ಹೆಬ್ಬಾಳ ಕ್ಷೇತ್ರದಲ್ಲಿ ಸಮಸ್ಯೆಗಳೇ ಚುನಾವಣಾ ವಸ್ತು
ಹೆಬ್ಬಾಳ ಕ್ಷೇತ್ರ ಐದು ವರ್ಷದ ಅವಧಿಯಲ್ಲಿ ಇಬ್ಬರು ಶಾಸಕರನ್ನು ಕಂಡಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ್ ಕುಮಾರ್ ಅವರು ಅಕಾಲಿಕ ಮರಣಕ್ಕೆ ತುತ್ತಾದ ನಂತರ 2016ರಲ್ಲಿ ಉಪಚುನಾವಣೆ ನಡೆದು ಮತ್ತೆ ಬಿಜೆಪಿಯ ಡಾ.ವೈ.ಎನಾರಾಯಣಸ್ವಾಮಿ ಅವರು ಶಾಸಕರಾಗಿ ಆಯ್ಕೆಯಾಗಿ ಇದ್ದ ಅಲ್ಪ ಸಮಯದಲ್ಲೇ ಕೆಲವಷ್ಟಾದರೂ ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಈ ಬಾರಿ ಬಿಜೆಪಿಯಿಂದ ಮತ್ತೆ ವೈ.ಎ.ನಾರಾಯಣಸ್ವಾಮಿ ಅವರು ಪುನರ್ಆಯ್ಕೆ ಬಯಸಿದ್ದು, ಕಾಂಗ್ರೆಸ್ನಿಂದ ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಬ್ಬಾಳವೂ ಜಿದ್ದಾಜಿದ್ದಿನ ಕಣಗಳಲ್ಲಿ ಒಂದಾಗಿದೆ. ಇಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಜೆಡಿಎಸ್ನಿಂದ ಹನುಮಂತೇಗೌಡ ಕಣಕ್ಕಿಳಿಯಲಿದ್ದಾರೆ.
ಹೆಬ್ಬಾಳದಲ್ಲಿ ಮತದಾರರ ಆಶೀರ್ವಾದ ನನ್ನ ಮೇಲಿದೆ: ನಾರಾಯಣಸ್ವಾಮಿ
ಕ್ಷೇತ್ರದ ಸಮಸ್ಯೆಗಳು: ಇಲ್ಲಿನ ಪ್ರಮುಖ ಸಮಸ್ಯೆ ಸ್ವಚ್ಚತೆ, ಜನ ವಸತಿ ಪ್ರದೇಶದ ಬಳಿಯಿಂದಲೇ ರೈಲ್ವೆ ಹಳಿ ಹಾದು ಹೋಗಿರುವುದು ಸ್ವಚ್ಛತೆ ಕಾಪಾಡಲು ಇರುವ ಬಹುದೊಡ್ಡ ಸಮಸ್ಯೆ ಆದರೆ ಇದರಲ್ಲಿ ಶಾಸಕರು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಉಳಿದಂತೆ ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಇದೆ. ಗಾಂಜಾ ಮಾರಾಟ ಅವ್ಯಾಹತವಾಗಿ ಸಾಗುತ್ತಿದೆ. ಡ್ರಾಗ್ ರೇಸರ್ಗಳ ಹಾವಳಿಯೂ ಹೆಚ್ಚು. ಸಂಚಾರ ದಟ್ಟಣೆ ಸಹ ಮತ್ತೊಂದು ಪ್ರಮುಖ ಸಮಸ್ಯೆ.
ವಿಧಾನಸಭಾ
ಕ್ಷೇತ್ರ
ಸಂಖ್ಯೆ:
158
ಹಾಲಿ
ಶಾಸಕ:
ಡಾ.ವೈ.ಎನ್.ನಾರಾಯಣಸ್ವಾಮಿ.
ಸೋತ
ಅಭ್ಯರ್ಥಿ:
ಅಬ್ದುಲ್
ರಹಮಾನ್
ಷರೀಫ್.
ವಾರ್ಡ್: ರಾಧಾಕೃಷ್ಣ ಟೆಂಪಲ್ ವಾರ್ಡ್, ಸಂಜಯನಗರ, ಗಂಗಾನಗರ, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಮನೋಹರ ಪಾಳ್ಯ, ಗಂಗೇನಹಳ್ಳಿ, ಜಯಚಾಮರಾಜೇಂದ್ರ ನಗರ.
ಮತದಾರರ ಸಂಖ್ಯೆ: 2,43,068. 2013ರ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮತ-1,15,540. ಗೆದ್ದ ಅಭ್ಯರ್ಥಿ ಪಡೆದಿದ್ದ ಮತ- 38,162. ಸೋತ ಅಭ್ಯರ್ಥಿ ಪಡೆದ ಮತ-33,026.