ವಿಜಯನಗರ ವಿಧಾನಸಭಾ ಕ್ಷೇತ್ರದ ಪರಿಚಯ
* ಸಾಧನೆಗಳು: ಮೇಲ್ಮನೆ ಸದಸ್ಯರಾಗಿದ್ದವರು ಲೋಕಸಭೆಗೆ ನಿಂತು ಪರಾಭವಗೊಂಡಿದ್ದರು. ಸೋಮಣ್ಣ 2008ರಲ್ಲಿ ಗೋವಿಂದರಾಜ ನಗರ ಆರಿಸಿಕೊಂಡಿದ್ದರಿಂದ ವಿಜಯನಗರ ತೆರವಾದಾಗ ನಿರಾಯಾಸವಾಗಿ ಗೆದ್ದು ಬಂದರು. ಚಂದ್ರಲೇ ಔಟ್ ವಾಟರ್ ಟ್ಯಾಂಕ್ ಅಭಿವೃದ್ಧಿಪಡಿಸಲಾಗಿದೆ.
ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಒಂದಷ್ಟು ಪ್ರಗತಿ ಸಾಧಿಸಿದ್ದಾರೆ. 130 ಕೋಟಿ ರೂ.ಗಳ ಘೋಷಿತ ಆದಾಯದ ಶ್ರೀಮಂತ ಪ್ರತಿನಿಧಿ. ಅಪ್ಪ-ಮಗ ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಬಿಡಾರಬಿಟ್ಟಿರುವುದರಿಂದ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.
* ಸಮಸ್ಯೆಗಳು: ಕಾನೂನು ಸುವ್ಯವಸ್ಥೆಯದ್ದೇ ಆತಂಕ. ಶಾಸಕರಾಗಿ ಜನರ ಬಳಿಗೆ ತಲುಪುತ್ತಿಲ್ಲ ಎಂಬ ಮಾತಿದೆ.
* ವಾರ್ಡ್: ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಅತ್ತಿಗುಪ್ಪೆ, ಹಂಪಿ ನಗರ, ಬಾಪೂಜಿ ನಗರ, ಗಾಳಿ ಆಂಜನೇಯ ದೇವಸ್ಥಾನ, ದೀಪಾಂಜಲಿ ನಗರ,
* ಮತದಾರರ ಸಂಖ್ಯೆ: 2,53,321. ಕಳೆದ ಬಾರಿ ವೋಟ್ ಮಾಡಿದವರು ಶೇ. 44ರಷ್ಟು ಮಂದಿ. ಅದರಲ್ಲಿ ಎಂ ಕೃಷ್ಣಪ್ಪ ಮತ ಗಳಿಕೆ ಪ್ರಮಾಣ ಶೇ. 65.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ