ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು?

By Staff
|
Google Oneindia Kannada News

(ಮುಂದುವರಿದಿದೆ...)

ಕ್ಯಾಸಲ್ ರಾಕ್ ಶಿಬಿರದ ನಂತರ ಸಫ್ದರ್ ನಾಗೋರಿಯೊಂದಿಗೆ ನಾನು ಹೈದರಾಬಾದ್ ಗೆ ಹೋದೆ. ಅಲ್ಲಿ ಸಫ್ದರ್ ಮತ್ತು ಸುಭಾನ್ ರೊಂದಿಗೆ ಸೇರಿ ನಾನು ಮೌಲಾನ ನಜೀರುದ್ದೀನ್ ಅಬ್ದುಲ್ ಅಲಿ ಮಿಸ್ಗಾಹಿ ಎಂಬುವವರನ್ನು ಭೇಟಿಯಾದೆ. ಅವರು ನಡೆಸುತ್ತಿದ್ದ ಮದರಸಾದಲ್ಲಿ ಒಂದು ರಾತ್ರಿ ಉಳಿದು ಮಾರನೆಯ ದಿನ ಅವರನ್ನು ಭೇಟಿ ಮಾಡಿದೆವು. ಅವರನ್ನು ಆನಂತರ ಪೊಲೀಸರು ಬಂಧಿಸಿದರು. ಅವರನ್ನು ಭೇಟಿಯಾಗಲು ಹೋದಾಗ ಯಾಸಿರ್‌ನ ಹಿರಿಯಣ್ಣ ಜಬೀರ್‌ನನ್ನು ಭೇಟಿಯಾದೆವು. ಅವನಿಗೆ ಮತ್ತೊಬ್ಬ ಅಣ್ಣನಿದ್ದ, ಆತ ಸೌದಿ ಅರೇಬಿಯಾದಲ್ಲಿರುವ ವಿಷಯ ತಿಳಿಯಿತು. ಸದರಿ ಜಬೀರ್ ನನ್ನು ಪರಿಚಯದ ಹಫೀಜ್ ಎಂಬಾತನಿಗೆ ಒಂದು ಹಾರ್ಡ್ ಡಿಸ್ಕ್ ಕೊಟ್ಟಿದ್ದು, ಅದರಲ್ಲಿ ಅಪಘಾನಿಸ್ತಾನ ಮತ್ತು ಇರಾಕ್‌ನ ಯುದ್ಧದ ದೃಶ್ಯಗಳಿರುವುದಾಗಿ ತಿಳಿದು ಬಂತು. ಅಮೆರಿಕವು ಮುಸ್ಲಿಮರ ಮೇಲೆ ಎಸಗಿದ ಅನ್ಯಾಯಗಳ ವಿವರಣೆ ಅದರಲ್ಲಿತ್ತು. ಅದಾದ ಮೇಲೆ ಅಬ್ದುಲ್ ಅಲಿ ಮಿಸ್ಗಾಹಿ ಅವರು ಬಂದರು. ನಾವೆಲ್ಲ ಒಟ್ಟಿಗೆ ಊಟ ಮಾಡಿದೆವು.

ಅವತ್ತು ನಡೆದ ಚರ್ಚೆಯಲ್ಲಿ ಷಾಹಜಿ ಸಾಹಿ, ಅಬ್ದುಲ್ ಬರ್ ಫಲಾಹಿ ಅತಾವುಲ್ಲಾ ವಜೀರ್ ಸಾಬ್, ಜಮೀರ್ ಸಿದ್ದೀಕಿ ಸಾಬ್ ಇವರೆಲ್ಲ ಸೇರಿ ತಂಝೀಮ್ (ಗುಂಪು) ಒಂದನ್ನು ರಚಿಸಿಕೊಂಡಿದ್ದು, ಅದಕ್ಕೆ ಅಬ್ದುಲ್ ಅಲಿ ಮಿಲ್ಗಾಹಿ ಅವರನ್ನು ಸ್ವಾಗತಿಸಿರಲಿಲ್ಲ ಎಂಬ ವಿಷಯ ತಿಳಿಸಿದರು. ಆ ಕಾರಣದಿಂದಾಗಿಯೇ ಏನೂ, ಅವರು ರಚಿಸಿಕೊಂಡ ತಂಝೀಮ್ ಧರ್ಮ ಸಮ್ಮತವಾದುದಲ್ಲವೆಂದೂ, ಅದಕ್ಕೆ ಖಚಿತವಾದ ಗುರಿ, ಸಿದ್ಧಾಂತ ಯಾವುದೂ ಇಲ್ಲವೆಂದೂ ಅಬ್ದುಲ್ ಅಲಿ ಮಿಸ್ಗಾಹಿ ಅವರ ಮೊಬೈಲ್‌ಗೆ ಮೇಲಿಂದ ಮೇಲೆ ಟೆಲಿಫೋನ್ ಕರೆಗಳು ಬರುತ್ತಿದ್ದವು. ಏಕೆಂದರೆ ಅವರ ಮಗನನ್ನು ಗುಜರಾತದ ಏನ್ ಕೌಂಟರ್ ನಲ್ಲಿ ಕೊಲೆ ಮಾಡಲಾಗಿತ್ತು. ಹೀಗಾಗಿ, ಪೊಲೀಸರ ವಿರುದ್ಧ ಮೊಕದ್ದಮೆ ಹೂಡುವಂತೆ ಪತ್ರಕರ್ತರು ಅವರನ್ನು ಒತ್ತಾಯಿಸುತ್ತಿದ್ದರು. ಅದನ್ನು ನಮಗೆ ವಿವರಿಸಿದ ಅಬ್ದುಲ್ ಅಲಿ ಮಿಸ್ಗಾಹಿ ಅವರಕು ಒಂದು ಪತ್ರಿಕಾಗೋಷ್ಠಿಯನ್ನು ಮಾತನಾಡಲು ಹೊರಟು ಹೋದರು.

ನನಗೆ ಕಂಪ್ಯೂಟರ್‌ಗಳ ಜ್ಞಾನ ಅಷ್ಟಾಗಿ ಇಲ್ಲ. ಆದರೆ ಅವತ್ತು ನಾನು ಹೈದರಾಬಾದಿನಲ್ಲಿ ಸಲಾವುದೀನ್ ಸರಾಯ್(ಛತ್ರದಂತಹುದು)ನಲ್ಲಿ ಧಡೂತಿ ದೇಹದ ಷಾಹಿದ್ ಎಂಬಾತನನ್ನು ಭೇಟಿ ಮಾಡಿದೆ. ಅವರನ್ನು ನಾನು ದಿಲ್ಲಿಯ ಸಿಮಿ ಕೇಂದ್ರ ಕಚೇರಿಯಲ್ಲಿ ನೋಡಿದ್ದೆ. ಹೈದರಾಬಾದಿನಲ್ಲಿ ನಾನು ಭೇಟಿ ಮಾಡಿದ ಸಿಮಿ ಸದಸ್ಯರೆಂದರೆ ಜಬೀರ್, ಯಾಸಿನ್ ಮತ್ತು ಮೊತಾಸಿನ್ ಮಾತ್ರ. ಸಿಮಿ ಸಂಘಟನೆ ಯಾವುದಾದರೂ ಕಾರ್ಯಾಚರಣೆ ಮಾಡುತ್ತಿದ್ದರೆ, ಅದಕ್ಕೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ (S.I.O) ಬೆಂಬಲ ನೀಡುವುದಿಲ್ಲ. ಅಂತೆಯೇ S.I.O ಮಾಡುವ ಕಾರ್ಯಾಚರಣೆಗೆ SIMI ಸಂಘಟನೆ ಬೆಂಬಲ ನೀಡುವುದಿಲ್ಲ. SIO ಸಂಘಟನೆ ಮಾಲತಃ ಜಮಾತ್-ಎ-ಇಸ್ಲಾಂನ ಅಂಗ ಸಂಸ್ಥೆಯಾಗಿರುವುದರಿಂದ ಅದು SIMI ಗಿಂತಲೂ ಹೈದರಾಬಾದ್‌ನಲ್ಲಿ ಬಲಿಷ್ಠವಾಗಿದೆ.

ಚೋರಲ್ ಶಿಬರದಲ್ಲಿ ಮುಖವಾಡಗಳನ್ನೂ, ಕೈಗೆ ತೊಟ್ಟುಕೊಳ್ಳುವ ಗ್ಲೋವ್ಸ್‌ಗಳನ್ನೂ ಬಳಸುವ ವಿಧಾನ ಹೇಳಿಕೊಡಲಾಯಿತು. ಆದರೆ ವಿಪರೀತ ಸೆಖೆಯಿರುತ್ತಿದ್ದ ಕಾರಣ ಗ್ಲೋವ್ಸ್‌ಗಳು ತೊಯ್ದು ಹೋಗುತ್ತಿದ್ದವು. ಇಂದೋರ್‌ನ ಡಾ. ಫೆಜಲ್ ಎಂಬ ವೈದ್ಯಕೀಯ ವಿದ್ಯಾರ್ಥಿ ಸಿರಿಂಜುಗಳನ್ನು ಬಳಸುವುದನ್ನು ಹೇಗೆಂಬುದನ್ನು ಶಿಬಿರಾರ್ಥಿಗಳಿಗೆ ಹೇಳಿಕೊಟ್ಟ. ಅಗತ್ಯ ಬಿದ್ದಾಗ ತೆಗೆದುಕೊಳ್ಳುವ ಮಾತ್ರೆಗಳು ಕುರಿತಾಗಿಯೂ ತಿಳಿಸಿದ ಚೋರಲ್ ಸಭೆಯಲ್ಲಿ (ಎರಡನೇ ಬಾರಿ ನಡೆದಾಗ) ನನಗೆ ಹ್ಯಾಂಡ್ ಗ್ರೆನೇಡ್‌ಗಳನ್ನು ಸಂಪಾದಿಸುವ ಕುರಿತಂತೆ ಆದೇಶ ನೀಡಲಾಯಿತು. ಅದಕ್ಕೆ ಬೇಕಾದ ಸಾಮಗ್ರಿ ಸಿಕ್ಕದ್ದೇ ಆದಲ್ಲಿ, ಒಂದು ವರ್ಷದೊಳಗೆ ನಾವೇ ಹ್ಯಾಂಡ್ ಗ್ರೆನೇಡ್‌ಗಳನ್ನು ತಯಾರಿಸಿಕೊಳ್ಳುವ ಕುರಿತಾಗಿಯೂ ನಿರ್ಣಯ ಕೈಗೊಳ್ಳಲಾಯಿತು. ಅವತ್ತಿನ ತನಕ ಹ್ಯಾಂಡ್ ಗ್ರೆನೇಡ್‌ಗಳನ್ನು ತಯಾರು ಮಾಡುವ ಫಾರ್ಮುಲಾ ನನಗೆ ಗೊತ್ತಿರಲಿಲ್ಲ. ಆದರೆ ಅದರಲ್ಲಿ ಹಫೀಜ್ ನಿಪುಣನಾಗಿದ್ದಾನೆ. ಮತೀಯ ದಂಗೆಗಳಾದಾಗ ಹ್ಯಾಂಡ್ ಗ್ರೆನೇಡ್ ಗಳನ್ನು ಬಳಸಬೇಕೆಂದು ಚೋರಲ್‌ನ ಎರಡನೇ ಶಿಬಿರದಲ್ಲಿ ತೀರ್ಮಾನಿಸಲಾಯಿತು. ನಮ್ಮ ಗುಂಪಿನವನೇ ಆದ ಸಿಬ್ಲಿ ಮೂಲತಃ ಇಂಜನಿಯರ್ ನಾಗಿದ್ದು, ಅವನಿಗೆ ಬಾಂಬ್ ಗಳನ್ನು ತಯಾರು ಮಾಡುವುದು ಚೆನ್ನಾಗಿ ಗೊತ್ತು.

ಕರ್ನಾಟಕದಲ್ಲಿ ಅರೆಸ್ಟ್

ಹುಬ್ಬಳ್ಳಿಯಲ್ಲಿದ್ದಾಗ ನಾನು ನಾಸಿರ್‌ನನ್ನು ಭೇಟಿಯಾಗಲಿಲ್ಲವಾದರೂ ಅವನು ಸಫ್ದರ್‌ನನ್ನು ಭೇಟಿಯಾಗಲು ಹಫೀಜ್‌ನ ಜೊತೆಗೆ ಭೋಪಾಲ್‌ಗೆ ಬಂದಿದ್ದನೆಂಬ ಸಂಗತಿ ನನಗೆ ಗೊತ್ತಿತ್ತು. ಹಫೀಜ್ ಮತ್ತು ನಾಸೀರ್ ಇಬ್ಬರೂ ಕರ್ನಾಟಕದವರು. ಕಳುವು ಮಾಡಿದ ಬೈಕೊಂದನ್ನು ಒಯ್ಯುತ್ತಿದ್ದಾಗ ನಾಸೀರ್ ಪೊಲೀಸರ ಕೈಗೆ ಸಿಕ್ಕುಬಿದ್ದನೆಂದೂ, ಆತ ಮೌಲಾನ ನಾಸೀರುದ್ದೀನ್ ಶಾಹ್ ಅವರ ಮಗನೆಂದೂ ನನಗ ಆನಂತರ ಗೊತ್ತಾಯಿತು. ಈ ಮಧ್ಯೆ ನಾನು ಹನ್ನೊಂದು ಪಿಸ್ತುಲುಗಳನ್ನೂ, ನಲವತ್ತು ಕಾಡತೂಸುಗಳನ್ನೂ, ಖರೀದಿಸಿದ್ದೆನಾದರೂ ಅವುಗಳಲ್ಲಿ ಹೆಚ್ಚಿನ ಪಿಸ್ತೂಲುಗಳು ಕೆಟ್ಟು ಹೋದವು. ಅವು ಮಧ್ಯೆ ಪ್ರದೇಶದ ಬುರ್ಹಾನ್ ಪುರದಲ್ಲಿ ಸಿಗುತ್ತಿದ್ದು, ಅವು ಸಿಕ್ಕುವು ಜಾಗ ಷೌಕತ್‌ಗೆ ಚೆನ್ನಾಗಿ ಗೊತ್ತು. ಕರ್ನಾಟಕದಲ್ಲಿ ಇವು ಎಲ್ಲಿ ಸಿಗುತ್ತವೆಂದು ನನಗೆ ಗೊತ್ತಿಲ್ಲ. ಮಹಾರಾಷ್ಟ್ರಕ್ಕೆ ನಾನು ಯಾವುದೇ ಆಯುಧವನ್ನು ಸರಬರಾಜು ಮಾಡಿಲ್ಲ.

ರಂಜಾನ್ ತಿಂಗಳಲ್ಲಿ ಭಾರತದಲ್ಲಿ ತಂಝೀಮ್, ಮದರಸಾ ಮತ್ತು ಸಿಮಿಗೆ ಜನ ದೇಣಿಗೆ ಕೊಡುತ್ತಾರೆ. ಇಂದೋರ್ ನಲ್ಲಿ ಮಹಮ್ಮದ್ ರಮೀಜ್ ಮತ್ತು ರಜಾಕ್ ದೇಣಿಗೆ ಸಂಗ್ರಹಿಸುತ್ತಾರೆ. ಹೆಚ್ಚಿನ ಹಣ ಬಂಧಿತರಾದ ಸಿಮಿ ಸಂಘಟನೆಯ ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡಿಸುವುದಕ್ಕೆ ಖರ್ಚಾಗುತ್ತದೆ. ಖಂಡ್ವಾದ ಸಿಮಿ ಸದಸ್ಯರ ಬಿಡುಗಡೆಗೆ ಈಗಾಗಲೇ 35 ಸಾವಿರ ರುಪಾಯಿಗಳನ್ನು ವಕೀಲರಿಗೆ ಕೊಡಲಾಗಿದೆ. ಭೋಪಾಲದಲ್ಲಿ ಒಂದು ಮನೆ ಬಾಡಿಗೆಗೆ ಹಿಡಿದು ಅದರಲ್ಲಿ ನಮ್ಮ ಕಚೇರಿ ತೆರೆಯಲಾಗಿದೆ. ನನಗೆ ಭೋಪಾಲದ ಮುನೀರ್ ದೇಶ್ ಮುಖ್ ಗೊತ್ತು. ಆತ ಕಳೆದ ಎಂಟು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ. ಐದು ವರ್ಷಗಳ ಹಿಂದೆ ಆತನನ್ನು ನಾನು ಔರಂಗಾಬಾದ್‌ನಲ್ಲಿ ಇಮ್ರಾನ್ ಮದುವೆಯಲ್ಲಿ ಭೇಟಿಯಾಗಿದ್ದೆ. ಈಗ್ಗೆ ಎರಡೂವರೆ ವರ್ಷದ ಹಿಂದೆ ಇಮ್ರಾನ್‌ನ ಬಂಧನವಾಯಿತು. ಆತ ಬಹುಶಃ ಇಂದೋರ್ ಅಥವಾ ಉತ್ತರ ಭಾರತದ ಸಾಗರ್ ಜೈಲಿನಲ್ಲಿರಬೇಕು.

ಮುಂದೆ ಓದಿ : ದಯಾನಾಯಕ್ ಮರ್ಡರ್‌ಗೆ ಸ್ಕೆಚ್ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X