ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನವಿರುವುದು ನಿಜ: ಜಿ.ಪರಮೇಶ್ವರ್
Recommended Video
ಬೆಂಗಳೂರು, ಜೂನ್ 11: "ಸಂಪುಟ ರಚನೆಯ ನಂತರ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದು ನಿಜ" ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಇಂದು(ಜೂನ್ 10) ಕಾಂಗ್ರೆಸ್ ಶಾಕರೊಂದಿಗೆ ಸಭೆ ನಡೆಸಿದ್ದೇನೆ. ಹಿಂದಿನ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವ ಹಂತದಲ್ಲಿವೆ ಎಂಬ ಕುರಿತು ಸಭೆಯಲ್ಲಿ ಅವಲೋಕನ ಮಾಡಿದ್ದೇವೆ. ಇದರೊಂದಿಗೆ ಈಗಿನ ರಾಜಕೀಯ ಸನ್ನಿವೇಶದ ಬಗ್ಗೆಯೂ ಸವಿಸ್ತಾರ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್ಸಿನ ಹಲವು ಶಾಸಕರಿಗೆ ಸಂಪುಟ ರಚನೆಯ ಕುರಿತು ಸಮಾಧಾನವಿಲ್ಲ. ಈ ಕುರಿತೂ ಚರ್ಚೆ ನಡೆಸಿ, ಅಸಮಾಧಾನ ಶಮನಕ್ಕೆ ಚಿಂತನೆ ನಡೆಸುತ್ತಿದ್ದೇವೆ' ಎಂದು ಅವರು ಹೇಳಿದರು.
ಎಂಬಿ.ಪಾಟೀಲ್ ಬೆಂಬಲಿಗರಿಂದ ಉಪ ಮುಖ್ಯಮಂತ್ರಿಗೆ ಘೇರಾವ್
ಜೂನ್ 6 ರಂದು ನಡೆದ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ರಚನೆ ಪ್ರಕ್ರಿಯೆಯಲ್ಲಿ ಉಭಯ ಪಕ್ಷಗಳ 22 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಿತ್ತು.