ಬೆಂಗಳೂರಿನ ಕೆಆರ್ ಪುರದಲ್ಲಿ ಮತ್ತೆ ಕಮಲ ಅರಳುವುದೇ?
ಕೃಷ್ಣರಾಜಪುರ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಡಿ ಸಂಚಾರ ಸಮಸ್ಯೆ ನೀಗಲು ಮೇಲ್ಸೇತುವೆ, ರಸ್ತೆ ರಿಪೇರಿ ಮುಂತಾದ ಕಾರ್ಯಕ್ರಮಗಳು ತಕ್ಕಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ. ಆದರೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕ್ಷೇತ್ರ ಬಳಲುತ್ತಿದೆ.
*
ವಿಧಾನಸಭಾ
ಕ್ಷೇತ್ರ
ಸಂಖ್ಯೆ
151
ಹಾಲಿ
ಶಾಸಕ-
ಬಿ.ಎ
ಬಸವರಾಜ
(ಕಾಂಗ್ರೆಸ್)
ಸೋತ
ಅಭ್ಯರ್ಥಿ
ಎನ್.
ಎಸ್
ನಂದೀಶ
ರೆಡ್ಡಿ
(ಬಿಜೆಪಿ)
* ಸಮಸ್ಯೆಗಳು: ಬೆಂಗಳೂರು ದಕ್ಷಿಣ ಕ್ಷೇತ್ರದ ನಂತರ ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮನವಿ ಕೂಡಾ ಇದೆ. ಮತದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮಸ್ಯೆಗಳೂ ಹಾಗಿಯೇ ಇವೆ. ಹೊಸಕೋಟೆ ಮಾರ್ಗವಾಗಿ ಹೆದ್ದಾರಿ ಇರುವುದರಿಂದ ಸಂಚಾರ ಸಮಸ್ಯೆ ಇದೆ. ಪೊಲೀಸ್ ವ್ಯವಸ್ಥೆ ಸುಧಾರಿಸಬೇಕಾಗಿದೆ. ಇನ್ನು ಕುಡಿಯುವ ನೀರು ಸಮಸ್ಯೆ ಹಾಗೆಯೇ ಇದೆ. ರೇಶನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಲು ಜನ ಪರದಾಡುತ್ತಿದ್ದಾರೆ. ಆದರೆ ಶಾಸಕರು ಇದರತ್ತ ತಲೆ ಹಾಕಿಲ್ಲ. ನಕಲಿ ಕಾರ್ಡ್ ಬಳಕೆ ಬಗ್ಗೆ ಇತ್ತೀಚೆಗೆ ಭಾರಿ ಗದ್ದಲ ಏರ್ಪಟ್ಟಿತ್ತು.
2013ರ
ಫಲಿತಾಂಶ:
*
ವಾರ್ಡ್:
ಹೊರಮಾವು,
ರಾಮಮೂರ್ತಿ
ನಗರ,
ವಿಜ್ಞಾನ
ಪುರ,
ಕೆಆರ್
ಪುರಂ,
ಬಸವನ
ಪುರ,
ದೇವಸಂದ್ರ,
ಎ
ನಾರಾಯಣ
ಪುರ,
ವಿಜ್ಞಾನನಗರ,
ಎಚ್ಎಎಲ್
ಏರ್
ಪೋರ್ಟ್
* ಮತದಾರರ ಸಂಖ್ಯೆ: 339866.
ಕಳೆದ ಬಾರಿ 29 ಮಂದಿ ನಾಮಪತ್ರ ಸಲ್ಲಿಸಿದ್ದರು, 3 ನಾಮಪತ್ರ ತಿರಸ್ಕೃತಗೊಂಡಿತ್ತು. 4 ಮಂದಿ ವಿಥ್ ಡ್ರಾ ಮಾಡಿಕೊಂಡರು.22 ಮಂದಿ ಸ್ಪರ್ಧಿಸಿದ್ದರು.
ಕಳೆದ ಬಾರಿ ವೋಟ್ ಮಾಡಿದವರು ಶೇ. 5891ರಷ್ಟು ಮಂದಿ. 200184 ಮತಗಳ ಪೈಕಿ ಭೈರತಿ ಬಸವರಾಜ್ ಅವರು 106299 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು. ಬಿಜೆಪಿಯ ನಂದೀಶ್ ರೆಡ್ಡಿ ಅವರು 82298ರಷ್ಟು ಮತ ಪಡೆದು 11.99% (24001 ಮತಗಳು) ಅಂತರದಿಂದ ಸೋಲು ಕಂಡಿದ್ದರು.
ಈ ಬಾರಿ ಕೂಡಾ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಹಾಲಿ ಶಾಸಕರ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆಸಿ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದರೂ ನಂದೀಶ್ ರೆಡ್ಡಿ ಅವರಿಗೆ ನಿರಾಶೆಯಾಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ನಿಂದ ಗೋಪಾಲ್ ಕಣಕ್ಕಿಳಿಯುತ್ತಿದ್ದಾರೆ.