ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ಟಿನಲ್ಲಿ ಸೋತಿದ್ದಕ್ಕೆ ನಾರಾಯಣಮೂರ್ತಿ ಕುಟ್ಟಿದ ತವಡು!

By Staff
|
Google Oneindia Kannada News


ನಾರಾಯಣಮೂರ್ತಿಯ ಬದಲಿಗೆ ಬೆಂಗಳೂರಿನಲ್ಲೇ ಚೆಂದಾಗಿ ಕ್ರಿಕೆಟ್‌ ಆಡುವ ಹುಡುಗನೊಬ್ಬನ ಕೈಲಿ ಭಾರತದ ಸೋಲಿಗೆ ಕಾರಣವೇನು ಅಂತ ಬರೆಯಿಸಬೇಕಾಗಿತ್ತು. ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಯಥಾಪ್ರಕಾರ-ಜೀನಿಯಸ್‌ನ ಕೊರತೆ!

ಬಂದಿರುವ ಮೆಸೇಜಿನಲ್ಲಿ ಏನಿದೆ ಅಂತ ಕೂಡ ನೋಡದೆ ನಾನು ಡಿಲೀಟ್‌ ಮಾಡತೊಡಗಿದ್ದು ಕ್ರಿಕೆಟ್‌ ವರ್ಲ್ಡ್‌ಕಪ್‌ ಆಟ ಆರಂಭವಾದ ಮೇಲೆ ಮತ್ತು ಅದರಲ್ಲಿ ಭಾರತ ಸೋತ ಮೇಲೆ. ಮೊದಲೆಲ್ಲ ‘ಭಾರತ ಗೆಲ್ಲಲು ದೇವರನ್ನು ಪ್ರಾರ್ಥಿಸಿ : ಈ ಮೆಸೇಜನ್ನು ಗೆಳೆಯರಿಗೆಲ್ಲ ಕಳಿಸಿ’ ಅಂತ ಮೆಸೇಜುಗಳು ಬಂದವು.

ಭಾರತ ಸೋತು ವಾಪಸು ಬರುವುದು ಖಚಿತವಾಗುತ್ತಿದ್ದಂತೆಯೇ ‘ಇಂಡಿಯಾ ಗೇಟ್‌ ಬಳಿಗೆ ದಯವಿಟ್ಟು ಬನ್ನಿ. ಕ್ರಿಕೆಟ್ಟಿಗರ ಶಿರೋಮುಂಡನ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಚಪ್ಪಲಿ ಮತ್ತು ಮೊಟ್ಟೆ ತನ್ನಿ’ ಎಂಬರ್ಥದ ಮೆಸೇಜುಗಳು ಬರತೊಡಗಿದವು. ಅಷ್ಟರೊಳಗಾಗಿ ಧೋನಿಯ ಮನೆ ಕೆಡವಿ ಹಾಕಿದ ವಾರ್ತೆ ಬಿತ್ತರವಾಯಿತು. ಬೆಂಗಳೂರು ವಾಸಿಗಳಾದ ಮೂವರು ಕ್ರಿಕೆಟ್ಟಿಗರ ಮನೆಗಳಿಗೆ ಪೊಲೀಸ್‌ ಕಾವಲು ಹಾಕಿದ ಚಿತ್ರಗಳು ಪ್ರಕಟವಾದವು.

This is the way of Infosys Narayanamurthy’s analysis on Cricket…!ಭಾರತ ಸೋತದ್ದು ಕೇಳಿ-ಕಂಡು ಯಾರೋ ಎದೆಯಾಡೆದು ಸತ್ತರೆಂಬ ಸುದ್ದಿ ಬಂತು. ಕಡೆಗೆ ಬಂದದ್ದು ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ ಮತ್ತು ಉತ್ತಪ್ಪ ಬಾಡಿದ ಮುಖಗಳೊಂದಿಗೆ ಊರಿಗೆ ಹಿಂತಿರುಗಿದ ಸುದ್ದಿ ಮತ್ತು ಫೋಟೋಗಳು.

ಕೆಲವು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ರಸ್ತೆಯ ಒಂದು ಮುಖ್ಯ ವೃತ್ತಕ್ಕೆ ಅನಿಲ್‌ ಕುಂಬ್ಳೆಯ ಹೆಸರಿಟ್ಟಾಗ ‘ಇದು ಅವಿವೇಕದ ಕೆಲಸ’ಅಂತ ಬರೆದಿದ್ದು ನನಗೆ ನೆನಪಿದೆ. ಈಗ ಮತ್ತೆ ಅದೇ ಮಾತನ್ನ, ಅದರ ತದ್ವಿರುದ್ಧದ ಕಾರಣಕ್ಕೆ ಬರೆಯಬೇಕಿದೆ.

ಕೋಟ್ಯಂತರ ಭಾರತೀಯರು ಕ್ರಿಕೆಟ್ಟನ್ನು ಕೈಲಿದ್ದ ಕೆಲಸಬಿಟ್ಟು ಟೀವಿಗಳ ಮುಂದೆ ಹೊತ್ತಲ್ಲದ ಹೊತ್ತಿನಲ್ಲಿ ಕೂತು ನೋಡಿದರು, ನಿಜ. ಭಾರತ ಗೆಲ್ಲಲಿ ಅಂತ ಕೋಟ್ಯಂತರ ಜನ ಆಶಿಸಿದ್ದೂ ನಿಜ. ಆದರೆ ಟೀಮು ಸೋತ ತಕ್ಷಣ ಆಟಗಾರನೊಬ್ಬನ ಮನೆ ಕೆಡವಿ ಹಾಕುವಂಥ ಸಿಟ್ಟು ಬರಬೇಕಾ? ಮನೆ ಮುಂದಿನ ಬಯಲಲ್ಲಿ ಆಡುವ ಮಗು ಆಟದಲ್ಲಿ ಸೋತು ಬಂದರೆ ಅದನ್ನು ಹಿಡಿದು ಬಡಿಯುತ್ತೇವಾ? ಇಲ್ಲವಲ್ಲ. ಹಾಗಾದರೆ ಕ್ರಿಕೆಟ್ಟಿಗರ ಮೇಲೆ ಯಾಕಷ್ಟು ಸಿಟ್ಟು ಬರುತ್ತದೆ?

ಯಾಕೆ ಬರುತ್ತದೆ ಅಂದರೆ, ಲಕ್ಷಾಂತರ ರೂಪಾಯಿಗಳನ್ನು ಆಟದ ಮೇಲೆ ಬೆಟ್‌ ಕಟ್ಟಿದ ಜೂಜುಕೋರರಿರುತ್ತಾರಲ್ಲ? ಆ ದುಡ್ಡು ಕಳೆದುಕೊಂಡಿದ್ದಕ್ಕಾಗಿ ಅವರಿಗೆ ಸಿಟ್ಟು ಬರುತ್ತದೆ. ಕ್ರಿಕೆಟ್‌ ಆಟವೆಂಬುದು ಮರೆತುಹೋಗಿ ಇಸ್ಪೀಟಿನಂತಾಗುತ್ತದೆ. ಆಟಗಾರ ರೇಸು ಕುದುರೆಯಂತೆ ಕಾಣತೊಡಗುತ್ತಾನೆ. ಟೀವಿಗಳವರು ಉಂಟುಮಾಡಿದ hypeನಲ್ಲಿ ಅತಿರೇಕದ ಪಬ್ಲಿಸಿಟಿಯಲ್ಲಿ ಮೈಮರೆತ ಮನುಷ್ಯ ಆಟವೆಂಬುದನ್ನು ತನ್ನದೇ ಅಳಿವು ಉಳಿವಿನ ಪ್ರಶ್ನೆಯನ್ನಾಗಿ ತೆಗೆದುಕೊಳ್ಳತೊಡಗುತ್ತಾನೆ. ದೊಡ್ಡಮಟ್ಟದ ಜೂಜಿನಲ್ಲಿ ತೊಡಗಿಕೊಳ್ಳುತ್ತಾನಾದ್ದರಿಂದ, ಅದು ಅಳಿವು ಉಳಿವಿನ ಪ್ರಶ್ನೆಯೇ ಆಗಿಬಿಡುತ್ತದೆ.

ಬಿಡಿ, ಜೂಜು ಕಟ್ಟಿದವರಿಗೆ ಹೊಟ್ಟೆ ಸಂಕಟ. ಭಾರತದವರು ಮ್ಯಾಚ್‌ ಫಿಕ್ಸ್‌ ಮಾಡಿಕೊಂಡು ತಮ್ಮನ್ನು ಸರ್ವನಾಶ ಮಾಡಿದರು ಎಂಬ ಅಕ್ಕಸ. ಅವರ ರೇಗುವಿಕೆಗೊಂದು ಸಮರ್ಥನೆಯಿದೆ. ಆದರೆ ಈ ಇನ್ಫೋಸಿಸ್‌ ನಾರಾಯಣಮೂರ್ತಿಯಂಥವರಿಗೇನಾಗಿರುತ್ತದೆ? ‘ಟೈಮ್ಸ್‌ ಆಫ್‌ ಇಂಡಿಯಾ’ದವರೇ ಕರೆದು ಕೇಳಿದರೋ ಈ ನಾರಾಯಣಮೂರ್ತಿಗಳೇ ಕರೆದು ಹೇಳಿಕೆ ಕೊಟ್ಟರೋ ಗೊತ್ತಿಲ್ಲ : ಕ್ರಿಕೆಟ್‌ನಲ್ಲಿ ಭಾರತದ ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ‘ಟೈಮ್ಸ್‌ ಆಫ್‌ ಇಂಡಿಯಾ’ದಲ್ಲಿ ಅವರದೊಂದು ವಿಶ್ಲೇಷಣಾತ್ಮಕ ಲೇಖನ ಮುಖಪುಟದಲ್ಲಿ ಪ್ರಿಂಟಾಗುತ್ತದೆ.

ತಮಾಷೆಯ ಸಂಗತಿಯೆಂದರೆ, ಕಂಪ್ಯೂಟರ್‌ ಜಗತ್ತಿನಲ್ಲಿ ಅನೇಕ ಕಂಪೆನಿಗಳಂತೆಯೇ ಒಂದಷ್ಟು ಹೆಸರು-ದುಡ್ಡು ಸಂಪಾದಿಸಿಕೊಂಡ ಕಂಪೆನಿಯಾಂದರ ನಿವೃತ್ತ ಮುಖ್ಯಸ್ಥ ನಾರಾಯಣಮೂರ್ತಿ, ನಮ್ಮ-ನಿಮ್ಮಂತೆಯೇ ಕುಂತು ಕ್ರಿಕೆಟ್ಟು ನೋಡಿದವರೇ ಹೊರತು, ಯಾವತ್ತೂ ಕ್ರಿಕೆಟ್‌ ಆಡಿದವರಲ್ಲ. ಅಂಥದರಲ್ಲಿ ನಾರಾಯಣಮೂರ್ತಿ ಕ್ರಿಕೆಟ್‌ನ ಸೋಲಿಗೆ ಯಥಾಪ್ರಕಾರದ ತಮ್ಮ ಕಾರ್ಪೊರೇಟ್‌ ಶೈಲಿಯಲ್ಲಿ ವಿಮರ್ಶೆ ಬರೆಯತೊಡಗುತ್ತಾರೆ.

‘ನನ್ನ ಪ್ರಕಾರ ಭಾರತದ ಟೀಮ್‌ನ ಸೋಲಿಗೆ ಈ ವ್ಯವಸ್ಥೆಯೇ ಕಾರಣ. ಕ್ರಿಕೆಟ್‌ ಒಂದೇ ಅಲ್ಲ : ಎಲ್ಲ ರಂಗಗಳಲ್ಲೂ ನಾವು ಕಷ್ಟಪಟ್ಟು ಕೆಲಸ ಮಾಡಲಿಕ್ಕೆ, ಶಿಸ್ತು ರೂಢಿಸಿಕೊಳ್ಳುವುದಕ್ಕೆ ತಯಾರಿಲ್ಲ. ಬೇರೆ ದೇಶಗಳೆಲ್ಲ ಎಷ್ಟು ನೀಟಾಗಿ, ಶುಚಿಯಾಗಿ, ಸುಸಂಘಟಿತವಾಗಿ ಇರುತ್ತವೆ. ನಮ್ಮ ದೇಶದ ನಗರಗಳು-ಥತ್‌, ಕಕ್ಕ! ಏಕೆಂದರೆ ನಾವು ನಿಯಮ-ಕಾನೂನು ಗೌರವಿಸುವುದಿಲ್ಲ. ಶುದ್ಧಾನುಶುದ್ಧ ಮೆರಿಟ್ಟು, ಶ್ರಮಜೀವನ, ತರಬೇತಿಯಲ್ಲಿ ಜಾಗತಿಕ ನಿಯಮಗಳು ಮತ್ತು ಶುದ್ಧಾಂಗ ಶಿಸ್ತು ರೂಢಿಸಿಕೊಂಡರೆ ಕ್ರಿಕೆಟ್ಟೊಂದರಲ್ಲೇ ಅಲ್ಲ-ನಾವು ಎಲ್ಲ ರಂಗಗಳಲ್ಲೂ ಗೆಲ್ಲುತ್ತೇವೆ’ ಎಂಬುದು ನಾರಾಯಣಮೂರ್ತಿಗಳ ಮೊದಲ ಅಪ್ಪಣೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X