ಕಂಪ್ಲಿ ಕ್ಷೇತ್ರ : ಶ್ರೀರಾಮುಲು ಅಳಿಯ ಸುರೇಶ್ ಗೆಲುವಿನ ನಿರೀಕ್ಷೆ
ಕಂಪ್ಲಿ ಕ್ಷೇತ್ರದ ಶಾಸಕರಾಗಿರುವುದು ಶ್ರೀರಾಮುಲು ಅಳಿಯ ಸುರೇಶ್ ಬಾಬು. ಅವರು ಬಿಆರ್ ಎಸ್ ಪಕ್ಷದಿಂದಲೇ ಗೆದ್ದು ಶಾಸಕರಾಗಿದ್ದಾರೆ. ಆದರೆ, ಈವರೆಗೂ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿಲ್ಲ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಆದರೆ, ಚುನಾವಣೆ ಹತ್ತಿರದಲ್ಲಿ ಅವರು ಬಿಜೆಪಿ ಪಕ್ಷ ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಬಿಜೆಪಿ ಬದಲಿಗೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯನ್ನು ಸುರೇಶ್ ಬಾಬು ತಳ್ಳಿ ಹಾಕಿದ್ದಾರೆ.
ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಭಾವ ತೀರಾ ಕಡಿಮೆ. ಹಾಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಂಪ್ಲಿಯಲ್ಲಿ ಮತ್ತೆ ಬಿಜೆಪಿ ಬಾವುಟ ಹಾರುವುದು ನಿಶ್ಚಿತವಾಗಿರಲಿದೆ.
ಸಿದ್ದರಾಮಯ್ಯ ವಿರುದ್ಧ ತೋಳೇರಿಸಿದ್ದ ಸುರೇಶ್ ಬಾಬು ಕೈ ಪಾಲು?
ಇತ್ತೀಚಿನ ವರ್ಷಗಳಲ್ಲಿ ರಾಮುಲು ಅವರೇ ಇಲ್ಲಿ ಪ್ರಾಬಲ್ಯ ಸಾಧಿಸಿರುವುದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ವರ್ಚಸ್ಸು ಅಗಾಧವಾಗಿಯೇ ಬೆಳೆದಿದೆ. ಇದರ ಫಲವಾಗಿ, ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಭಾವ ತೀರಾ ಕಡಿಮೆ. ಹಾಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಂಪ್ಲಿಯಲ್ಲಿ ಮತ್ತೆ ಬಿಜೆಪಿ ಬಾವುಟ ಹಾರುವುದು ನಿಶ್ಚಿತವಾಗಿರಲಿದೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
2013ರ ಫಲಿತಾಂಶ : 2013ರಲ್ಲಿ ಶೇ 76.98ರಷ್ಟು ಮತದಾನವಾಗಿತ್ತು. ಬಿಎಸ್ ಆರ್ ಕಾಂಗ್ರೆಸ್ಸಿನ ಟಿ.ಎಚ್ ಸುರೇಶ್ ಬಾಬು 70,858 ಮತಗಳನ್ನು ಪಡೆದುಕೊಂಡರೆ, ಎದುರಾಳಿ ಪಕ್ಷೇತರ ಅಭ್ಯರ್ಥಿ ಜಿ.ಎನ್ ಗಣೇಶ್ ಅವರು 36,462 ಮತಗಳನ್ನು ಪಡೆದು ಶೇ 24.52 ರಷ್ಟು (34, 396 ಮತಗಳು) ಅಂತರದಿಂದ ಸೋಲು ಕಂಡರು.