ಕೂಡ್ಲಿಗಿ ಕ್ಷೇತ್ರ ಪರಿಚಯ : ವಲಸಿಗರ ನಡುವೆ ಕದನ?
ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿ ಬಿ. ನಾಗೇಂದ್ರ. ಬಳ್ಳಾರಿಯ ಶ್ರೀರಾಮುಲು ಆಪ್ತರು. ಈ ಹಿಂದೆ, ಬಿಜೆಪಿಯಿಂದಲೇ ಇಲ್ಲಿ ಸ್ಪರ್ಧಿಸಿ ಗೆಲವು ಕಂಡಿದ್ದರು. ಹಲವಾರು ಜನಪರ ಕೆಲಸಗಳನ್ನು ಮಾಡಿದ್ದರೂ, ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಎದ್ದ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಆದರೆ, ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಲು ಬೆಂಗಳೂರು ಮೂಲದ ಲೋಕೇಶ್ ನಾಯ್ಕ, ಕೋಡಿಹಳ್ಳಿ ಭೀಮಣ್ಣ ಪ್ರಯತ್ನಿಸುತ್ತಿದ್ದಾರೆ. ಇಬ್ಬರೂ ಪ್ರಭಾವಿಗಳೇ. ಹಾಗಾಗಿ, ಇವರಲ್ಲೊಬ್ಬರಿಗೆ ಟಿಕೆಟ್ ಸಿಕ್ಕಿದರೆ ಕಾಂಗ್ರೆಸ್ ಗೆಲುವು ನಿಶ್ಚಿತವೆಂದು ಹೇಳಲಾಗುತ್ತಿದೆ.
ಸದ್ಯದ ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿ ಬಿ. ನಾಗೇಂದ್ರ. ಬಳ್ಳಾರಿಯ ಶ್ರೀರಾಮುಲು ಆಪ್ತರು. ಈ ಹಿಂದೆ, ಬಿಜೆಪಿಯಿಂದಲೇ ಇಲ್ಲಿ ಸ್ಪರ್ಧಿಸಿ ಗೆಲವು ಕಂಡಿದ್ದರು.
ಆದರೆ, ರಾಮುಲು ಅವರು ಬಿಜೆಪಿ ತೊರೆದು ಬಿಆರ್ ಎಸ್ ಪಕ್ಷ ಕಟ್ಟಿ, ಆನಂತರ ಅವರು ಮತ್ತೆ ಬಿಜೆಪಿಗೆ ಕಾಲಿಟ್ಟ ಕಾಲಘಟ್ಟದಲ್ಲಿ ಯಾವ ಪಕ್ಷಕ್ಕೂ ಸೇರದೇ ಸ್ವತಂತ್ರವಾಗಿದ್ದವರು. ಹಾಗೆಂದ ಮಾತ್ರಕ್ಕೆ ಅವರ ಹಾಗೂ ರಾಮುಲು ನಡುವಿನ ಸ್ನೇಹ ಹದಗೆಟ್ಟಿದೆಯೆಂದಲ್ಲ. ಈಗಲೂ ಅವರಿಬ್ಬರ ಒಡನಾಟ ಚೆನ್ನಾಗಿಯೇ ಇತ್ತು.
ಆದರೆ, ಈಗ ಕೂಡ್ಲಿಗಿ ತೊರೆದು, ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ವಲಸೆ ಬಂದು ಶ್ರೀರಾಮುಲು ವಿರುದ್ಧವೇ ಸ್ಪರ್ಧಿಸುವ ಸಾಧ್ಯತೆಗಳು ಇವೆ.
ಹಲವಾರು ಜನಪರ ಕೆಲಸಗಳನ್ನು ಮಾಡಿದ್ದರೂ, ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಎದ್ದಿರುವುದು ಅವರಿಗೆ ಕೊಂಚ ಹಿನ್ನಡೆ ತರಬಹುದು. ಕಾಂಗ್ರೆಸ್ ಪರವಾಗಿರುವ ಸನ್ನಿವೇಶದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಲು ಬೆಂಗಳೂರು ಮೂಲದ ಲೋಕೇಶ್ ನಾಯ್ಕ, ಕೋಡಿಹಳ್ಳಿ ಭೀಮಣ್ಣ ಪ್ರಯತ್ನಿಸುತ್ತಿದ್ದಾರೆ. ಇಬ್ಬರೂ ಪ್ರಭಾವಿಗಳೇ. ಹಾಗಾಗಿ, ಇವರಲ್ಲೊಬ್ಬರಿಗೆ ಟಿಕೆಟ್ ಸಿಕ್ಕಿದರೆ ಕಾಂಗ್ರೆಸ್ ಗೆಲುವು ನಿಶ್ಚಿತವೆಂದು ಹೇಳಲಾಗುತ್ತಿದೆ.
ಆಡಳಿತ ಪಕ್ಷದ ಪರವಾಗಿ ಈ ಇಬ್ಬರಲ್ಲೊಬ್ಬರು ಕಣಕ್ಕಿಳಿದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಾಗೇಂದ್ರ ಮುಂದಾಗಿದ್ದರು. ಆದರೆ, ಈಗ ಅಧಿಕೃತವಾಗಿ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆ ಎದುರಿಸುವ ಸಾಧ್ಯತೆಯಿದೆ.