ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ; ಡಿಯ್ಯ ಡಿಯ್ಯ ಡಾಡಾ ಡಿಯ್ಯ

By ಸ ರಘುನಾಥ, ಕೋಲಾರ
|
Google Oneindia Kannada News

ನರಸಿಂಗರಾಯನಿಗೆ ಕೂತರೆ ನಿಂತರೆ ಕಳ್ಳನ ಪಾತ್ರದ್ದೇ ಧ್ಯಾನವಾಯಿತು. ಸಾಕಷ್ಟು ಹೊತ್ತು ರಂಗದ ಮೇಲಿರುವ ಪಾತ್ರವದು. ಕತ್ತಲೆಗೆ ಕಾಯುವುದು, ಹೊಂಚು ಹಾಕುವುದು, ಚಟುವಟಿಕೆಯಿಂದಿರುವುದು. ಅವನಿಗೆ ಯಾವ ಕಾವಲೂ ಲೆಕ್ಕಕ್ಕಿಲ್ಲ. ಕಪ್ಪಗೆ ಗಟ್ಟಿಮುಟ್ಟಾದ ಮೈಕಟ್ಟು. ಅವನೆಂದರೆ ಭಯವೇ ಭಯಪಡಬೇಕು. ಜೊತೆಗೆ ಭಯವನ್ನೂ ನಗಿಸಬಲ್ಲವನು.

Recommended Video

ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

ಸದಾರಮೆಯನ್ನು ಕಾಡುತ್ತ, ಪೀಡಿಸುವವನು. ಹೆಂಗರುಳಿನ ಪ್ರೇಕ್ಷಕರು ಅವಳ ಬಗ್ಗೆ ಕನಿಕರಿಸಿ ಅವನನ್ನು ನಿಂದಿಸುವಂತೆ ಬಲಗೊಳಿಸಬೇಕು ಎಂಬ ಇರಾದೆಗೆ ನರಸಿಂಗರಾಯ ಬಂದಿದ್ದ. ಅವನ ಪ್ರವೇಶದ ಹಾಡಿನಲ್ಲಿ ಅವನಲ್ಲಿನ ಚಮತ್ಕಾರ ಎದ್ದು ಕಾಣಬೇಕು. ಹಾಡು ಹಾಗಿರಬೇಕೆಂದುಕೊಂಡಾಗ ಕಳ್ಳನ ಪಾತ್ರ ಯಾರಿಗೆ ಕೊಡುವುದೆಂದು ಆಲೋಚಿಸಿದ.

ಸ ರಘುನಾಥ ಅಂಕಣ; ಗಾಳಕ್ಕೆ ಬಿದ್ದ ಮೀನುಗಳು...ಸ ರಘುನಾಥ ಅಂಕಣ; ಗಾಳಕ್ಕೆ ಬಿದ್ದ ಮೀನುಗಳು...

ಈವರೆಗೆ ಆ ಪಾತ್ರ ಕಟ್ಟುತ್ತಿದ್ದ ಐನೋರ ಸತ್ಯಪ್ಪನ ನಟನೆ ತೆಗೆದು ಹಾಕುವಂತಿರಲಿಲ್ಲ. ಅವನೇ ಮಾಡುವುದಾದರೆ ಹಳೆಯ ಪದ್ಯಗಳೇ ಸಾಕೆ, ಹೊಸವು ಬೇಕೆ ಎಂದು ಕೇಳಬೇಕು. ಬೇಡವೆಂದರೆ ಹೊಸಬರನ್ನು ಆರಿಸಬೇಕು. ಅದಕ್ಕೆ ಸಭೆಯ ದಿನದವರೆಗೆ ಕಾಯಬೇಕು. ಈಗಲೇ ಇತ್ಯರ್ಥವಾದರೆ ಚೆನ್ನ ಅನ್ನಿಸಿತು. ಸತ್ಯಪ್ಪನ ಮನೆಗೆ ಹೋದ. ವಿಷಯ ಹೀಗೀಗೆಂದು ತಿಳಿಸಿದ. ಅವನು ನನ್ನನ್ನು ಬಿಟ್ಟುಬಿಡು ಮಾರಾಯ. ನನಗಾಗೊಲ್ಲವೆಂದ. ಆ ಸಮಸ್ಯೆ ತೀರಿತು. ಇನ್ನು ಹೊಸಬನನ್ನು ಆಯ್ಕೆ ಮಾಡಬೇಕು. ಯಾರು ಎಂದು ನೋಡೋಣ ಅಂದುಕೊಂಡು ಮನೆಯ ದಾರಿ ಹಿಡಿದ.

Narasingaraya Written Song Related To Thief Role In Drama


ಕೋಣೆಗೆ ಬಂದವನನ್ನು ಕಳ್ಳನ ಪಾತ್ರ ಕಾಡತೊಡಗಿತು. ಕಳ್ಳರು ತಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂಬ ಅಹಮ್ಮಿನ ದಿಮಾಕಿನಲ್ಲಿರುತ್ತಾರಲ್ಲ ಅಂದುಕೊಂಡ. ಅವರೇನೆ ಕಡಿಮೆಯೆ ಅನ್ನಿಸಿದ್ದೇ ತಡ ಮನಸ್ಸಿನಲ್ಲಿ ಆ ಪದದಿಂದಲೇ ಹಾಡು ಹುಟ್ಟಲು ತವಕಿಸಿತು. ಹಾರ್ಮೋನಿಯಂ ಹಿಡಿದು ಕುಳಿತ.

ಡಿಯ್ಯ ಡಿಯ್ಯ ಡಾಡಾ ಡಿಯ್ಯ
ಡಿಯ್ಯ ಡಿಯ್ಯ ಡಾಡಾ ಡಿಯ್ಯ

(ಹಾಡುತ್ತ ರಂಗದ ಮೇಲೆ ಸುತ್ತಾಡುತ್ತ)

ಕಡಿಮೆಯಲ್ಲ ಈ ಕಳ್ಳ
ಬಲು ಸುಳ್ಳ ನಾ ಮಲ್ಲ
ಮನೆದೇವರಾಣೆ ಇದು ಸುಳ್ಳಲ್ಲ
ನನ್ನ ಹಿಡಿಯಲಾರ ಕೊತ್ವಾಲ
(ಸಭಿಕರತ್ತ ಕೈ ತೋರಿಸಿ)

 ಸ ರಘುನಾಥ ಅಂಕಣ; ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ? ಸ ರಘುನಾಥ ಅಂಕಣ; ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ?

ಕೇಳಿರಿ ಆ ಕೆಂಚಮ್ಮನ
ಹಾರಿಸಿದ್ದೆ ಕಾಸಿನ ಸರವನ್ನ
ಬೈಸಿದ್ದೆ ಕೊತ್ವಾಲನ
ಹಿಡಿಯೊ ಶಪಥ ಮಾಡಿ ಸೋತಿದ್ದನ್ನ.

ಅರಮನೆ ಕಾವಲು ಲೆಕ್ಕಕ್ಕಿಲ್ಲ
ರಾಣಿಯ ರತ್ನದ ಹಾರವೆ ಮಾಯ
ಇರುಳಲಿ ಹೆಂಡಿರ ಕೊರಳಲಿ ಮಿಣಮಿಣ
ಕೊತ್ವಾಲನ ಕಷ್ಟ ತಿಮ್ಮಪ್ಪನೆ ಬಲ್ಲ

 ಸ ರಘುನಾಥ ಅಂಕಣ; ಮಳೆಯು ಬಂದಿತು ನೆಲವು ನೀರನು ಕುಡಿಯಿತು ಸ ರಘುನಾಥ ಅಂಕಣ; ಮಳೆಯು ಬಂದಿತು ನೆಲವು ನೀರನು ಕುಡಿಯಿತು

ಹಾಡು ಕೇಳಿಸಿಕೊಳ್ಳುತ್ತ ಅಮ್ಮ ನಕ್ಕಾಗ ನರಸಿಂಗರಾಯನಿಗೆ ಗೆದ್ದೆ ಅನ್ನಿಸಿತು. ಮನೆಯಲ್ಲಿದ್ದ ಅಪ್ಪನ ನಗು ಹಾಡು ಚೆನ್ನಾಗಿದೆ ಎಂಬ ಸೂಚನೆ ಕೊಟ್ಟಿತು. ಸಂಜೆ ಮುನೆಕ್ಕ, ಸುನಂದಾ ಬಂದಾಗ ಮಾಡಿದ ಮೊದಲ ಕೆಲಸ ಹಾಡು ಕೇಳಿಸಿದ್ದು. ಆ ಇಬ್ಬರೊಂದಿಗೆ ಅಮ್ಮನೂ ನಕ್ಕಳು. ಕೆಂಚಮ್ಮನೂ ನಿನ್ನ ಹಾಡಿಗೆ ತಂದುಬಿಟ್ಟಿದ್ದೀಯಲ್ಲ. ಅವಳು ಕೇಳಿದರೆ ಕುಣಿದಾಡಿಬಿಡುತ್ತಾಳೆ. ನಾಳೆ ಬರಲು ಹೇಳುತ್ತೇನೆ ಎಂದಳು ಮುನೆಕ್ಕ. ಅದೇನು ಬೇಡ. ನಾಟಕದ ದಿನ ಕೇಳಲಿ ಸುಮ್ಮನಿರು ಎಂದಳು ಅಮ್ಮಯ್ಯ.

English summary
Narasingaraya was thinking about the thief role in drama. He has written a song related to that role,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X