ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಡ್ನಿ ರೇಡಿಯೋದಲ್ಲಿ ಶಾಮ್ ಸಂದರ್ಶನ
ಸಿಡ್ನಿಯ ಪ್ರಮುಖ ವಾಣಿ ಎಸ್ ಬಿ ಎಸ್ ಸಂಸ್ಥೆ ಆಕಾಶವಾಣಿ ಸೇವೆಗಳಲ್ಲಿ ಕನ್ನಡಕ್ಕೂ ಅವಕಾಶ ನೀಡಿರುವುದು ಸಂತಸದ ವಿಷಯ. ನಿಯಮಿತವಾಗಿ ಕನ್ನಡದಲ್ಲಿ ಸುದ್ದಿಸಾರ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳ ಸಾರಸಂಗ್ರಹ ಮತ್ತು ಸಂದರ್ಶನಗಳಿಗೆ ದನಿಯಾಗುತ್ತಿರುವ ಹಿರಿಮೆಯನ್ನು ಕನ್ನಡ ಆಕಾಶವಾಣಿ ಗಳಿಸಿಕೊಂಡಿದೆ.
ಇದೇ ಫೆಬ್ರವರಿ 1ರ ಶನಿವಾರ ಸಿಡ್ನಿ ರೇಡಿಯೋ ಕೇಂದ್ರ ದಟ್ಸ್ ಕನ್ನಡ ಸಂಪಾದಕ ಎಸ್. ಕೆ. ಶಾಮಸುಂದರ ಅವರ ದೂರವಾಣಿ ಸಂದರ್ಶನ ನಡೆಸಿತು. ಸಂದರ್ಶನ ನಡೆಸಿದವರು ಕೇಂದ್ರದ ಉದ್ಘೋಷಕ ಬೆಳ್ಳಾವೆ ನಾಗಶಯನ. ಸಂದರ್ಶನದ ಆಯ್ದ ಭಾಗಗಳನ್ನು ಇದೀಗ ಎಸ್ ಬಿ ಎಸ್ ತನ್ನ ವೆಬ್ ತಾಣದಲ್ಲಿ ಪ್ರಕಟಿಸಿದೆ. MP3 ಮೂಲಕ ಲಭ್ಯವಾಗಿರುವ 12 ನಿಮಿಷ ಅವಧಿಯ ಸಂದರ್ಶನ, ನಿಮ್ಮ ಕಿವಿಗೆ!
ಸಂದರ್ಶನ ಕೇಳಲು ಇಲ್ಲಿ ಕ್ಲಿಕ್ಕಿಸಿ
Comments
Story first published: Wednesday, February 4, 2009, 16:03 [IST]