ಕ್ಷೇತ್ರ ಪರಿಚಯ : ಶಿಗ್ಗಾಂವ್ನಲ್ಲಿ ಗೆಲ್ಲುವವರು ಯಾರು?
ಹಾವೇರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಶಿಗ್ಗಾಂವ್ ಅಥವ ಶಿಗ್ಗಾವಿ. ಶಿಗ್ಗಾಂವ್ ಮೊದಲು ಧಾರವಾಡ ಜಿಲ್ಲೆಯ ಭಾಗವಾಗಿತ್ತು. 1997-98ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜನೆ ಮಾಡಿದ ಸಂದರ್ಭದಲ್ಲಿ ಏಳು ತಾಲೂಕುಗಳನ್ನು ಸೇರಿಸಿ ಹಾವೇರಿ ಜಿಲ್ಲೆ ರಚನೆ ಮಾಡಲಾಯಿತು.
ಕರ್ನಾಟಕದ ಕಬೀರ್ ದಾಸ್ ಎಂದು ಕರೆಯಲಾಗುವ ಸಂತ ಶಿಶುನಾಳ ಶರೀಫರು ಜನಿಸಿದ ಕ್ಷೇತ್ರವಿದು. ಕ್ಷೇತ್ರವೂ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇರುವುದರಿಂದ ಸಾರಿಗೆ ಸಂಪರ್ಕದ ಕೊರತೆ ಇಲ್ಲ.
ಕ್ಷೇತ್ರ ಪರಿಚಯ ಹಾನಗಲ್ನಲ್ಲಿ ಗೆಲ್ಲುವುದು ಯಾರು?
ಧಾರವಾಡ, ಸವಣೂರು, ಹಾನಗಲ್ ತಾಲೂಕುಗಳು ಶಿಗ್ಗಾವಿಯ ಅಕ್ಕ-ಪಕ್ಕದಲ್ಲಿವೆ. ಕ್ಷೇತ್ರದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಉತ್ತಮ ನೀರಾವರಿ ಸೌಲಭ್ಯ ಕ್ಷೇತ್ರಕ್ಕಿದೆ.
ರಾಜಕೀಯವಾಗಿ ಮಾಜಿ ಸಚಿವ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಪ್ರಮುಖ ನಾಯಕರು. ಕಳೆದ ಚುನಾವಣೆಯಲ್ಲಿ 73,007 ಮತಗಳನ್ನು ಪಡೆದು ಅವರು ಕಾಂಗ್ರೆಸ್ನ ಸೈಯದ್ ಅಜೀಂಪೀರ್ ಅವರನ್ನು ಸೋಲಿಸಿದ್ದಾರೆ.
ಕ್ಷೇತ್ರ ಪರಿಚಯ : ರಾಣೆಬೆನ್ನೂರಿನಲ್ಲಿ ಗೆಲುವಿನ ಸಿಹಿ ಯಾರಿಗೆ?
ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಬಸವರಾಜ ಬೊಮ್ಮಾಯಿ ಅವರು 2008ರಲ್ಲಿ ಬಿಜೆಪಿ ಸೇರಿದರು. ಕ್ಷೇತ್ರದಲ್ಲಿ ಜಯಗಳಿಸಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ರಾಜಕೀಯದ ಪಾಠಗಳನ್ನು ಚೆನ್ನಾಗಿ ಕಲಿತಿರುವ ಬೊಮ್ಮಾಯಿ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ.
ಕ್ಷೇತ್ರ ಪರಿಚಯ : ದುರ್ಗಾದೇವಿಯ ಕೃಪೆಯಿಂದ ಯಾರಿಗೆ ಜಯ?
ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಂಜುನಾಥ ಕುನ್ನೂರ್ ಬಿಜೆಪಿ ಸೇರಿರುವುದು ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಶಕ್ತಿ ಹೆಚ್ಚುವಂತೆ ಮಾಡಿದೆ. ಕಾಂಗ್ರೆಸ್ನಿಂದ ಸೈಯದ್ ಅಜೀಂಪೀರ್ ಈ ಬಾರಿಯೂ ಟಿಕೆಟ್ ಪಡೆಯುವುದು ಖಚಿತ.
ಕ್ಷೇತ್ರ ಪರಿಚಯ : ಕೆಂಪು ಮೆಣಸಿನ ಕಾಯಿ ನಾಡಲ್ಲಿ ಯಾರಿಗೆ ಗೆಲುವು!
2013ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ 73,007 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಸೈಯದ್ ಅಜೀಂಪೀರ್ ಅವರು 63,504 ಮತ, ಜೆಡಿಎಸ್ನ ಸುಮಂಗಲ ಕಡಪ್ಪ ಮೈಸೂರು 1,531 ಮತಗಳನ್ನು ಪಡೆದಿದ್ದರು.