ಕ್ಷೇತ್ರ ಪರಿಚಯ : ದುರ್ಗಾದೇವಿಯ ಕೃಪೆಯಿಂದ ಯಾರಿಗೆ ಜಯ?
ಹಾವೇರಿ ಜಿಲ್ಲೆಯ ಕಟ್ಟಕಡೆಯ ಗ್ರಾಮ ಹಿರೇಕೆರೂರು. ಹಿಂದೆ ಬನವಾಸಿನಾಡಿಗೆ ಸೇರಿದ್ದ 'ಪಿರಿಯಕೆರೆಯೂರು 12 ಹಳ್ಳಿಗಳ ಆಡಳಿತದ ಕೇಂದ್ರ ವಾಗಿತ್ತು. ಈಗ ಅದು ಹಿರೇಕೆರೂರು ಆಗಿದೆ. ಇದೊಂದು ಪ್ರಮುಖ ವಾಣಿಜ್ಯ ಕೇಂದ್ರವೂ ಹೌದು.
ಕ್ಷೇತ್ರದ ಪ್ರಮುಖ ಆಕರ್ಷಣೆ ಹೆಗ್ಗೇರಿಕೆರೆ. ಕೆರೆಯ ಸಮೀಪ ದುರ್ಗಾ ದೇವಿಯ ದೇವಾಲಯವಿದೆ. ಮರಾಠರು ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ದೇವಿಗೆ ಆಭರಣಗಳನ್ನು ನೀಡಿದ್ದಾರೆ ಎನ್ನುತ್ತದೆ ಇತಿಹಾಸ.
ಕ್ಷೇತ್ರ ಪರಿಚಯ : ಕೆಂಪು ಮೆಣಸಿನ ಕಾಯಿ ನಾಡಲ್ಲಿ ಯಾರಿಗೆ ಗೆಲುವು!
ತರಕಾರಿ ಬೆಳೆಗಳಿಗೆ ಹಿರೇಕೆರೂರು ಪ್ರಸಿದ್ಧಿ ಪಡೆದಿದೆ. ವಿವಿಧ ತಳಿಯ ತರಕಾರಿ ಬೀಜಗಳು ಇಲ್ಲಿ ಸಿಗುತ್ತವೆ. ದುರ್ಗಾದೇವಿ ಕೆರೆಗೆ (ಹೆಗ್ಗೇರಿ ಕೆರೆ) ಕುಮದ್ವತಿ ನದಿಯಿಂದ ನೀರು ಹರಿಸುವ ಯೋಜನೆ, ತುಂಗಭದ್ರಾ ನದಿಯಿಂದ ಗುಡ್ಡದ ಮಾದಾಪುರ ಕೆರೆಗೆ ನೀರು ತುಂಬಿಸುವ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿರುವ ರೆಟ್ಟೆಹಳ್ಳಿಯನ್ನು ಹೊಸ ತಾಲೂಕಾಗಿ ಘೋಷಣೆ ಮಾಡಲಾಗಿದೆ. ಲಿಂಗಾಯಿತ ಸಾದರು ಶಾಸಕರು ಯಾರಾಗಬೇಕು? ಎಂದು ನಿರ್ಧರಿಸುವ ಕ್ಷೇತ್ರವಿದರು.
ಮಾಜಿ ಪೊಲೀಸ್ ಅಧಿಕಾರಿಯ ಸ್ಪರ್ಧೆಯಿಂದ ಕ್ಷೇತ್ರ ಭಾರೀ ಸುದ್ದಿ ಮಾಡಿತ್ತು. 2004ರ ಚುನಾವಣೆಲ್ಲಿ ಪೊಲೀಸ್ ಉದ್ಯೋಗ ತೊರೆದು ಬಿ.ಸಿ.ಪಾಟೀಲ್ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
2008ರಲ್ಲಿ ಕಾಂಗ್ರೆಸ್ ಮೂಲಕ ಗೆದ್ದು ಬಂದಿದ್ದರು. ಆದರೆ, 2013ರ ಚುನಾವಣೆಯಲ್ಲಿ ಕೌರವ ಖ್ಯಾತಿಯ ಬಿ.ಸಿ.ಪಾಟೀಲ್ ಸೋಲು ಕಂಡಿದ್ದರು. ಕೆಜೆಪಿಯ ಯು.ಬಿ.ಬಣಕರ್ ಗೆಲುವು ಕಂಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ಅವರು ಗೆಲ್ಲಲೇಬೇಕು ಎಂದು ಹಠ ತೊಟ್ಟಿದ್ದಾರೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಸಿಗುವುದು ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿ.ಸಿ.ಪಾಟೀಲ್ ಆಪ್ತರು ಹೌದು.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಪಾಲಾಕ್ಷ ಗೌಡ ಪಾಟೀಲ್ ಸ್ಪರ್ಧಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಜೆಡಿಎಸ್ ಅಭ್ಯರ್ಥಿಯಾಗಿ ಕಳೆದ ಬಾರಿ ಸ್ಪರ್ಧಿಸಿದ್ದ ಧರ್ಮರಾಜ ಎಂ.ಸಾಲಿ 8ನೇ ಸ್ಥಾನಕ್ಕೆ ಕುಸಿದಿದ್ದರು.
2013ರ ಚುನಾವಣೆಯಲ್ಲಿ ಯು.ಬಿ.ಬಣಕಾರ್ 52,623, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಿ.ಎಸ್.ಪಾಟೀಲ್ 50,017, ಬಿಜೆಪಿಯಿಂದ ಸ್ಪರ್ಧಿಸಿದ್ದ ಪಾಲಾಕ್ಷ ಗೌಡ ಪಾಟೀಲ್ 3,177, ಜೆಡಿಎಸ್ನ ಧರ್ಮರಾಜ್ ಎಂ.ಸಾಲಿ 1885 ಮತಗಳನ್ನು ಪಡೆದಿದ್ದರು.