ಅಲ್ಲಿಗೆ ಮುಗಿದಿತ್ತು ಊಟಿಯಲ್ಲಿ ನಮ್ಮ ಮಧುಚಂದ್ರ!
ಆಗಿನಿಂದ ನಾ ಬೇರೆ ಹುಡುಗಿಯರ ಹೆಸರು ಹೇಳೋದು ಇರ್ಲಿ ... ಯಾರದ್ರು ಯಾವ ಸ್ಟಾಪ್ ಸರ್ ಇದು ಅಂತಾ ಕೇಳಿದಾಗಲೆಲ್ಲ.. ಕಷ್ಟ ಆದರೂ ಹೇಳುತ್ತಿದ್ದೆ ..ಸುಜಾತ ಬದಲು ರಾಜಾಜಿನಗರ entrance ಸ್ಟಾಪ್ , ಕಾವೇರಿಗೆ ಪ್ಯಾಲೇಸು ಗುಟ್ಟಹಳ್ಳಿ ಸ್ಟಾಪ್ ಅಂತಾ...
"ಲೇ.. ಸುಮ್ಮನೆ ಯಾಕೆ ಆ ಹುಡುಗಿ ಹೆಸರಿನ ಮೇಲೆ ವಾದ ಮಾಡಕ್ಕತ್ತಿರಿ? ನನ್ನಂಗೆ ನೀವು ಹುಡುಗಿ ಹೆಸರಿಂದ ಕಷ್ಟಕ್ಕೆ ಸಿಕ್ಕು ಹಾಕ್ಕೋಬೇಡ್ರಲೇ" ಅಂತಾ ಅವರಿಗೆ ಬುದ್ದಿವಾದ ಹೇಳುವಾಗಲೇ ಆ "ತ್ರಿಪುರ ಸುಂದರಿ" ನಮ್ಮ ಪಕ್ಕದಲ್ಲೇ ಹಾಗೇ ವಯ್ಯಾರವಾಗಿ ಬಳುಕುತ್ತ ನಡೆದು ಬಂದೇಬಿಡೋದಾ? ನಾ ನೋಡಲು ಹತ್ತಿದ್ದೆ ಬಾಯ್ಬಿಟ್ಟು!
"ರ್ರೀ.. ನೀವೇನು ಮನೆಗೆ ಬರ್ತೀರೋ ಅಥ್ವಾ ನಿಮ್ಮ ಈ ಫ್ರೆಂಡ್ಸ್ ಜೊತೆ ಸೇರಿಕೊಂಡು ಹುಡುಗಿಯರನ್ನು ಬಾಯಿಬಿಟ್ಕೊಂಡು ನೋಡ್ತಾ ಕೂತಿರ್ತಿರೋ?" ಅಂತಾ ಸರಸಳ ಆವಾಜ್ ಕೇಳಿ ಬಂದಾಗ.. ಎಲ್ಲೇ ಸಹವಾಸಪ್ಪ..ಮತ್ತೆ ಇವತ್ತೂ ತಲೆದಿಂಬು ಹಿಡಿದು ಮಲಗೋ ಪರಿಸ್ಥಿತಿ ಬರೋದು ಬೇಡ ಎಂದು ಹಾಕಿದ್ದೆ ಧಾಪುಗಾಲು ಅವಳ ಜೊತೆ.
ಮದುವೆ ಆಗಿ ಈಗ 5 ವರ್ಷಗಳು ಉರುಳಿವೆ... ಯಾವಾಗಾದರೂ ಅವಳಿಗೆ ಸ್ವಲ್ಪ ಉರಿಸಲಿಕ್ಕೆ "ಸುಜಾತ, ಕಾವೇರಿ, ನರ್ತಕಿ ಹತ್ತಿರ ಸ್ವಲ್ಪ ಕೆಲಸ ಇದೆ .. ಹೋಗಿಬರ್ತಿನಿ" ಅಂತ ಅಂದಾಗ... ಅಡುಗೆ ಮನೆಯಿಂದ ಕೇಳಿಬಂದ ಅವಳ ಉತ್ತರ "ಸರಿ ..ರ್ರೀ ...ನಾನು ಸ್ವಲ್ಪ ಹಂಗ ವೀರೇಶ, ಗೋಪಾಲ, ಪ್ರಸನ್ನ, ಸಾಗರ್ ಹತ್ತಿರ ಹೋಗಿ ಬರ್ತೀನಿ" ಅಂತ ಅವಳಂದಾಗ.. ಬೆಚ್ಚಿ, ಮೈ ಉರಿಯುವ ಸ್ಥಿತಿ ನಂದಾಗಿತ್ತು!