ಟಿ. ನರಸೀಪುರ ಕ್ಷೇತ್ರ : ಕಾಂಗ್ರೆಸ್ಸಿಗೆ ಗೆಲುವು ಕಷ್ಟ ಕಷ್ಟ?
Recommended Video
ಕಾವೇರಿ ಕಪಿಲೆ ಸಂಗಮ ಸ್ಥಳ, ಪುಣ್ಯಕ್ಷೇತ್ರ ತಿರುಮ ಕೂಡಲು ನರಸೀಪುರದಲ್ಲಿ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂ.ಸಿ. ಮಹದೇವಪ್ಪ ಅವರ ಮತ್ತೆ ಕಣಕ್ಕಿಯುವುದು ಅನುಮಾನ. ಈ ಚುನಾವಣೆಗೆ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
ಮೀಸಲು ಕ್ಷೇತ್ರವಾಗಿರುವ ಇಲ್ಲಿ ಸಚಿವ ಮಹದೇವಪ್ಪ ಅವರಿಗಿಂತ ಅವರ ಪುತ್ರನ ಪ್ರಭಾವವೇ ಹೆಚ್ಚು. ಈಗಾಗಲೇ ಅವರ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಕೆಲವಾರು ಆರೋಪಗಳಲ್ಲಿ ಅಕ್ರಮ ಮರಳು ದಂಧೆಯ ಆರೋಪ ಪ್ರಮುಖವಾದದ್ದು. ನ್ಯಾಯಾಲಯದ ಮೆಟ್ಟಿಲೇರಿರುವ ಈ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಅವರಿಗೆ ಶಿಕ್ಷೆಯೂ ಆಗಬಹುದು ಎಂಬ ಭೀತಿಯಿಂದಲೆ ಕಣಕ್ಕಿಳಿಯಬೇಕಿದೆ.
ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ
ಈ ವಿಚಾರವೇ, ಈ ಕ್ಷೇತ್ರದ ಜನತೆಯು ಎಂ.ಸಿ. ಮಹದೇವಪ್ಪ ಹಾಗೂ ಅವರ ಪುತ್ರನ ವಿರುದ್ಧ ಅಸಮಾಧಾನಗೊಳ್ಳಲು ಕಾರಣ. ಅಲ್ಲದೆ, ಶ್ರೀನಿವಾಸ್ ಪ್ರಸಾದ್ ಅವರ ವಿರುದ್ಧ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು ಯತ್ನಿಸಿದ್ದು ಈ ಕ್ಷೇತ್ರದ ದಲಿತರು ಅಪ್ಪ-ಮಗನ ವಿರುದ್ಧ ಕಿಡಿ ಕಾರುವಂತಾಗಿದೆ.
ತಿ.ನರಸೀಪುರದಲ್ಲಿ ಶಂಕರ್, ಸುನೀಲ್ ನಡುವೆ ಜಿದ್ದಾಜಿದ್ದಿ
ಇದರ ಲಾಭವಾಗಿರುವುದು ಜೆಡಿಎಸ್ ಗೆ. ಆ ಪಕ್ಷದ ಸುಂದರೇಶನ್ ಅಥವಾ ಅವರ ಪುತ್ರ ಸಾಮ್ರಾಟ್ ಗೆ ಅವಕಾಶ ಹೆಚ್ಚಿದೆ. ಇನ್ನು ಬಿಜೆಪಿಯ ಭಾರತೀ ಶಂಕರ್ ಅವರು ಅದೇ ಪಕ್ಷದಿಂದ ಟಿಕೆಟ್ ಪಡೆಯುವುದು ಅನುಮಾನವಾಗಿರುವುದರಿಂದ ಅವರು ಅದೇ ಪಕ್ಷದಲ್ಲಿರುತ್ತಾರೋ ಅಥವಾ ಬೇರೆ ಪಕ್ಷ ಸೇರುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ. ಈ ಎಲ್ಲವನ್ನೂ ಗಮನಿಸಿ ನೋಡುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಈ ಬಾರಿ ಗೆಲುವು ಕಷ್ಟ.
2013ರ ಫಲಿತಾಂಶ: 2013ರಲ್ಲಿ ಶೇ 75.23ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಡಾ. ಎಚ್. ಸಿ ಮಹದೇವಪ್ಪ್ ಅವರು 53,219 ಮತಗಳನ್ನು ಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಎಂ.ಸಿ ಸುಂದರೇಶನ್ 52896 ಮತಗಳನ್ನು ಗಳಿಸಿ 323(ಶೇ0.24) ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.