ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬಿದ ಸಭಾಂಗಣದಲ್ಲಿ ಯಜಮಾನರು ಇರಲಿಲ್ವಾ?

By Staff
|
Google Oneindia Kannada News


ಹಿಂದಿ ಹಾಡು ಹೇಳುವ ಔಚಿತ್ಯ ಏನಿತ್ತು ಎನ್ನುವುದನ್ನು ಆನಂತರ ಚರ್ಚಿಸೋಣ, ಆದರೆ, ಇಂತಹ ಕಾಯಕ್ರಮದಲ್ಲಿ ‘ಹಿಂದಿ ಹಾಡು ಯಾಕೆ ಹಾಡ್ತೀರಪ್ಪಾ ?’ ಅಂತ ಕೇಳಿದವರ ಮೇಲೆ ಎಗರಿಬಿದ್ದ ಭಯೋತ್ಪಾದಕತೆ ಮಾತ್ರ, ಖಂಡನೀಯ.

ಅದರಲ್ಲೂ 24 ಕ್ಯಾರೆಟ್‌ ಕನ್ನಡಿಗರಾದ ಕೆ. ಟಿ. ಚಂದ್ರಶೇಖರ್‌ ಅಂತಹ ವಯೋವೃದ್ಧರ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದ್ದು ಗೋಖಲೆ ಸಂಸ್ಥೆಗೆ, ಬಸವನಗುಡಿಗೆ, ಬೆಂಗಳೂರಿಗೆ, ಕರ್ನಾಟಕಕ್ಕೆ ಶೋಭೆ ತರುವಂಥದಲ್ಲ.

ಈ ಮಾತುಗಳು ನನ್ನ-ನಮ್ಮ ಅಂತರ್‌ಜಾಲ ತಾಣದ ಅಭಿಪ್ರಾಯ ಮಾತ್ರವಲ್ಲ. ನಮ್ಮ ಬಹುತೇಕ ಓದುಗರದೂ ಹೌದು. ಈ ಘಟನೆಯನ್ನು ಖಂಡಿಸುವ ಅಸಂಖ್ಯಾತ ಪತ್ರಗಳು ನಮ್ಮ ಜಾಲತಾಣಕ್ಕೆ ಬಂದಿವೆ. ಬರುತ್ತಿವೆ. ಕನ್ನಡವನ್ನು ನಿಂದಿಸುವ, ಕನ್ನಡಿಗನ ಮನನೋಯಿಸುವ ವರ್ತನೆಯನ್ನು ಓದುಗರು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ.

ಚಂದ್ರಶೇಖರ್‌ ಅವರ ಮೇಲೆ ಆಕ್ರಮಣ ಮಾಡಿದುದಕ್ಕಿಂತ ಹೆಚ್ಚು ಗಾಬರಿಯಾಗುವ ಸಂಗತಿಯೆಂದರೆ, ಅಂತಹ ಘಟನೆ ನಡೆಯುತ್ತಿರುವಾಗ ಅಲ್ಲೆ ನೆರೆದಿದ್ದ ಇಪ್ಪತ್ಮೂರುವರೆ ಕ್ಯಾರೆಟ್‌ ಕನ್ನಡಿಗರು ಏನು ಮಾಡುತ್ತಿದ್ದರು? ದ್ರೌಪದಿ ವಸ್ತ್ರಾಪಹರಣ ನಡೆಯುವಾಗ ಭೀಷ್ಮರು, ದ್ರೋಣರು ಮತ್ತು ಕೃಪಾಚಾರ್ಯರು ತಳೆದ ನಿಲುವನ್ನು ಇವರೂ ಅನುಕರಿಸಿದರೆ? ಯಥಾರ್ಥ ಭಾಷಣ ಭೀತ ಚೇತನರಾದರೆ?

(ಅಲ್ಲಿ ನೆರೆದಿದ್ದ ಕೆಲವರ ಹೆಸರುಗಳು ಇಂತಿವೆ : ಎಸ್‌.ಎಲ್‌.ಭೈರಪ್ಪ, ಎಲ್‌. ಎಸ್‌. ಲಕ್ಷ್ಮಿನಾರಾಯಣ ಭಟ್ಟ, ಸುಮತೀಂದ್ರ ನಾಡಿಗ, ಎನ್‌. ಆರ್‌. ನಾರಾಯಣ ಮೂರ್ತಿ, ಸುಧಾ ಮೂರ್ತಿ, ಜಿ.ವಿ. ಹರೀಶ್‌, ಹೆಚ್‌.ವಿ. ಕೃಷ್ಣಸ್ವಾಮಿ, ಎಸ್‌. ಆರ್‌. ರಾಮಸ್ವಾಮಿ, ಮಾಯಾರಾಜ್‌, ಎಂ.ಸಿ. ಜಯದೇವ್‌, ದೇಶ ಕುಲಕರ್ಣಿ, ಬಾಲಸುಬ್ರಮಣ್ಯ ಕಂಜರ್ಪಣೆ, ಸೂರ್ಯಪ್ರಕಾಶ್‌ ಪಂಡಿತ್‌, ವಿದ್ವಾನ್‌ ಪಾದೇಕಲ್‌ ನರಸಿಂಹ ಭಟ್‌, ವಿಮಲ ಕುಲಕರ್ಣಿ ಮುಂತಾದವರು.)

ಮುಂದೇನು?

ಈಗ ಆಗಬೇಕಾದುದಿಷ್ಟೆ. ಹಿಂದಿ ಹಾಡನ್ನು ಪ್ರಾರ್ಥನಾ ಗೀತೆಯಾಗಿ ಆಯ್ದುಕೊಳ್ಳುವ ಔಚಿತ್ಯ ಏನಿತ್ತು? ಆಯೋಜಕರು ಸ್ಪಷ್ಟಪಡಿಸಬೇಕು. ಮತ್ತು ಹಿರಿಯರ ಮೈಲೆ ಕೈಮಾಡಿದ ವ್ಯಕ್ತಿಗಳ ಹೆಸರುಗಳನ್ನು ವ್ಯವಸ್ಥಾಪಕರು ಬಹಿರಂಗ ಪಡಿಸಬೇಕು. ಹಾಗೂ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು.

ಕನ್ನಡಿಗರ ಭದ್ರಕೋಟೆಯಲ್ಲೇ ಸಂಭವಿಸಿದ ಈ ಘಟನೆಯಿಂದ ಕಲಿಯಬೇಕಾದ ಪಾಠವೆಂದರೆ ; ಕನ್ನಡ ಸಂಬಂಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಎಚ್ಚರವಿರಬೇಕು.. ಕನ್ನಡಿಗ ಮೈಯೆಲ್ಲ ಎಚ್ಚರವಿರಬೇಕು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X