ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆರೆದ ಬಾಗಿಲು
ತೇಜಸ್ವಿ ತುಂಬ ಸೊಗಸಾಗಿ ಬರೀತಾರೆ !
ಹಾಗಂತ ತೇಜಸ್ವಿಯನ್ನು ಓದಿದವನೊಬ್ಬ ಇನ್ನೊಬ್ಬನಿಗೆ ಹೇಳಿದರೆ ಅದನ್ನು ಯಾವ ‘ಪ್ರಕಾರ’ ಎನ್ನುತ್ತೀರಿ ? ಗೊತ್ತಿಲ್ಲ .
ಹಾಗಂತ ಪಂಡಿತ ಹೇಳಿದರೆ ವಿಮರ್ಶೆಯಾಗುತ್ತದೆ. ಪತ್ರಕರ್ತ ಹೇಳಿದರೆ ಹೊಗಳಿಕೆಯಾಗುತ್ತದೆ. ಸಹಲೇಖಕ ಹೇಳಿದರೆ ರಾಜಕೀಯವಾಗುತ್ತದೆ. ತೇಜಸ್ವಿಯೇ ಹೇಳಿಕೊಂಡರೆ ಆತ್ಮರತಿಯಾಗುತ್ತದೆ. ಆದರೆ ಒಬ್ಬ ಓದುಗ ಮತ್ತೊಬ್ಬ ಓದುಗನಿಗೆ ಹೇಳಿದರೆ...
ಈ ಲೇಖನ ಮಾಲಿಕೆ ಕೂಡ ಅಷ್ಟೇ. ಇದು ಒಬ್ಬ ಓದುಗನ ತಕ್ಷಣದ ಪ್ರತಿಕ್ರಿಯೆ. ಇದರಲ್ಲಿ ಲೆಕ್ಕಾಚಾರವಾಗಲೀ, ಜಾಣತನವಾಗಲೀ ಇಲ್ಲ . ಮೊನ್ನೆ ಒಂದು ಕತೆ ಓದಿದೆ ಮಾರಾಯ... ಎಂಬಷ್ಟು ಸಲೀಸಾಗಿ ತೊಡಗಿಕೊಂಡು ನಿಂಗೇನನ್ನಿಸಿತು ಅಂತ ಕೇಳುತ್ತಾ ಮುನ್ನಡೆದು ಸಾಧ್ಯವಾದರೆ ನೀನೂ ಓದು ಅನ್ನುವ ಸಲಹೆ ಕೊಟ್ಟು ವಿರಮಿಸುವುದಷ್ಟೇ ಈ ಲೇಖನಗಳ ಕೆಲಸ.
ಬನ್ನಿ... ಎದುರುಗೊಳ್ಳಿ. ಈ ‘ತೆರೆದ ಬಾಗಿಲು’ ನಿಮ್ಮನ್ನು ಒಳಗೆ ಕರೆಯುತ್ತಿದೆ.
ಮುಖಪುಟ
/
ಅಂಕಣಗಳು
Story first published: Friday, June 13, 2003, 20:20 [IST]