ಎಲ್ಲಾ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡಲು, ಬ್ರಹ್ಮಾಸ್ತ್ರ ಬಳಸಿ
ಭಾರತದ ಚುನಾವಣೆಯಲ್ಲಿ ನಕಾರಾತ್ಮಕ ಮತದಾನ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಮತಯಂತ್ರಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ 2013ರಲ್ಲೇ ನಿರ್ದೇಶಿಸಲಾಗಿದೆ.
ಆದರೆ, ಇದರ ಜತೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಆಗ್ರಹಿಸಿರುವ right to reject ಬಗ್ಗೆ ಗೊಂದಲವಿದ್ದೇ ಇದೆ. ಕರ್ನಾಟಕದ ವಿಧಾನಸಭೆ ಚುನಾವಣೆ 2018ರಲ್ಲಿ ನೆಗಟಿವ್ ವೋಟಿಂಗ್ ಪರಿಣಾಮ ಬೀರಬಹುದೇ? ರಿಜೆಕ್ಟ್ ಮಾಡುವ ಆಯ್ಕೆ ನೀಡಬೇಕೇ? ಓದುಗರೇ ಪ್ರತಿಕ್ರಿಯಿಸಿ..
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು.
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಮತಯಂತ್ರಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊಸ ವಿನ್ಯಾಸದೊಂದಿಗೆ ಮತಯಂತ್ರ ನೀಡುವ ಸಾಧ್ಯತೆಯಿದೆ.
49 ಒ ನಿಯಮ ಬಳಕೆ, ಗೊಂದಲ ಮುಂದುವರೆದಿದೆ
ಕುತೂಹಲದ ಸಂಗತಿ ಎಂದರೆ ಕರ್ನಾಟಕದಲ್ಲಿ ಕಳೆದೆರಡು ಅಸೆಂಬ್ಲಿ ಚುನಾವಣೆಯಲ್ಲಿ 49 ಒ ನಿಯಮ ಬಳಕೆ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅರ್ಜಿ ನಮೂನೆ ಗೊಂದಲದ ಕಾರಣ ಅನೇಕ ಮತದಾರರು ಇಷ್ಟವಿಲ್ಲದಿದ್ದರೂ ಕಡ್ಡಾಯ ಮತದಾನ ಮಾಡಬೇಕಾಯಿತು.2011 ರಲ್ಲೇ 49 ಒ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿದರೂ 2013 ರಲ್ಲೂ ಇನ್ನೂ ಗೊಂದಲ ಮುಂದುವರೆದಿತ್ತು. ಅದರೆ, ಸುಪ್ರೀಂಕೋರ್ಟ್ ನೀಡಿರುವ ಮೇಲ್ಕಂಡ ಆದೇಶದಿಂದ ಗೊಂದಲ ನಿವಾರಣೆಯಾಗಲಿದೆ.
ಅಭ್ಯರ್ಥಿಯನ್ನು ನಿರಾಕರಿಸುವ ಹಕ್ಕು
*
ಸದ್ಯದ
ವ್ಯವಸ್ಥೆಯಲ್ಲೂ
ಅಭ್ಯರ್ಥಿಯನ್ನು
ನಿರಾಕರಿಸುವ
ಹಕ್ಕು
ಇದೆಯಾದರೂ
ಅಭ್ಯರ್ಥಿ
ತಿರಸ್ಕರಿಸುವ
ಮತದಾರನ
ಗೌಪ್ಯತೆ
ಉಳಿಸಿಕೊಳ್ಳಲಾಗುತ್ತಿಲ್ಲ.
*
ಈ
ಮತದಾನ
ಮಾಡಬೇಕಾದರೆ
ಯಾವ
ಕಾರಣಕ್ಕಾಗಿ
ಯಾವ
ಅಭ್ಯರ್ಥಿಯೂ
ಹಿಡಿಸಿಲ್ಲ
ಎಂದು
ನಮೂದಿಸಬೇಕು
ಮತದಾರನ
ಹೆಸರು
ವಿಳಾಸವನ್ನು
ಚುನಾವಣಾ
ಆಯೋಗ
ಗುಪ್ತವಾಗಿರಿಸುತ್ತಿಲ್ಲ.
* ರಿಜೆಕ್ಟ್ ಆದ ಮತಗಳನ್ನು ಮತ ಎಣಿಕೆ ಸಂದರ್ಭದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಕೂಡಾ ಸ್ಪಷ್ಟತೆ ಇಲ್ಲ. ಶೇ 40ಕ್ಕಿಂತ ಹೆಚ್ಚು ಮತಗಳು ನಿರಾಕರಣೆ ಮತಗಳಾಗಿದ್ದರೆ ಅಥವಾ ಇಬ್ಬರು ಅಭ್ಯರ್ಥಿಗಳ ಎಣಿಕೆ ಟೈ ಆದರೆ ಮಾತ್ರ ಪರಿಶೀಲಿಸಲಾಗುತ್ತಿದೆ.
ರೈಟ್ ಟು ರೀಕಾಲ್ ಗೆ ಬೆಲೆ ಸಿಕ್ಕಿಲ್ಲ
*
ಸಾಮಾಜಿಕ
ಕಾರ್ಯಕರ್ತರಾದ
ಅಣ್ಣಾ
ಹಜಾರೆ,
ದೆಹಲಿ
ಸಿಎಂ
ಅರವಿಂದ್
ಕೇಜ್ರಿವಾಲ
ಅವರು
ನಕರಾತ್ಮಕ
ಮತದಾನ(right
to
reject)
ಹಾಗೂ
ವ್ಯರ್ಥ
ಜನಪ್ರತಿನಿಧಿ
ಹಿಂದಕ್ಕೆ
ಕರೆಸಿಕೊಳ್ಳುವುದು(right
to
recall)
ಜಾರಿಗೆ
ತರಲು
ಶ್ರಮಿಸಿದವರಾಗಿದ್ದಾರೆ.
*
right
to
recall
ಬಗ್ಗೆ
ಸ್ಪಷ್ಟತೆ
ಇಲ್ಲದ
ಕಾರಣ
ಇನ್ನೂ
ಚರ್ಚೆ
ನಡೆಯುತ್ತಲೇ
ಇದೆ.
right
to
reject
ಗೆ
ಸದ್ಯಕ್ಕೆ
ಬೆಲೆ
ಸಿಕ್ಕಿದೆ.
ಕಾಂಗ್ರೆಸ್ಸಿನಿಂದ ಮೊದಲಿನಿಂದಲೂ ವಿರೋಧ
ಯುಪಿಎ ಸರ್ಕಾರವಿದ್ದಾಗನಿಂದಲೂ ಮತ ನಿರಾಕರಣೆ ವ್ಯವಸ್ಥೆಯನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿದೆ. ಚುನಾವಣೆ ಎಂದರೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ತಿರಸ್ಕರಿಸುವ ಪ್ರಕ್ರಿಯೆ ಅಲ್ಲ. ಹೊಸ ಬಟನ್ ಗೊಂದಲ ಮೂಡಿಸುತ್ತದೆ ಎಂದು ಪ್ರತಿ ಪಾದಿಸಿದೆ. ಆದರೆ, ಕೆಲವು ಕಾಂಗ್ರೆಸ್ ಶಾಸಕರು ಈ ವ್ಯವಸ್ಥೆಯನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಾರೆ.