ಸರ್ವಜ್ಞನಗರ ಕ್ಷೇತ್ರ ಪರಿಚಯ: ಜಾರ್ಜ್ ಹ್ಯಾಟ್ರಿಕ್ ಕನಸಿಗೆ ಬೀಳುತ್ತಾ ಕಡಿವಾಣ?
ಕನ್ನಡದ ಮಹಾಕವಿ ಸರ್ವಜ್ಞನ ಹೆಸರನ್ನು ಹೊಂದಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ವಿರಳ. ನೆರೆಯ ರಾಜ್ಯಗಳಿಂದ ವಲಸೆ ಬಂದ ಜನರೇ ಇಲ್ಲಿನ ನಿವಾಸಿಗಳು. ತಮಿಳು ಮತ್ತು ಉರ್ದು ಭಾಷಿಕರು ಇಲ್ಲಿ ಹೆಚ್ಚಿದ್ದಾರೆ. ಆಧುನಿಕತೆಯ ಬೆಡಗು ಮತ್ತು ಬಡತನದ ಕೊರಗು ಎರಡಕ್ಕೂ ಸಮ ಪ್ರಮಾಣದಲ್ಲಿ ಜಾಗ ಕಲ್ಪಿಸಿರುವ ಸರ್ವಜ್ಞನಗರ ಕ್ಷೇತ್ರ, ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಕೆಲ ಸಮಯದಿಂದ ಚರ್ಚೆಯಲ್ಲಿದೆ.
ಮಲ್ಲೇಶ್ವರಂನಲ್ಲಿ ಕಮಲದ ಕಂಪು ಮತ್ತೆ ಹರಡುವುದೇ?
ಇಲ್ಲಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ನ ಸಚಿವ ಕೆ.ಜೆ. ಜಾರ್ಜ್, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿವಾದ ಸೇರಿದಂತೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಜಾರ್ಜ್ ವಿರುದ್ಧದ ಹೋರಾಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಈ ಬಾರಿ ಅವರನ್ನು ಸೋಲಿಸಲೇಬೇಕೆಂಬ ಪಣತೊಟ್ಟಿದೆ. ಆದರೆ, ಅಲ್ಪಸಂಖ್ಯಾತರು ಮತ್ತು ಕಾಂಗ್ರೆಸ್ ಮತಗಳು ಹೆಚ್ಚಿರುವ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದು ಬಿಜೆಪಿಗೆ ಸುಲಭವಲ್ಲ.
ವಾರ್ಡ್ಗಳು: ನಾಗವಾರ, ಎಚ್ಬಿಆರ್ ಲೇಔಟ್, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಮತ್ತು ಮಾರುತಿ ಸೇವಾನಗರ ಈ ವಿಧಾನಸಭಾ ಕ್ಷೇತ್ರದಲ್ಲಿರುವ ವಾರ್ಡ್ಗಳಾಗಿವೆ. ಎಂಟು 4ವಾರ್ಡ್ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ವಾರ್ಡ್ಗಳಲ್ಲಿ ಅಧಿಕಾರದಲ್ಲಿವೆ. ಹೀಗಾಗಿ ಎರಡು ಪಕ್ಷಗಳ ನಡುವೆ ಪೈಪೋಟಿ ನಿರೀಕ್ಷಿಸಬಹುದು.
2013ರಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ನ ಅನ್ವರ್ ಷರೀಫ್ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಎಎಪಿಯ ಪೃಥ್ವಿ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಪದ್ಮನಾಭ ರೆಡ್ಡಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಬಯಸಿದ್ದರೂ, ಅವರು ಸ್ಪರ್ಧಿಸಲು ನಿರಾಕರಿಸಿದ್ದಾರೆ.
ಸಮಸ್ಯೆಗಳು:
ಕಮ್ಮನಹಳ್ಳಿ,
ಮಾರುತಿಸೇವಾನಗರ,
ಬಾಣಸವಾಡಿ,
ಎಚ್ಬಿಆರ್
ಲೇಔಟ್
ಮುಂತಾದವುಗಳಲ್ಲಿ
ಸಿರಿವಂತರು
ಹಾಗೂ
ಮಧ್ಯಮವರ್ಗದ
ಜನರು
ಹೆಚ್ಚಿದ್ದಾರೆ.
ದೊಡ್ಡಮಟ್ಟದ
ವ್ಯಾಪಾರ
ವಹಿವಾಟು
ಈ
ಪ್ರದೇಶಗಳಲ್ಲಿ
ನಡೆಯುತ್ತದೆ.
ಈಗಲೂ
ನೆರೆಯ
ರಾಜ್ಯಗಳಿಂದ
ಕೆಲಸ
ಅರಸಿ
ಬರುವ
ಹೆಚ್ಚಿನ
ಮಂದಿ
ಆಶ್ರಯ
ಪಡೆದುಕೊಳ್ಳುವುದು
ಈ
ಭಾಗದಲ್ಲಿಯೇ.
ಹೆಬ್ಬಾಳ ಕ್ಷೇತ್ರದಲ್ಲಿ ಸಮಸ್ಯೆಗಳೇ ಚುನಾವಣಾ ವಸ್ತು
ಥಳಕು ಬಳುಕಿನ ಜಗತ್ತಿಗೂ ತೆರೆದುಕೊಂಡಿರುವ ಇಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ಜನಸಂಖ್ಯೆ ಒತ್ತಡ, ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಸಂಚಾರ ದಟ್ಟಣೆ, ಕುಡಿಯುವ ನೀರಿನ ತತ್ವಾರ ಹೀಗೆ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ.
ಲಿಂಗರಾಜಪುರ, ಕಾಡುಗೊಂಡನಹಳ್ಳಿ, ನಾಗವಾರ, ವೆಂಕಟೇಶನಗರ ಮುಂತಾದವುಗಳಲ್ಲಿನ ಅವ್ಯವಸ್ಥೆ, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.
ವಿಧಾನಸಭಾ
ಕ್ಷೇತ್ರ
ಸಂಖ್ಯೆ:
160
ಹಾಲಿ
ಶಾಸಕ:
ಕೆ.ಜೆ.
ಜಾರ್ಜ್
(ಕಾಂಗ್ರೆಸ್).
ಸೋತ
ಅಭ್ಯರ್ಥಿ:
ಆರ್.
ಶಂಕರ್
(ಬಿಜೆಪಿ)
2013ರ
ಫಲಿತಾಂಶ:
ಕೆ.ಜೆ.
ಜಾರ್ಜ್
45,488
ಮತ
ಪಡೆದಿದ್ದರೆ,
ಬಿಜೆಪಿಯ
ಆರ್.
ಶಂಕರ್
22,880
ಮತ
ಗಳಿಸಿದ್ದರು.
ಒಟ್ಟಾರೆ
ಮತ
ಪ್ರಮಾಣದಲ್ಲಿ
ಶೇ
42.14,
ಜಾರ್ಜ್
ಪಾಲಾಗಿದ್ದರೆ,
ಶಂಕರ್
ಅವರು
ಶೇ
21.2
ಪ್ರಮಾಣದ
ಮತಗಳನ್ನು
ಪಡೆದಿದ್ದರು.
ಕ್ಷೇತ್ರದ ಮತದಾರರ ವಿವರ: ಪುರುಷರು: 1,69,651, ಮಹಿಳೆಯರು: 1,64,730, ಇತರೆ: 39 , ಒಟ್ಟು: 3,34420