ವಿವಾದ, ಹೋರಾಟದ ಮಿಶ್ರಣ: ಶೋಭಾ ಕರಂದ್ಲಾಜೆ ವ್ಯಕ್ತಿ ಚಿತ್ರ
Recommended Video
ಕರ್ನಾಟಕದಲ್ಲಿ ದಿಟ್ಟ ಮಹಿಳಾ ರಾಜಕಾರಣಿಗಳಿಲ್ಲ ಎಂಬ ಕೊರತೆಯನ್ನು ತುಂಬಿಸಿದವರಲ್ಲಿ ಶೋಭಾ ಕರಂದ್ಲಾಜೆ ಪ್ರಮುಖರು. ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ಶೋಭಾ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದರೂ ಹೌದು. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತ, ಒಂದಷ್ಟು ದೌರ್ಬಲ್ಯಗಳಿಗೂ ಹೆಸರಾದವರು ಅವರು.
ಕ್ರಾಂತಿಕಾರಿ ನಾಯಕಿಯಾಗಿ ಗುರುತಿಸಿಕೊಂಡ ಶೋಭಾ ಅವರು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ, ಇದೀಗ ಸಂಸದರಾಗಿ, ಮಾಜಿ ಸಚಿವರಾಗಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೆಳೆದುಬಂದ ಹಾದಿ ಸುದೀರ್ಘವಾದುದು. ಚಿಕ್ಕ ವಯಸ್ಸಿನಿಂದಲೂ ಅವರಲ್ಲಿದ್ದ ಹೋರಾಟದ ಮನಸ್ಥಿತಿಯೇ ಅವರು ಬಹುಬೇಗನೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಸಹಾಯಕವಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡ ಶೋಭಾ ಕರಂದ್ಲಾಜೆಯವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
*
1966,
ಅಕ್ಟೋಬರ್
23
ರಂದು
ದಕ್ಷಿಣ
ಕನ್ನಡ
ಜಿಲ್ಲೆಯ
ಪುತ್ತೂರು
ತಾಲೂಕಿನ
ಚಾರ್ವಾಕ
ಎಂಬ
ಪುಟ್ಟ
ಗ್ರಾಮ.
*
ತಂದೆ
ಮೋನಪ್ಪ
ಗೌಡ,
ತಾಯಿ
ಪೂವಕ್ಕ.
*
ಎಳೆ
ವಯಸ್ಸಿನಲ್ಲಿಯೇ
ರಾಷ್ಟ್ರೀಯ
ಸ್ವಯಂಸೇವಕ
ಸಂಘದೊಂದಿಗೆ
ಒಡನಾಟ.
ಪೂರ್ಣಾವಧಿ
ಕಾರ್ಯಕರ್ತೆಯಾಗಿ
ಕಾರ್ಯನಿರ್ವಹಣೆ.
*
ವಿದ್ಯಾರ್ಹತೆ:
ಮಂಗಳೂರು
ವಿಶ್ವವಿದ್ಯಾಲಯದಿಂದ
ಮಾಸ್ಟರ್
ಆಫ್
ಸೋಶಿಯಲ್
ವರ್ಕ್ಸ್
ನಲ್ಲಿ
ಸ್ನಾತಕೋತ್ತರ
ಪದವಿ,
ಮೈಸೂರು
ವಿಶ್ವವಿದ್ಯಾಲಯದಿಂದ
ಸಮಾಜಶಾಸ್ತ್ರದಲ್ಲಿ
ಸ್ನಾತಕೋತ್ತರ
ಪದವಿ.
*
ಕುಮಾರಧಾರ
ನದಿಗೆ
ಆಣೆಕಟ್ಟುವುದನ್ನು
ವಿರೋಧಿಸಿ,
ಪಶ್ಚಿಮ
ಘಟ್ಟದಲ್ಲಿ
ಪರಿಸರಕ್ಕೆ
ಹಾನಿಯಾಗುವಂಥ
ಯೋಜನೆಗಳನ್ನು
ವಿರೋಧಿಸಿ
ಹೋರಾಟ.
ಕಾಲೇಜು
ಓದುವ
ಸಮಯದಲ್ಲೇ
ಹಲವು
ಸಮಾಜ
ಸುಧಾರಣಾ
ಹೋರಾಟಗಳಲ್ಲಿ
ಭಾಗಿ.
*
1994
ರಲ್ಲಿ
ಬಂಟ್ವಾಳ
ವಿಧಾನಸಭೆಗೆ
ಸ್ಪರ್ಧಿಸಿದ್ದ
ಶಕುಂತಲಾ
ಶೆಟ್ಟಿಯವರ
ಒಡನಾಟದಿಂದ
ರಾಜಕೀಯ
ಪ್ರವೇಶ.
*
1997
ರಲ್ಲಿ
ಉಡುಪಿ
ಜಿಲ್ಲೆ
ಬಿಜೆಪಿ
ಮಹಿಳಾ
ಮೋರ್ಚಾ
ಅಧ್ಯಕ್ಷರಾಗಿ
ಆಯ್ಕೆ.
*
1997
ರಲ್ಲಿ
ಬೆಂಗಳೂರು
ಪ್ರವೇಶ.
*
1999
ರಲ್ಲಿ
ಬಿ.ಎಸ್.ಯಡಿಯೂರಪ್ಪನವರ
ಸಂಕಲ್ಪ
ರಥಯಾತ್ರೆಯಲ್ಲಿ
ಭಾಗಿ.
ನಂತರ
ಹಲವು
ಹೋರಾಟ,
ಪಾದಯಾತ್ರೆ,
ಸತ್ಯಾಗ್ರಹ
ನಡೆಸಿದ
ಅನುಭವ.
*
2000
ನೇ
ಇಸವಿಯಲ್ಲಿ
ಬಿಜೆಪಿ
ರಾಜ್ಯ
ಕಾರ್ದರ್ಶಿಯಾಗಿ
ಆಯ್ಕೆ.
*
2004
ರಲ್ಲಿ
ವಿಧಾನ
ಪರಿಷತ್
ಸದಸ್ಯೆಯಾಗಿ
ಆಯ್ಕೆ.
*
2008
ರಲ್ಲಿ
ನಡೆದ
ವಿಧಾನಸಭೆ
ಚುನಾವಣೆಯಲ್ಲಿ
ಯಶವಂತಪುರ
ಕ್ಷೇತ್ರದಿಂದ
ಸ್ಪರ್ಧಿಸಿ
ಶಾಸಕಿಯಾಗಿ
ಆಯ್ಕೆ.
*
ಗ್ರಾಮೀಣಾಭಿವೃದ್ಧಿ
ಮತ್ತು
ಪಂಚಾಯತ್
ರಾಜ್
ಸಚಿವರಾಗಿ
ಕಾರ್ಯನಿರ್ವಹಣೆ.
*
ಮೈಸೂರು
ಜಿಲ್ಲಾ
ಉಸ್ತುವಅರಿ
ಸಚಿವರಾಗಿಯೂ
ಕೆಲಸ
ನಿರ್ವಹಿಸಿದ
ಅನುಭವ
*
2009
ರಲ್ಲಿ
ಕೆಲವು
ರಾಜಕೀಯ
ಭಿನ್ನಾಭಿಪ್ರಾಯಗಳಿಂದಾಗಿ
ತಮ್ಮ
ಸ್ಥಾನಕ್ಕೆ
ರಾಜೀನಾಮೆ.
*
2010
ರಲ್ಲಿ
ಕರ್ನಾಟಕ
ಸರ್ಕಾರದಲ್ಲಿ
ಇಂಧನ
ಸಚಿವೆಯಾಗಿ
ಅಧಿಕಾರ
ಸ್ವೀಕಾರ.
*
2012
ರಲ್ಲಿ
ಬಿಜೆಪಿಯ
ಕೆಲವು
ನಾಯಕರೊಂದಿಗೆ
ಭಿನ್ನಾಭಿಪ್ರಾಯ
ಮೂಡಿ,
ಬಿ
ಎಸ್
ಯಡಿಯೂರಪ್ಪನವರು
ಸ್ಥಾಪಿಸಿದ
ಕರ್ನಾಟಕ
ಜನತಾ
ಪಕ್ಷ(ಕೆಜೆಪಿ)ಕ್ಕೆ
ಸೇರ್ಪಡೆ.
*
2013
ರಲ್ಲಿ
ಕೆಜೆಪಿಯಿಂದ
ಸ್ಪರ್ಧಿಸಿ
ಬಿಜೆಪಿಯ
ಸುರೇಶ್
ಕುಮಾರ್
ವಿರುದ್ಧ
ಸೋಲು.
*
2013
ರಲ್ಲಿ
ಬಿಜೆಪಿಯೊಂದಿಗೆ
ಕೆಜೆಪಿ
ವಿಲೀನ.
*
2014
ರ
ಲೋಕಸಭೆ
ಚುನಾವಣೆಯಲ್ಲಿ
ಬಿಜೆಪಿಯಿಂದ
ಉಡುಪಿ-ಚಿಕ್ಕಮಗಳೂರು
ಕ್ಷೇತ್ರದಿಂದ
ಸ್ಪರ್ಧಿಸಿ
ಗರಿಷ್ಠ
ಮತಗಳ
ಅಂತರದಿಂದ
ಗೆಲುವು.
*
ಎತ್ತಿನ
ಹೊಳೆ
ಯೋಜನೆಯ
ಹೋರಾಟದಿಂದಾಗಿ
ರಾಷ್ಟ್ರಮಟ್ಟದಲ್ಲಿ
ಹೆಸರಾದವರು
ಶೋಭಾ
ಕರಂದ್ಲಾಜೆ.
*
ಇತ್ತೀಚೆಗೆ
ಕರಾವಳಿಯಲ್ಲಿ
ಶಾಂತಿ
ಕದಡಿದ
ಆರ್
ಎಸ್
ಎಸ್
ಕಾರ್ಯಕರ್ತರ
ಹತ್ಯೆಯ
ಸಂದರ್ಭದಲ್ಲೂ
ಸರ್ಕಾರದ
ವಿರುದ್ಧ
ಉಗ್ರ
ಹೋರಾಟ
ನಡೆಸಿ,
ಕರ್ನಾಟಕದ
ದಿಟ್ಟ
ಮಹಿಳಾ
ರಾಜಕಾರಣಿ
ಎಂಬ
ಖ್ಯಾತಿಗೆ
ಪಾತ್ರರಾದವರು.