ಎಸ್.ಕೆ. ಶಾಮಸುಂದರ
ಪ್ರತಿವರ್ಷವೂ
ಬೆಳಕಿನ
ಹಬ್ಬದ
ವರ್ಷದಲ್ಲಿ
ಪಟಾಕಿ
ಸುಟ್ಟು
ಸಾವಿರಾರು
ರುಪಾಯಿ
ಬೂದಿ
ಮಾಡಿದ್ದಾಯಿತು
;
ಪರಿಸರ
ಮಾಲಿನ್ಯಕ್ಕೆ
ಅಳಿಲು
ಕೊಡುಗೆ
ಸಲ್ಲಿಸಿದ್ದೂ
ಆಯಿತು!
ಈ
ವರ್ಷವೂ
ಪಟಾಕಿ
ಸುಡಿ-
ನೀವು
ನಿಮ್ಮಿಷ್ಟ
.
ಆದರೆ
ಬೆಳಕಿನ
ಹಬ್ಬವನ್ನು
ಅರ್ಥಪೂರ್ಣವಾಗಿ
ಆಚರಿಸುವ
ಇನ್ನೊಂದು
ಮಾರ್ಗವೂ
ಉಂಟು.
ಹಬ್ಬ
ಆಚರಿಸುವ
ಮುನ್ನ
ಈ
ಲೇಖನ
ಓದಿಬಿಡಿ.
ಎಸ್.ಕೆ.
ಶಾಮಸುಂದರ [email protected] |
ತಮ್ಮದಲ್ಲದ ತಪ್ಪಿಗೆ ದಂಡ ತೆರುತ್ತಿರುವ ನಿರ್ಭಾಗ್ಯ ಮಕ್ಕಳ ದೊಡ್ಡ ಸೈನ್ಯ ಕರ್ನಾಟಕದಲ್ಲಿದೆ. ದೈಹಿಕ ಮತ್ತು ಮಾನಸಿಕವಾಗಿ ಹುಟ್ಟಿನಿಂದಲೇ ಬೆಳವಣಿಗೆ ಕುಂಠಿತವಾದ ಈ ಮಕ್ಕಳ ದೈನಂದಿನ ಬದುಕನ್ನು ನಿಭಾಯಿಸುವುದು ಎಷ್ಟೋ ವೇಳೆ ಪೋಷಕರಿಗೆ ಕಷ್ಟವೆನಿಸಬಹುದು. ಆದರೆ, ಸಾಮಾಜಿಕ ಜವಾಬ್ದಾರಿಗೆ ಯಾವತ್ತೂ ಹೆಗಲು ಕೊಡಲು ಸಿದ್ಧರಾದ ಕರ್ನಾಟಕ ಜನತೆ ಮಾತ್ರ ಸಮಾಜ ಸೇವೆ ಮಾಡಲು ತಮಗೆ ದೊರೆತ ಇನ್ನೊಂದು ಅವಕಾಶ ಎಂದು ಭಾವಿಸುವರು.
ಅಂಗವಿಕಲ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯವೆ? ಅವರು ನಮ್ಮ ನಿಮ್ಮಂತೆ ಜೀವನ ಸಾಗಿಸುವುದು ಸಾಧ್ಯವೇ ಇಲ್ಲವೇ? ಯಸ್. ಅನುಕೂಲಕರ ವಾತಾವರಣದಲ್ಲಿ ವೃತ್ತಿಪರರಿಂದ ತರಬೇತಿ, ಚಿಕಿತ್ಸೆ, ಜತೆಗೊಂದಿಷ್ಟು ಪ್ರೀತಿ ಧಾರೆ ಎರೆದರೆ ಈ ಮಕ್ಕಳ ಬದುಕು ಅರಳಿ ಬದುಕು ಸಹನೀಯವಾಗುತ್ತದೆ ಎಂದು ನಂಬಿರುವ ಸ್ವಯಂಸೇವಾ ಸಂಸ್ಥೆ ಸ್ಪಾಸ್ಟಿಕ್ ಸೊಸೈಟಿ ಆಫ್ ಕರ್ನಾಟಕ. ಈ ಸಮಾಜವು ಬೆಂಗಳೂರಿನ ಇಂದಿರಾನಗರದಲ್ಲಿ ಕಾರ್ಯೋನ್ಮುಖವಾಗಿದೆ. ಮೊನ್ನೆ ಭಾರತ ಗಣರಾಜ್ಯದ ಅಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ ಅವರು ಈ ಆಶ್ರಮಕ್ಕೆ ಬಂದು ಮಕ್ಕಳನ್ನು ಮಾತನಾಡಿಸಿಕೊಂಡು ಹೋದರು.
ತಂದೆ ತಾಯಿಯ ಪರ್ಸು ದಪ್ಪವಾಗಿದ್ದು ಕೈಕಾಲು, ಮಿದುಳು ಗಟ್ಟಿಯಾಗಿರುವ ಪುಣ್ಯವಂತರ ಮಕ್ಕಳು ಈ ದೀಪಾವಳೀ ವಾರದುದ್ದಕ್ಕೂ ಪಡುವ ಆನಂದವನ್ನು ನೀವು ಕರ್ನಾಟಕದ ಓಣಿಓಣಿಗಳಲ್ಲಿ ಕಾಣುತ್ತೀರಿ. ಆದರೆ, ಏನಾದರೊಂದು ಊನಕ್ಕೆ ಗುರಿಯಾಗಿ ಕುಣಿದು ಕುಪ್ಪಳಿಸಲಾರದ ಮಕ್ಕಳು ಬಾಣ ಬಿರುಸುಗಳ ತಂಟೆಗೆ ಹೋಗದೆ ಬಣ್ಣಗಳೊಂದಿಗೆ ಆಟವಾಡಿದ್ದಾರೆ. ಅವರು ನಿಮಗೆ ದೀಪಾವಳಿ ಶುಭಾಶಯಗಳನ್ನು ಹೇಳುತ್ತಿದ್ದಾರೆ, ಸ್ವೀಕರಿಸಿ.
ಸ್ಪಾಸ್ಟಿಕ್ ಸೊಸೈಟಿಯ ನಮ್ಮ ಮಕ್ಕಳು ಬಿಡಿಸಿದ ಚಿತ್ರಗಳತ್ತ ಒಮ್ಮೆ ಕಣ್ಣು ಹಾಯಿಸಿ. ಆಮೇಲೆ, ಸ್ಪಾಸ್ಟಿಕ್ ಸೊಸೈಟಿಯ ಕಾರ್ಯಚಟುವಟಿಕೆಗಳ ಬಗ್ಗೆ ಹೆಚ್ಚು ತಿಳಿಯಲು ಸೊಸೈಟಿಯ ವೆಬ್ ಸೈಟಿನಲ್ಲಿ ವಿಹರಿಸಿ. ಸಾಧ್ಯ ಮಾಡಿಕೊಂಡು ಒಮ್ಮೆ ಇಂದಿರಾನಗರಕ್ಕೆ ಹೋಗಿ ಬನ್ನಿ. ನೀವು ಬೆಂಗಳೂರಿನ ನಿವಾಸಿ ಅಲ್ಲದಿದ್ದರೆ ಕಡೆಯ ಪಕ್ಷ ಸೊಸೈಟಿಗೆ ಒಂದು ಪತ್ರ ಬರೆದು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.
ಈ ವರ್ಷದ ದೀಪಾವಳಿ ಹೀಗೆ ನಡೆಯಲಿ!
|