ಮುತ್ತುಗಳ ಮಳೆಯನ್ನು ಸಂಜೆವರೆಗೆ ಬಿಗಿಹಿಡಿದಿರು ಸಖ...
ಈ
ಪ್ರಪಂಚದ
ಎಲ್ಲ
ಜಂಟಾಟದಿಂದ
ದೂರವಾಗಿ,
ಆ
ನಿತ್ಯ
ಹರಿದ್ವರ್ಣದ
ಕಾಡೊಳಗೆ,
ನಿನ್ನವಳಾಗಿ
ಕಾಲ
ಕಳೆಯುವ
ಆಸೆ.
ಆ
ದಿನ
ಬರುವುದೇ
ಗೆಳೆಯಾ...?
ರವಿ
ಬೆಳಗೆರೆಯ
‘ಲವ್ಲವಿಕೆ’ಯಲ್ಲಿ
ಮೂಡಿ
ಬಂದ
ಪ್ರೇಮಪತ್ರಕ್ಕೆ,
ಪ್ರತ್ಯುತ್ತರ!
- ಜಯಲಕ್ಷ್ಮಿ, ಬೆಂಗಳೂರು
ನಾಚಿದಾಗ ಮಧುಭಾಷಿಣಿ ಎಂದೆಯಾ ಗೆಳೆಯಾ? ನಾ ನಾಚಲು ಕಾರಣ ನೀ ಕಳಿಸಿದ ಒಲವಿನ ಸಿಹಿಮುತ್ತು ಎನ್ನುವುದನ್ನು ಮರೆತೆಯಾ...? ನೀನಿತ್ತ ಆ ಸಿಹಿಮುತ್ತಿನಲ್ಲಿದ್ದ ಜೇನಲ್ಲವೇ ನನ್ನ ಹೆಸರಿನಲ್ಲಿ ಒಂದಾಗಿ, ನಾನು ಮಧುಭಾಷಿಣಿಯಾಗಲು ಕಾರಣ?
ಇಂಚಿಂಚಾಗಿ ನನ್ನನ್ನರಿತ ಪ್ರಿಯಸಖ, ನಿನ್ನೀ ಬೆಚ್ಚನೆಯ ಮುತ್ತಿನಿಂದ ಮೈಬಿಗಿಯಾಗಿ, ಬಿಸಿಯಾಗಿ ಕೆಲಸಕ್ಕೆ ಹೋಗುವುದು, ಮನಸಿಟ್ಟು ಕೆಲಸಮಾಡುವುದು ಅತಿ ಕಷ್ಟ. ಅದಕ್ಕಾಗಿ ನಿನ್ನಲ್ಲೊಂದು ಸವಿನಯ ಪ್ರಾರ್ಥನೆ :
ನಿನ್ನೀ ಮುತ್ತುಗಳ ಮಳೆಯನ್ನು ಸಂಜೆಯವರೆಗೂ ನಿನ್ನಲ್ಲೇ ಬಿಗಿಹಿಡಿದಿರು. ಕಚೇರಿಯಿಂದ ಮರಳಿದ ಬಳಿಕ, ನಿನ್ನ ಪ್ರೀತಿಯ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗುವ ಆಸೆ. ನಿನ್ನಪ್ಪುಗೆಯಲ್ಲಿ ಕರಗಿಹೋಗುವ ಹೆಬ್ಬಯಕೆ. ನಿನ್ನ ಪಿಸುಮಾತುಗಳನ್ನು ಆಲಿಸುತ್ತ ಮೈಮರೆತು ನಿನ್ನಲ್ಲಿ ಒಂದಾಗುವ ಬಯಕೆ.
ನಿನ್ನೊಡಗೂಡಿ ಪ್ರಪಂಚದ ಎಲ್ಲ ಸುಖವನ್ನೂ ನನ್ನ ಮುಷ್ಟಿಯಲ್ಲಿ ಹಿಡಿದು ಮೆರೆಯಬೇಕೆನ್ನುವ ಆಸೆ. ಈ ಪ್ರಪಂಚದ ಎಲ್ಲ ಜಂಟಾಟದಿಂದ ದೂರವಾಗಿ, ಆ ನಿತ್ಯ ಹರಿದ್ವರ್ಣದ ಕಾಡೊಳಗೆ, ನಿನ್ನವಳಾಗಿ ಕಾಲ ಕಳೆಯುವ ಆಸೆ. ಆ ದಿನ ಬರುವುದೇ ಗೆಳೆಯಾ...?
ಸುಂದರ ಸ್ವಪ್ನಗಳಲ್ಲಿ ತೇಲಾಡುತ್ತಿದ್ದ ನನಗೆ(ಇಹವನ್ನು ಮರೆತು) ನಿನ್ನೀ ಓಲೆಯಿಂದ ಎಲ್ಲವೂ ಮತ್ತೆ ಬೇಕು ಎನಿಸುತ್ತಿದೆ. ಮತ್ತೆಂದು ನಮ್ಮ ಭೇಟಿ ಪ್ರಿಯಾ...?
ನಿನ್ನಮ್ಮ ಕೊಟ್ಟ ಕಾಫೀಯನ್ನು ಮರೆತು ನನ್ನನ್ನು ನೆನಪಿಸಿಕೊಂಡ ನನ್ನ ಮನಸ್ಸಾಕ್ಷಿಗೆ, ಸುಂದರ ಮುಂಜಾನೆಯ ಶುಭಕಾಮನೆಗಳು...