ಎನ್ನಡಾ-ಎಕ್ಕಡಾ ಹೋಗಲಿ, ಕನ್ನಡವೇ ಕುಣಿದಾಡಲಿ: ದುಬೈ ಕನ್ನಡಿಗನ ಕನಸು
Recommended Video
ದುಬೈನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರೂ ಕನ್ನಡತನವನ್ನು ಇನಿತೂ ಕಳೆದುಕೊಳ್ಳದ, ಸದಾ ಕನ್ನಡಕ್ಕಾಗಿ ಮಿಡಿಯುವ ಮನ ಹೊಂದಿರುವ ಅಶ್ರಿತ್ ಅವರು 'ಒನ್ ಇಂಡಿಯಾ ಕನ್ನಡ'ದ ಜೊತೆಗೆ ತಮ್ಮ 'ಕನಸಿನ ಕರ್ನಾಟಕ' ಹೇಗಿರಬೇಕು ಎಂಬುದರ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ದುಬೈನ ಇತಿಹಾಸ ತಿಳಿದಿರುವ ಅವರು ಕೆಲವು ದಶಕಗಳ ಹಿಂದೆ ಮರಳು ಬೀಡಾಗಿದ್ದ ದುಬೈ ಇಂದು ವಿಶ್ವದ ಅತಿ ಶ್ರೀಮಂತ ನಗರಗಳಲ್ಲಿ ಒಂದಾಗಿರುವ ಬಗ್ಗೆ ವಿಸ್ಮಯಗೊಂಡಿದ್ದಾರೆ, ಯಾವುದೇ ಸಂಪನ್ಮೂಲ ಇಲ್ಲದಿದ್ದರೂ ದುಬೈ ಇಷ್ಟು ಬೃಹತ್ ಆಗಿ ಬೆಳೆದಿದೆ, ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲ ಹೊಂದಿರುವ ಕರ್ನಾಟಕ ಏಕೆ ಗಮನಾರ್ಹ ಪ್ರಗತಿ ಸಾಧಿಸುತ್ತಿಲ್ಲ ಎಂಬುದು ಅವರನ್ನು ಕಾಡುತ್ತಿದೆ.
ದೇಶದಲ್ಲೇ ಹಾಟ್ ಹಾಟ್ ರಾಜ್ಯ ನನ್ನ ಕರ್ನಾಟಕ ಆಗಬೇಕು
ಅವರ ಕನಸಿನ ಕರ್ನಾಟಕದಲ್ಲಿ ದಕ್ಷ ಮತ್ತು ಭ್ರಷ್ಟಾಚಾರ ರಹಿತ ಆಡಳಿತವೇ ಅವರ ಮೊದಲ ಆದ್ಯತೆ. ಭ್ರಷ್ಟಾಚಾರ ರಹಿತ ಆಡಳಿತ ಕರ್ನಾಟಕದಲ್ಲಿ ಸಾಧ್ಯವಾದರೆ ರಾಜ್ಯ ತನ್ನಂತಾನೇ ಅಭಿವೃದ್ಧಿ ಸಾಧಿಸುತ್ತದೆ ಎಂಬುದು ಅಶ್ರಿತ್ ಅಭಿಪ್ರಾಯ.
ರಾಜ್ಯವು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿ ಆಗಬೇಕಿದೆ ಎಂಬುದು ಅವರ ಆಗ್ರಹ, ವಿಶೇಷವಾಗಿ ಇಂಧನ ಕ್ಷೇತ್ರದಲ್ಲಿ ರಾಜ್ಯವು ಆದಷ್ಟು ಬೇಗ ಸ್ವಾವಲಂಬಿತ್ವ ಸಾಧಿಸಬೇಕಿದೆ, ಸೌರ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಬಳಸಿ ವಿದ್ಯುತ್ ಕೊರತೆ ನೀಗಿಸಿಕೊಳ್ಳಬೇಕಿದೆ ಎನ್ನುತ್ತಾರೆ ಅವರು. ವಿದ್ಯುತ್, ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಅವರಿಗೆ ಅರಿವಿದೆ ಹಾಗಾಗಿಯೇ ವಿದ್ಯುತ್ ಕ್ಷೇತ್ರದಲ್ಲಿ ಸ್ವಾಲಂಬಿಯಾಗಬೇಕಿರುವುದು ರಾಜ್ಯದ ತುರ್ತು ಎನ್ನುತ್ತಾರೆ ಅಶ್ರಿತ್.
ನಮ್ಮ ರಾಜ್ಯ ಭೌಗೋಳಿಕವಾಗಿ ಹಲವು ವಿಶೇಷತೆಗಳನ್ನು ಹೊಂದಿದೆ. ಒಂದೆಡೆ ಬೆಟ್ಟ ಗುಡ್ಡಗಳಾದರೆ ಮತ್ತೊಂದೆಡೆ ಸಮುದ್ರ ಕಿನಾರೆ. ಮತ್ತೊಂದೆಡೆ ಜಲಪಾತಗಳಾದರೆ ಇನ್ನೊಂದೆಡೆ ಕೋಟೆ ಕೊತ್ತಲುಗಳು. ರಾಜ್ಯದ ಉತ್ತರ, ದಕ್ಷಿಣ, ಪೂರ್ವ , ಪಶ್ಚಿಮ ಎಲ್ಲಾ ಭಾಗಗಳಲ್ಲಿಯೂ ಪ್ರವಾಸಕ್ಕೆ ಅನುಕೂಲಕರವಾದ ಸ್ಥಳಗಳಿವೆ. ಅವುಗಳನ್ನು ಶೀಘ್ರವೇ ಅಭಿವೃದ್ಧಿಪಡಿಸಬೇಕಿದೆ. ಇದು ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಠಿಸಲಿದೆ ಎಂಬುದು ಅಶ್ರಿತ್ ಅವರ ದೂರ ದೃಷ್ಠಿ.
ಮಾತಿನ ಮಲ್ಲ ಪ್ರಥಮ್ನ ಕನಸಿನ ಕರ್ನಾಟಕ ಹೀಗಿರಬೇಕಂತೆ
ಅವರ ಅಂತಿಮ ಆದರೆ ಅತಿ ಮುಖ್ಯ ಆದ್ಯತೆ ರೈತರಿಗೆ. ರೈತರನ್ನು ಸುಖವಾಗಿಟ್ಟರೆ ಕರ್ನಾಟಕ ಸುಖವಾಗಿರುತ್ತದೆ ಎನ್ನುತ್ತಾರೆ ಅಶ್ರಿತ್, ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿರ್ಧರಿಸುವಂತಾಗಬೇಕು. ಅವರ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುವಂತಾಗಬೇಕು ಎಂಬುದು ಅಶ್ರಿತ್ ಅವರ ಒತ್ತಾಯ.
ಒಟ್ಟಾರೆಯಾಗಿ ಅಶ್ರಿತ್ ಅವರ ಕನಸಿನ ಕರ್ನಾಟಕ, ದಕ್ಷ, ಭ್ರಷ್ಟಾಚಾರ ರಹಿತ, ರೈತರ ಸ್ವರ್ಗ, ಸ್ವಾವಲಂಬಿ ಆಗಿರಬೇಕು ರಾಜ್ಯದಲ್ಲಿ 'ಎನ್ನಡಾ ಎಕ್ಕಡಾ ಸಂಸ್ಕೃತಿ ಅಳಿದು, ಎಲ್ಲೆಡೆ ಕನ್ನಡವೇ ಕುಣಿದಾಡಬೇಕು' ಎಂಬುದು ಕರ್ನಾಟಕದ ಬಗ್ಗೆ ಅಶ್ರಿತ್ ಕನಸು.