ಎಸ್ಕೆ. ಶಾಮಸುಂದರ
ಸ್ವಾತಂತ್ರ್ಯದ
ನೆನಪುಗಳೆಂದರೆ
ಧುತ್ತೆಂದು
ಕಣ್ಣೆದುರು
ನಿಲ್ಲುವುದು
ಮಹಾತ್ಮ
ಗಾಂಧೀಜಿ.
ಗಾಂಧಿ
ಆಲದ
ಮರದಂತೆ.
ಗಾಂಧಿಯನ್ನು
ಹೊರತುಪಡಿಸಿದ
ಭಾರತದ
ಇತಿಹಾಸ
ಅಸಂಪೂರ್ಣ.
ಆದರೆ,
ರಕ್ತ
ಮಾಂಸದಂತೆ,
ನರ
ನಾಡಿಗಳಂತೆ
ಅನೇಕ
ಮಹನೀಯರು
ನಾಡುನುಡಿಯನ್ನು
ಪೋಷಿಸಿದ್ದಾರೆ.
ಸ್ವಾತಂತ್ರ್ಯ
ದಿನದ
ಸಂದರ್ಭದಲ್ಲಿ
ಅಂಥವರನ್ನು
ನೆನೆಯುವುದು
ನಾಗರಿಕರ
ಕರ್ತವ್ಯ.
ಕಾರ್ನಾಡ್
ಸದಾಶಿವರಾಯರು
ಅಂಥ
ಸ್ಮರಣೀಯರಲ್ಲೊಬ್ಬರು.
ಎಸ್ಕೆ.
ಶಾಮಸುಂದರ [email protected] |
ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.
ಸ್ವಾತಂತ್ರ ್ಯ ಹೋರಾಟಗಾರ ಕಾರ್ನಾಡ್ ಸದಾಶಿವರಾಯರ ಹೆಸರನ್ನು ಈ ಬಡಾವಣೆಗೆ ಇಡಲಾಗಿದೆ. ಆದರೆ ಜನರ ಬಾಯಲ್ಲಿ ಇದು ಸದಾಶಿವನಗರ ಮಾತ್ರ. ಕರ್ನಾಟಕದ ಹೆಮ್ಮೆಯ ಪುತ್ರರಲ್ಲೊಬ್ಬರಾದ ಕಾರ್ನಾಡ್ ಸದಾಶಿವರಾಯರು ಸ್ವಾತಂತ್ರ ್ಯ ಸಂಗ್ರಾಮದಲ್ಲಿ ಕಾಯಾ ವಾಚಾ ಮನಸಾ ತೊಡಗಿಕೊಂಡಿದ್ದವರು. ಸದಾ ದೇಶದ ಬಗ್ಗೆಯೇ ಚಿಂತಿಸುತ್ತಿದ್ದ ಅವರು ಕಡುಬಡತನದಲ್ಲೇ ಕೊನೆ ಉಸಿರೆಳೆದರು. ತೀರಿಕೊಳ್ಳುವ ಹೊತ್ತಿಗೆ ಅವರ ಬಳಿ ಚಿಕ್ಕಾಸೂ ಇರಲಿಲ್ಲ. ಬೆಚ್ಚಗಿನ ಬಟ್ಟೆಯೂ ಇಲ್ಲದೆ ಶೀತ ವ್ಯಾಧಿ ಅಂಟಿಸಿಕೊಂಡು ಹಾಸಿಗೆ ಹಿಡಿದಿದ್ದ ರಾಯರ ರಾಷ್ಟ್ರಪ್ರೇಮ , ಸಮರ್ಪಣಾ ಮನೋಭಾವ ನೆನಪಿಸಿಕೊಂಡರೆ ಮೈ ಝಂ ಎನಿಸುತ್ತದೆ.
ಕಾರ್ನಾಡ್ ಸದಾಶಿವರಾಯರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಹಣ, ಆಸ್ತಿ ಪಾಸ್ತಿಗೆ ಎಂದೂ ಮೋಹಿತರಾಗದ ಅವರು ತಮ್ಮ ಬಳಿ ಇದ್ದಬದ್ದದ್ದನ್ನೆಲ್ಲ ದೇಶಸೇವೆಯ ಕಾಯಕಕ್ಕೆ ಸಮರ್ಪಿಸಿದರು. ದೀನದಲಿತರ ಪಾಲಿಗೆ ಅವರು ತಂದೆ. ಮಹಾ ಮಾನವತಾವಾದಿ ಮತ್ತು ಗಾಂಧೀವಾದಿಯಾಗಿದ್ದ ರಾಯರನ್ನು ಶಿವರಾಮ ಕಾರಂತರು ‘ಧರ್ಮರಾಜ್’ ಎಂದು ಬಣ್ಣಿಸಿದ್ದಾರೆ.
ಕಾರಂತರ ‘ಔದಾರ್ಯದ ಉರಳಲ್ಲಿ ’ ಕಾದಂಬರಿ ಓದಿದರೆ ನಿಮಗೆ ಕಾರ್ನಾಡ್ ನೆನಪಾಗುತ್ತಾರೆ.
ಇನ್ನೊಂದು ಸ್ವಾತಂತ್ರ ್ಯ ದಿನಾಚರಣೆ ಹತ್ತಿರವಾಗುತ್ತಿರುವ ಸಮಯಕ್ಕೆ ಕಾರ್ನಾಡರಂಥ ದೇಶಪ್ರೇಮಿಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಇಂಥ ಕರ್ತವ್ಯವನ್ನು ನನಗೆ ನೆನಪಿಸಿದವರು ಕ್ಯಾಲಿಫೋರ್ನಿಯಾ ನಿವಾಸಿ ಮಿತ್ರ ಯೋಗೇಶ್ ದೇವರಾಜ್. ಅವರು ಕಾಮತ್ ಡಾಟ್ಕಾಂನಲ್ಲಿ Builders of Modern Karnataka ಪುಟಗಳನ್ನು ಓದಿದ ನಂತರ ನನಗೆ ಕಳಿಸಿಕೊಟ್ಟಿದ್ದಾರೆ. ನಮ್ಮ ಓದುಗರೊಂದಿಗೆ ಈ ಅಂಕಣದ ಮೂಲಕ ಕಾರ್ನಾಡರನ್ನು ನೆನಪಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟ ದೇವರಾಜ್ ಮತ್ತು ಕಾರ್ನಾಡರ ಬಗ್ಗೆ ವಿವರವಾದ ಲೇಖನ ಬರೆದ ಜ್ಯೋತ್ಸ್ನಾ ಕಾಮತ್ ಅವರಿಗೆ ನಮಸ್ಕಾರಗಳು..