ಕ್ಷೇತ್ರ ಪರಿಚಯ: ಬೆಳಗಾವಿ ಉತ್ತರದ ಗದ್ದುಗೆ ಯಾರ ಪಾಲಿಗೆ?
ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾದ ಬೆಳಗಾವಿಗೆ ರಾಜ್ಯದ ಎರಡನೇ ರಾಜಧಾನಿ ಎಂಬ ಅನೌಪಚಾರಿಕ ಬಿರುದೂ ಇದೆ.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರೂ, ಶೌರ್ಯದ ಪ್ರತೀಕವೂ ಆದ ರಾಣಿ ಚೆನ್ನಮ್ಮ - ಸಂಗೊಳ್ಳಿ ರಾಯಣ್ಣರಿಂದ ಖ್ಯಾತಿ ಪಡೆದ ಕಿತ್ತೂರು ಸಹ ಬೆಳಗಾವಿಯಲ್ಲಿಯೇ ಇದೆ ಎಂಬುದು ಜಿಲ್ಲೆಗೆ ಮತ್ತೊಂದು ಗರಿ.
ಕ್ಷೇತ್ರ ಪರಿಚಯ : ಗೋಕಾಕ್ನಲ್ಲಿ ಯಾರಿಗೆ ಗೆಲುವಿನ ಕರದಂಟು?
ಇಲ್ಲಿನ ರಾಜಕೀಯ ಇತಿಹಾಸದ ಬಗ್ಗೆ ಮಾತನಾಡುವುದಾದರೆ, ಸದ್ಯ ಚರ್ಚೆಯಲ್ಲಿರು ಕ್ಷೇತ್ರಗಳಲ್ಲಿ ಇದೂ ಒಂದು. ಪ್ರಸ್ತುತ ಇಲ್ಲಿ ಕಾಂಗ್ರೆಸ್ಸಿನ ಫಿರೋಜ ಸೇಠ್ ಶಾಸಕರಾಗಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಕಗಳಾಗಿದ್ದರೂ, ಸಮಸ್ಯೆಗಳೂ ಅಷ್ಟೇ ಇವೆ. ಮಹಾನಗರ ಪಾಲಿಕೆ ಎಮ್ ಇ ಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ) ಹಿಡಿತದಲ್ಲಿದೆ. ಅವರಿಗೂ ಇವರಿಗೂ ಹೊಂದಾಣಿಕೆ ಕೊರತೆ ಇರುವುದರಿಂದ ಈ ಕ್ಷೇತ್ರದಲ್ಲಿ ಆಗಾಗ ಕೋಮು ಗಲಭೆಗಳು ನಡೆಯುತ್ತಲೇ ಇವೆ. ಇಲ್ಲಿನ ಶಾಸಕರ ತಾರತಮ್ಯ ಧೋರಣೆ ಬಗ್ಗೆ ಹಲವರಲ್ಲಿ ಅಸಮಾಧಾನವಿದೆ.
ಹೀಗಾಗಿ ಈ ಚುನಾವಣೆಯಲ್ಲಿ ಇವರಿಗೆ ಗೆಲುವಿನ ಅವಕಾಶವಿದ್ದರೂ ಇವರನ್ನ ಸೋಲಿಸುವುದಕ್ಕೆ ಯಾವ್ಯಾವ ರೀತಿಯ ಪಿತೂರಿಗಳು ನಡೆಯುತ್ತವೆಯೋ ಹೇಳುವುದು ಕಷ್ಟ. ಬಿಜೆಪಿಯಲ್ಲಿ ಕೂಡ ಟಿಕೇಟ್ ಗೊಂದಲವಿದ್ದು, ಅದು ಕೂಡ ನಿವಾರಣೆ ಆಗಬೇಕಿದೆ. ಎಮ್ ಇ ಎಸ್ ಕಾದು ನೋಡುವ ತಂತ್ರದಲ್ಲಿದೆ. ಮರಾಠಿ ಪ್ರಭಾವ ಹೆಚ್ಚಿರುವುದು ಸಹ ಇಲ್ಲಿ ಗಮನೀಯ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
2013
ರ
ವಿಧಾನಸಭಾ
ಚುನಾವಣೆಯಲ್ಲಿ
ಗೆದ್ದವರು:
ಫಿರೋಜ
ಸೇಠ್
-ಕಾಂಗ್ರೆಸ್-45125
ಮತಗಳು
ರೇಣು
ಸುಹಾಸ್
ಕಿಲ್ಕರ್-ಪಕ್ಷೇತರ-26915
ಮತಗಳು
ಕಿರಣ್
ಮಾರುತಿ
ಜಾಧವ್-ಬಿಜೆಪಿ-17456
ಮತಗಳು