ಹೌದು,
ನಿಜಕ್ಕೂ
ಈಗ
ಉಪ್ಪಿ
ಬಾಲ
ಸುಟ್ಟ
ಬೆಕ್ಕಿನಂತಾಗಿದೆ.
‘ಮಲ್ಲ
’
ಬಿಡುಗಡೆಯಾಗದಿರಲು
ಅವನು
ಮಾಡಿದ
ಎಲ್ಲ
ಪ್ರಯತ್ನಗಳೂ
ವಿಫಲವಾಗಿದೆ.
ಅದೊಂದಿನ
ಉಪ್ಪಿಯಿದ್ದ
ಚಿತ್ರೀಕರಣ
ಸ್ಥಳಕ್ಕೆ
ಬಂದ
ಪ್ರಿಯಾಂಕ,
ತಾನು
ರವಿಚಂದ್ರನ್
ಚಿತ್ರಕ್ಕೆ
ಸಹಿ
ಹಾಕುತ್ತಿರುವ
ವಿಷಯ
ಹೇಳುತ್ತಿದ್ದಂತೆ
ಕೆಂಡಾಮಂಡಲನಾದ
ಉಪ್ಪಿ
ಅದಕ್ಕೆ
ಒಪ್ಪಿಗೆ
ನೀಡಿಲ್ಲ!
ಪ್ರಿಯಾಂಕಳದು
ಒಂದೆ
ಪಟ್ಟು
‘ಮದುವೆಯಾಗು,
ಇಲ್ದಿದ್ರೆ
ಸಿನಿಮಾ
ಮಾಡ್ತೀನಿ’.
ಕೊನೆಗೂ
ಉಪ್ಪಿ
ಒಪ್ಪಲೇ
ಇಲ್ಲ.
ಪ್ರಿಯಾಂಕ
ಸಿನಿಮಾ
ಮಾಡಿಯೇ
ತೀರುವೆ
ಎಂದು
ಹೇಳಿ
ಹೊರಟೇ
ಹೋದಳು.
ಅಂದಿನಿಂದ
ಅವರಿಬ್ಬರ
ಮಧ್ಯೆ
ಸುಮಾರು
ಎರಡು
ತಿಂಗಳ
ತನಕ
ಮಾತೇ
ಇರಲಿಲ್ಲ...
‘ಮಲ್ಲ
’ಚಿತ್ರೀಕರಣವೂ
ಮುಗಿದುಹೋಯ್ತು.
ಆ
ಸಮಯದಲ್ಲೇ
ಪ್ರಿಯಾಂಕ
ಉಪ್ಪಿಯ
ಮೇಲಿನ
ಕೋಪಕ್ಕೆ
‘ಮಲ್ಲ
’ಚಿತ್ರದಲ್ಲಿ
ಆ
ಮಟ್ಟದಲ್ಲಿ
ಎಕ್ಸ್ಪೋಷರ್ಗೆ
ಓಕೆ
ಅಂದದ್ದು.
ಥಿಯೇಟರಿನಲ್ಲಿ
ಆ
ಚಿತ್ರವನ್ನು
ನೋಡಿದ
ಉಪ್ಪಿಯ
ಅಭಿಮಾನಿಗಳೇ
ಪ್ರಿಯಾಂಕಳ
ಒಳ
ಸೌಂದರ್ಯದ
ಬಿಸಿಬಿಸಿ
ದೃಶ್ಯಗಳನ್ನು
ನೋಡುತ್ತಾ
‘ಉಪ್ಪೀ
ಎಕ್ಕುಟ್ಟಿ
ಹೋಯ್ತಲ್ಲೋ
ನಿನ್ನ
ಲೈಫು
’ಎಂದು
ಘೀಳಿಡುತ್ತಿದ್ದಾರೆ.
ಮತ್ತೊಂದು
ಕಡೆ
ಸ್ವತಃ
ಉಪ್ಪಿಯೇ
ರಾಮುವಿಗೆ
ಫೋನ್
ಮಾಡಿ
ಮೂರು
ಕೋಟಿ
ಕೊಡ್ತೀನಿ.
‘ಮಲ್ಲ’
ಚಿತ್ರವನ್ನು
ಕೊಟ್ಟು
ಬಿಡಿ.
ಅದನ್ನು
ನಾನು
ಸುಟ್ಟು
ಹಾಕ್ಬಿಡ್ತೀನಿ
ಎಂದಿದ್ದಾನೆ...
ಇನ್ನೊಂದು
ಲೈನ್ನಲ್ಲಿ
‘ರವಿಚಂದ್ರನ್
ಕುಣಿಸೋದೇ
ನನ್
‘ವೀಕ್ನೆಸ್ಸು
’
ಎಂದು
ಹಾಡುತ್ತಿದ್ದರೆ;
‘ಮಲ್ಲ’
ಚಿತ್ರವನ್ನು
ನೋಡಿದ
ಯಾವನೋ
ನಿರ್ಮಾಪಕ
‘ನಾನೇ
ಇನ್ನೊಂದೈವತ್ತು
ಲಕ್ಷ
ಕೊಡುತ್ತೇನೆ.
ನಂಗೆ
ಪ್ರಿಯಾಂಕ
ಡೇಟ್ಸ್
ಕೊಡು
ಎಂದು
ಉಪ್ಪಿಗೆ
ತಪ್ಪಿಸಿಕೊಳ್ಳಲೂ
ಬಿಡದೆ
ದುಂಬಾಲು
ಮುಂದೆ
ಎರಡು
ಕನಸಿನ
ದೃಶ್ಯ,
ಒಂದು
ಕರಾಟೆ,
ಮೂರು
ಹಾಡು,
ನಾಲ್ಕು
ಕುಣಿತ,
ಒಂದು
ಚೀರಾಟ
ಮತ್ತೊಂದು
ಕರಾಟೆ...
ಹೀಗೆ
ಎಲ್ಲೆಂದರಲ್ಲಿ
ಹಲ್ಲೆ
ನಡೆಯುತ್ತದೆ.
ಪ್ರಿಯಾಂಕಾಳನ್ನು
ಮಲ್ಲ
ಶರ್ಟಿನಂತೆ
ತೊಡುತ್ತಾನೆ,
ಪಂಚೆಯಂತೆ
ಉಡುತ್ತಾನೆ.
ಒಂದು
ದೃಶ್ಯದಲ್ಲಂತೂ
ಮಲ್ಲನ
ಮೇಲೆ
ಮಲ್ಲಿ
ಮೈ
ಚೆಲ್ಲಿ
ಮಲಗಿ
ನಿದ್ದೆ
ಮಾಡುತ್ತಾಳೆ.
ಅಲ್ಲಿಗೆ
ಸಂಪೂರ್ಣ
ಕಾಮಾಯಣ!
ಗೊತ್ತಿದ್ದೂ
ಗೊತ್ತಿದ್ದೂ...ಛೇ!
ಉಪೇಂದ್ರನನ್ನು
ಮದುವೆಯಾಗುತ್ತೇನೆ
ಅಂತ
ಗೊತ್ತಿದ್ದೂ
ಪ್ರಿಯಾಂಕ
ಇಂಥದ್ದೊಂದು
ಪಾತ್ರದಲ್ಲಿ
ಕಾಣಿಸಿಕೊಂಡಿದ್ದೇಕೆ?
ಪ್ರಿಯಾಂಕಾಳನ್ನು
ಕೇಳುವುದು
ಕಷ್ಟ.
ಆಕೆ
ಫೋನಿಗೇ
ಸಿಗುವುದಿಲ್ಲ.
ಅವಳ
ಜೊತೆ
ಮಾತಾಡುವುದಕ್ಕೆ
ಉಪೇಂದ್ರ
ಅವಕಾಶ
ಕೊಡುವುದೂ
ಇಲ್ಲ.
ಆದರೆ
ಆಕೆಯ
ವರ್ತನೆ
ನೋಡಿದರೆ
ಇದೇನೂ
ಆಕೆಯ
ಪಾಲಿಗೆ
ಅಂತ
ಆಘಾತಕಾರಿ
ನಡವಳಿಕೆಯೇನೂ
ಅಲ್ಲ.
ಕನ್ನಡದ
ಪ್ರೇಕ್ಷಕರ
ಮಟ್ಟಿಗೆ
ಇದು
ಕೊಂಚ
ಅಶ್ಲೀಲ
ಮತ್ತು
ಅತಿ
ಅನ್ನಿಸಿದರೂ
ಪ್ರಿಯಾಂಕ
ನಟಿಸಿದ
ಹಳೆಯ
ಚಿತ್ರಗಳ
ಸ್ಟಿಲ್
ನೋಡಿದರೆ
ಆಕೆ
ಇಂಥ
ಅನೇಕ
ಚಿತ್ರಗಳಲ್ಲಿ
ನಟಿಸಿದ್ದಾಳೆ
ಅನ್ನುವುದು
ಖಚಿತವಾಗುತ್ತದೆ.
ಹಾಗೆ
ನೋಡಿದರೆ
ಎಚ್ಟುಓ
ಚಿತ್ರದಲ್ಲೇ
ಉಪೇಂದ್ರ
ಆಕೆಗೆ
ಇದಕ್ಕಿಂತ
ಚಿಕ್ಕ
ಬಟ್ಟೆ
ತೊಡಿಸಿದ್ದ.
‘ರಾ
’ಎಂಬ
ತೆಲುಗು
ಚಿತ್ರದ
ಒಂದು
ದೃಶ್ಯವನ್ನು
ರಾಮೋಜಿರಾವ್
ಸ್ಟುಡಿಯೋದಲ್ಲಿ
ಕ್ಲಾಪ್ಬಾಯ್
ಮತ್ತು
ಲೈಟ್ಬಾಯ್ಗಳನ್ನೂ
ಹೊರಗೆ
ಕಳುಹಿಸಿ
ಶೂಟ್
ಮಾಡಿದ್ದನ್ನು
ಅಲ್ಲಿನ
ಹುಡುಗರು
ರೋಚಕವಾಗಿ
ಹೇಳುತ್ತಾರೆ.
ಮೊನ್ನೆ
ಮೊನ್ನೆ
ಬಿಡಿಗಡೆಯಾದ
‘ರೌಡಿ
ಅಳಿಯ’ದಲ್ಲೂ
ಪ್ರಿಯಾಂಕ
ಬಿಡುಬೀಸಾಗಿ
ನಟಿಸಿದ್ದಳು.
ಬಂಗಾಳೀ
ಕಲ್ಚರ್ರೇ
ಹಾಗೆ.
ಅಲ್ಲಿ
ಅದೆಲ್ಲ
ಮಾಮೂಲು.
ಬಂಗಾಳಿಯಿಂದ
ಬಂದ
ಋತಿಕಾಳನ್ನೇ
ನೋಡಿ.
ಅವರು
ತುಂಬ
ಪ್ರೊಫೆಶನಲ್
ಆಗಿರುತ್ತಾರೆ.
ಇಮೋಷನಲ್
ಆಗಿ
ಇನ್ವಾಲ್ವ್
ಆಗುತ್ತಾರೆ
ಕೂಡ
ಅಂತಾರೆ
ಆಕೆಯಾಂದಿಗೆ
ನಟಿಸಿದ
ಹಿರಿಯ
ನಟರೊಬ್ಬರು.
ನೋಡಬಾರದ್ದನ್ನ
ನೋಡ್ದಾ?
ರವಿ
ಮಾಡಬಾರದ್ದನ್ನು
ಮಾಡಿದ್ದನ್ನು
ಮಾಡಿದ್ದನ್ನು
ನೋಡಬಾರದ
ಉಪೇಂದ್ರ
ನೋಡಿದ್ದಾನಾ?
ಇಲ್ಲ
,
ಉಪೇಂದ್ರ
ಇನ್ನೂ
‘ಮಲ್ಲ
’ನೋಡಿಲ್ಲ.
ಆದರೆ
ಟೀವಿಯಲ್ಲಿ
ಪ್ರಸಾರವಾದ
ಮಲ್ಲದ
ಹಾಡುಗಳನ್ನು
ನೋಡಿದ್ದಾನೆ.
ಸಂಕ್ರಾಂತಿಯ
ದಿನ
ಪ್ರಸಾರವಾದ
‘ಮಲ್ಲ
’
ವಿಶೇಷ
ಕಾರ್ಯಕ್ರಮವನ್ನು
ನೋಡಿದ್ದಾನೆ.
ನೋಡಿದ
ಮೇಲೆ
ಕೊಂಚ
ಕಂಗಾಲಾಗಿದ್ದಾನೆ
ಕೂಡ.
ಆತ
ತಕ್ಷಣ
ಮಾಡಿದ್ದೆಂದರೆ
ರವಿಚಂದ್ರನ್
ಹತ್ತಿರ
ಹೋಗಿ
ಅದೊಂದು
ಹಾಡು
ಕತ್ತರಿಸಿ
ಹಾಕು
ಅಂತ
ಕೇಳಿಕೊಂಡದ್ದು.
ರವಿಚಂದ್ರನ್
ಒಪ್ಪಲಿಲ್ಲ.
ಜಾಸ್ತಿ
ಜಗ್ಗುವುದಕ್ಕೂ
ಉಪೇಂದ್ರ
ಹೋಗಲಿಲ್ಲ.
ಚಿತ್ರ
ಬಿಡುಗಡೆಯಾಗುವುದಕ್ಕೆ
ಒಂದು
ವಾರ
ಮೊದಲು
ಉಪೇಂದ್ರ,
‘ಮಲ್ಲ
’
ಬಿಡುಗಡೆಯಾಗದಂತೆ
ಸ್ಟೇ
ತರುತ್ತಾನಂತೆ
ಅನ್ನುವ
ಸುದ್ದಿ
ಓಡಾಡುತ್ತಿತ್ತು.
ಅದಕ್ಕೆ
ಉಪೇಂದ್ರ
ಯತ್ನಿಸಿದ್ದೂ
ಹೌದು.
ಆದರೆ
ಸೆನ್ಸಾರ್
ಸರ್ಟಿಫಿಕೇಟೇ
ಅಂತಿಮ
ಅನ್ನುವುದೂ,
ಸ್ವತಃ
ನಾಯಕಿಯೇ
ಸಹಿಮಾಡಿ
ಕೊಟ್ಟ
ನಂತರ
ಯಾರೇನೂ
ಮಾಡೋಕ್ಕಾಗಲ್ಲ
ಎಂಬುದೂ,
ಸ್ಟೇ
ತಂದರೆ
ಚಿತ್ರಕ್ಕೆ
ಅದೇ
ಪ್ರಚಾರವಾಗುತ್ತದೆಂಬುದೂ
ಗೊತ್ತಿದ್ದೇ
ಉಪೇಂದ್ರ
ಹಿಂದೆಗೆದನಂತೆ.