ವರುಣ ಕ್ಷೇತ್ರ : ಕಾಂಗ್ರೆಸ್ಸಿಗೆ ಸುಲಭ ಗೆಲುವು ಕಷ್ಟ
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಮತ್ಯಾರೂ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಳೆದ ಬಾರಿ ಇದೇ ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು.ಆದರೆ, ಕಾಲ ಬದಲಾಗಿದೆ. ಹಾಗೆಯೇ, ಸಿದ್ದರಾಮಯ್ಯ ಅವರ ಮನಸ್ಸೂ ಬದಲಾಯಿಸಿದ್ದಾರೆ, ಕ್ಷೇತ್ರವೂ ಬದಲಾಗಿದೆ.
'ವರುಣಾ'ದಲ್ಲಿ ಗೆಲ್ಲುವವರ್ಯಾರು..?
ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಚುನಾವಣಾ ತಂತ್ರಗಾರಿಕೆಗಳನ್ನು, ಪ್ರಚಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಅವರ ಪುತ್ರ ರಾಕೇಶ್ ಈಗ ಇಲ್ಲ. ಹಾಗಾಗಿ, ಇಲ್ಲಿ ಅವರ ಮತ್ತೊಬ್ಬ ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯ ಅವರಿಗೆ ಇಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಿದೆ. ಈ ವರ್ಷ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಅವರಾಗಲೇ ಇಲ್ಲಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಆದರೆ, ಇಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಮುಖವಾದ ಸವಾಲೆಂದರೆ, ನಂಜನಗೂಡಿನ ಕೆಲ ಗ್ರಾಮಗಳು, ವರುಣಾ ಕ್ಷೇತ್ರಕ್ಕೂ ಸೇರುವುದು. ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅವರು ಪ್ರಭಾವ ಬೀರಿದರೆ, ಅದು ಈ ಗ್ರಾಮಗಳ ಮೇಲೂ ಪರಿಣಾಮ ಬೀರಬಹುದು. ಇದೇ ಕುತೂಹಲದ ವಿಚಾರ. ಏನೇ ಆಗಲಿ, ಕಾಂಗ್ರೆಸ್ ಅಭ್ಯರ್ಥಿಗೆ ಈ ಕ್ಷೇತ್ರದಲ್ಲಿ ಗೆಲ್ಲುವುದು ಕಳೆದ ಬಾರಿಯಷ್ಟು ಸುಲಭವಲ್ಲ ಎಂದಷ್ಟೇ ಹೇಳಬಹುದು.
ಬಿಜೆಪಿಯಿಂದ ಅಭ್ಯರ್ಥಿ ಘೋಷಣೆಯಾಗಿಲ್ಲದಿದ್ದರೂ ಈ ಬಾರಿ ಸಿದ್ದಲಿಂಗಸ್ವಾಮಿ ಬದಲಿಗೆ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ನಿಂದ ಎಸ್ ಅಭಿಷೇಕ್ ಕಣಕ್ಕಿಳಿಯಲಿದ್ದಾರೆ.
2013ರ ಫಲಿತಾಂಶ : ಕಳೆದ ಚುನಾವಣೆಯಲ್ಲಿ ಶೇ 82.43ರಷ್ಟು ಮತದಾನವಾಗಿತ್ತು. ಸಿದ್ದರಾಮಯ್ಯ ಅವರು ಗಳಿಸಿದ್ದು 84,217 ಮತಗಳಾದರೆ, ಬಿಜೆಪಿಯ ಕಾಪು ಸಿದ್ದಲಿಂಗ ಸ್ವಾಮಿ ಅವರು 54, 601 ಮತಗಳು. 29,641 ಮತಗಳ (ಶೇ 18.45ರಷ್ಟು) ಅಂತರದಿಂದ ಸಿದ್ದರಾಮಯ್ಯ ಅವರು ಜಯ ದಾಖಲಿಸಿದರು.