ಮೂಲತಃ ಬಿಬಿಎಂಪಿ ಸದಸ್ಯರು. 2004ರಲ್ಲಿ ರಾಜಾಜಿನಗರದಿಂದ ನಂತರ 2008ರಲ್ಲಿ ಮಹಾಲಕ್ಷ್ಮಿ ಲೇಔಟ್ ಗೆದ್ದುಬಂದಿದ್ದಾರೆ. ಯುವಜನತೆಗೆ ಆಪ್ತರು. ಆಟದ ಮೈದಾನ, ಪಾರ್ಕು ಅಭಿವೃದ್ಧಿಯಿಂದಾಗಿ ಯುವಜನತೆ ಒಕ್ಕೊರಲಿನಿಂದ ಬಾಬುಗೇ ಜೈ ಎನ್ನುತ್ತಾರೆ. ಸಾಂಸ್ಕೃತಿಕ ನೆಲಗಟ್ಟಿನಲ್ಲೂ ನೆಲ ಬಾಬು ಜನಮನ್ನಣೆ ಗಳಿಸಿದ್ದಾರೆ. ಆದರೆ ಆಡಳಿತಾರೂಢ ಬಿಜೆಪಿ ತಾರತಮ್ಯತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಕೈಗೂಡಿಲ್ಲ. ಎಲ್ಲ ಕಡೆಗಳಿಂದಲೂ ಸಮಾನ ಗೌರವಕ್ಕೆ ಪಾತ್ರರು. ಮೂಲಸೌಕರ್ಯ, ಸಾರಿಗೆ, ಪೊಲೀಸ್, ಟ್ರಾಫಿಕ್, ಆಸ್ಪತ್ರೆ ಪರವಾಗಿಲ್ಲ.
* ಸಮಸ್ಯೆಗಳು: ಕ್ಷೇತ್ರ ವಿಶಾಲವಾಗಿದ್ದು, ಸಮಸ್ಯೆಗಳೂ ಇದಾವೆ. ಮುಖ್ಯವಾಗಿ ಮೂಲಸೌಕರ್ಯ, ಕಾನೂನು ಸುವ್ಯವಸ್ಥೆ ಮತ್ತಷ್ಟು ಸುಧಾರಿಸಬೇಕಿದೆ.
* ವಾರ್ಡ್: ನಂದಿನಿ ಲೇ ಔಟ್, ಮಾರಪ್ಪನ ಪಾಳ್ಯ, ನಾಗಪುರ, ಮಹಾಲಕ್ಷ್ಮಿ ಪುರ, ಶಕ್ತಿ ಗಣಪತಿ ನಗರ, ಶಂಕರ ಮಠ, ವೃಷಭಾವತಿ ನಗರ
* ಮತದಾರರ ಸಂಖ್ಯೆ: 2,18,552. ಕಳೆದ ಬಾರಿ ವೋಟ್ ಮಾಡಿದವರು ಶೇ. 52ರಷ್ಟು ಮಂದಿ. ಅದರಲ್ಲಿ ಎನ್ಎಲ್ ನರೇಂದ್ರ ಬಾಬು ಮತ ಗಳಿಕೆ ಪ್ರಮಾಣ ಶೇ. 38.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ