ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯ

By Mahesh
|
Google Oneindia Kannada News

ಉಡುಪಿ, ಏಪ್ರಿಲ್ 04: ಕರಾವಳಿಯಲ್ಲಿ ಅಪರೂಪಕ್ಕೆ ಎಂಬಂತೆ ಕುಟುಂಬ ರಾಜಕೀಯ ಕಂಡು ಬರುವುದು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಎನ್ನಬಹುದು.

ಉಡುಪಿ ಕ್ಷೇತ್ರದಲ್ಲಿ ತಂದೆ, ತಾಯಿ, ಮಗ, ಒಂದೇ ಕ್ಷೇತ್ರದಲ್ಲಿ ಶಾಸಕರಾದ ನಿದರ್ಶನ ಕಾಣಬಹುದು. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಮಧ್ವರಾಜ್, ಅವರ ಪತ್ನಿ ಮನೋರಮಾ ಮಧ್ವರಾಜ್, ಪುತ್ರ ಪ್ರಮೋದ್ ಮಧ್ವರಾಜ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. 1957 ರಿಂದ 2013 ರ ತನಕದ ಚುನಾವಣಾ ಕದನಲ್ಲಿ ಈ ಕುಟುಂಬದ ಸದಸ್ಯರು ಒಟ್ಟು ಆರು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಮನೋರಮಾ ಮಧ್ವರಾಜ್ ಮತ್ತು ಪ್ರಮೋದ್ ಮಧ್ವರಾಜ್ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Elections 2018 : Flashback Udupi constituency Madhwaraj family

* 1962ರಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ, ಉದ್ಯಮಿ ಎಂ.ಮಧ್ವರಾಜ್(17,511 ಮತಗಳು) ಅವರು ಪಿಎಸ್​ಪಿಯ ಉಪೇಂದ್ರ ನಾಯಕ್(8003 ಮತಗಳು) ಅವರನ್ನು ಸೋಲಿಸಿ, ವಿಧಾನಸಭೆ ಪ್ರವೇಶಿಸಿದ್ದರು.

ಪ್ರಮೋದ್ ಮದ್ವರಾಜ್ ಗೆ ಪರ್ಯಾಯ ಅಭ್ಯರ್ಥಿ ಸಿದ್ದಪಡಿಸುತ್ತಿದೆಯಾ ಕಾಂಗ್ರೆಸ್‌ ?ಪ್ರಮೋದ್ ಮದ್ವರಾಜ್ ಗೆ ಪರ್ಯಾಯ ಅಭ್ಯರ್ಥಿ ಸಿದ್ದಪಡಿಸುತ್ತಿದೆಯಾ ಕಾಂಗ್ರೆಸ್‌ ?

* 1972ರಲ್ಲಿ ಮಧ್ವರಾಜ್ ಪತ್ನಿ ಮನೋರಮಾ ಮಧ್ವರಾಜ್ (26,020 ಮತಗಳು) ಅವರು ವಿ.ಎಸ್ ಆಚಾರ್ಯ (ಬಿಜೆಎಸ್) (11076) ಮೊದಲ ಬಾರಿಗೆ ಕಣಕ್ಕಿಳಿದು, 15 ಸಾವಿರ ಮತಗಳ ಅಂತರದ ಜಯ ಸಾಧಿಸಿ ಶಾಸಕಿಯಾದರು.

* 1978ರಲ್ಲಿ ಕಾಂಗ್ರೆಸ್ ಐ ನಿಂದ ಸ್ಪರ್ಧಿಸಿ 30899 ಮತಗಳನ್ನು ಗಳಿಸಿ ಪುನರಾಯ್ಕೆಯಾಗಿ, ಗುಂಡೂರಾವ್ ಸರ್ಕಾರದಲ್ಲಿ ಸಚಿವೆಯಾಗಿದ್ದರು.

Elections 2018 : Flashback Udupi constituency Madhwaraj family

* 1983ರ ಚುನಾವಣೆಯಲ್ಲಿ ವಿಎಸ್ ಆಚಾರ್ಯ ವಿರುದ್ಧ ಮನೋರಮಾ ಸೋಲು ಅನುಭವಿಸಿದರು.

* ಮನೋರಮಾ ಅವರು 1985 ಹಾಗೂ 1989ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

* 1994ರಲ್ಲಿ ಕೆಸಿಪಿಯ ಯು. ಆರ್ ಸಭಾಪತಿ ವಿರುದ್ಧ ಮನೋರಮಾ ಸೋಲುಕಂಡರು.

* 2008ರಲ್ಲಿ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್(56441) ಅವರು ಕೆ ರಘುಪತಿ ಭಟ್(58920) ವಿರುದ್ಧ ಸೋಲು ಕಂಡರು.

*. 2013ರಲ್ಲಿ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾದರು.

ಈ ನಡುವೆ ಮನೋರಮಾ ಅವರು 2004ರಲ್ಲಿ ಬಿಜೆಪಿ ಸೇರಿ ಉಡುಪಿ ಕ್ಷೇತ್ರದ ಸಂಸದೆಯಾಗಿ ಚುನಾಯಿತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Elections 2018: Flash back 1962-till date Madhwaraj family how they fared in the Udupi constituency. M Madhwaraj, Manorama the minister for fisheries, sports and youth affairs, Karnataka Pramod Madhwaraj's father M Madhwaraj and mother Manorama contested from this assembly constituency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X