ಲಕ್ಷ್ಮಿ ಎಲ್ಲಿದ್ದಾಳು : ಪುಟ-3
ಕೇಳಿದ್ದ ಕೊಡುವವಳೆ ಎಲ್ಲಿಯೂ ಹೋಗದಿರೆ
ಲಕ್ಷ್ಮಿ ಚಂಚಲಳು ಎಂಬ ಮಾತು ಹೊಸದೇನಲ್ಲ. ಈಗ ಇದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲವಾಗುವ ನೀರ ಅಲೆಯಂತೆ (' ಲಕ್ಷ್ಮೀಸ್ ತೋಯ-ತರಂಗ- ಭಂಗ ಚಪಲಾ’) ಅಸ್ಥಿರ ಸ್ವಭಾವದವಳು ಎಂಬ ಎಚ್ಚರಿಕೆ ಎಲ್ಲರೂ ಕೊಡುತ್ತಾರೆ. ' ತಾಯಿ, ಈ ಮಾತನ್ನು ಸುಳ್ಳಾಗಿಸು’, ಎಂದು ಚಮತ್ಕಾರವಾಗಿ ಹೇಳುವ ಶ್ರೀ ಪ್ರಸನ್ನ ತೀರ್ಥರ ಲಕ್ಷ್ಮೀಸ್ತುತಿಯಾಂದು ಸಹ ಇದೆ :
''
ಕೇಳಿದ್ದ
ಕೊಡುವವಳೆ,
ಚಂಚಲಳು
ನೀನೆಂದು
ಕೊಂಚ
ಭಯ
ಪಡುವವರು
ತಿಳಿಯದವರು
;
ಇರಲಿ,
ನೀ
ಬಂದೆನ್ನ
ಹೃದಯಲಿ
ಮನೆ
ಮಾಡು,
ನಿಶ್ಚಂಚಲೆಯೆ
ಆಗಿ
ನೆಲಸು,
ಸತತ
ಹರಸು!
('' ವಾಂಛಿತದಾಯಿನಿ, ಚಂಚಲಾ ತ್ವಂ ಇತಿ ಕಿಂಚಿದ್ ಅಸ್ತಿ ಭಯಂ ಅಜ್ಞ-ಜನಾನಾಮ್। ತ್ವಂ ಚ ಮದೀಯೇ ಗೃಹೇ ಸತತಂ ನಿಶ್ಚಂಚಲಾ ಭವ ಪ್ರಸನ್ನಮುಖೀ ।। ತ್ವಾಂ ವನ್ದೇ ಮಾತರಮ್ ।।’’)
ಇಂಥ ಪರಿವಾರದ- ಸಮೃದ್ಧಳಾದ ಲಕ್ಷ್ಮೀ ಎಲ್ಲಿ ಎಲ್ಲಿ ನೆಲಸಿ ಇದ್ದಾಳು ? ಪುರಾಣಗಳಲ್ಲಿ ಹಲವೆಡೆ ಇಂದ್ರ, ಬೃಹಸ್ಪತಿ, ಪ್ರಹ್ಲಾದ ಮುಂತಾದವರು ಕೇಳಿದ ಪ್ರಶ್ನೆಯೇ ಇದು. ಸಿಗುವ ಸಾಮಾನ್ಯ ಉತ್ತರ : ''ಪುಣ್ಯ, ಧರ್ಮ ಮತ್ತು ಸತ್ಯ ಇದ್ದ ಕಡೆ ಲಕ್ಷ್ಮಿ ಸದಾ ಇರುತ್ತಾಳೆ- ಎಂದು.
' ಸುಮನಸ ವಂದಿತ ಪದ ಯುಗಳೆ, ಮನಸಿಜ- ಜನಕನ ಕೋಮಲತಮ ಹೃತ್ಕಮಲದೊಳು ನೆಲಸಿದ ಈ ಶುಭಗೆ ’ ಲಕ್ಷ್ಮಿ ಬೇರೆ ಬೇರೆಯವರಿಗೆ ಬೇರೆ ಬೇರೆ ರೂಪದಲ್ಲಿ ಇದ್ದು ಕಾಣಿಸಿಕೊಂಡಾಳು- ಎಂಬ ಭಾವವನ್ನು ಮಾರ್ಕಂಡೇಯ ಪುರಾಣದ, ದೇವೀ ಮಹಾತ್ಮ್ಯ ಭಾಗದಲ್ಲಿ ನೋಡುತ್ತೇವೆ :
ಪುಣ್ಯ
ಕಾರ್ಯಗಳ
ಎಸಗುವರ
ನೆಲೆಯಲ್ಲಿ
ಸಿರಿ,
ಸಂಪತ್ತು
;
ಪಾಪಿಗಳ
ಸೆರೆಯಲ್ಲಿ
ದಾರಿದ್ರ್ಯದಾಪತ್ತು,
ದೈನ್ಯ
ವಿಪತ್ತು
;
ಸುಮನಸರ
ಹೃದಯದಲಿ
ಬೆಳಗುವ
ಬುದ್ಧಿಯ
ಮಹತ್ತು
;
ಸಜ್ಜನರ
ಶ್ರದ್ಧೆಯ
ಸೊತ್ತು,
ಕುಲೀನ
ನಾರಿಯ
ಸಹಜ
ಲಜ್ಜೆಯ
ಒತ್ತು
-
ಹೀಗೆ
ಬಗೆಬಗೆ
ರೂಪದಲಿರುವೆ
;
ಲಕ್ಷ್ಮಿ,
ಜಗವ
ಕಾಪಾಡು,
ಹೊತ್ತು
!
(ಯಾ
ಶ್ರೀಃ:
ಸ್ವಯಂ
ಸುಕೃತೀನಾಂ
ಭವನೇಷು,
ಅಲಕ್ಷ್ಮೀ:
ಪಾಪಾತ್ಮನಾಂ,
ಕೃತಧಿಯಾ
ಹೃದಯೇಷು
ಬುದ್ಧಿ
:,
ಶ್ರದ್ಧಾಂ
ಸತಾಂ,
ಕುಲಜನ-ಪ್ರಭವಸ್ಯ
ಲಜ್ಜಾ,
ತಾಂ
ತ್ವಾಂ
ನತಾ
:
ಸ್ಮ,
ಪರಿಪಾಲಯ,
ದೇವಿ,
ವಿಶ್ವಮ್
।।
)
ವ್ಯಾಸ ಭಾರತದಲ್ಲೂ ಈ ಪ್ರಶ್ನೆ ಮರುಕಳಿಸುತ್ತದೆ. ಲಕ್ಷ್ಮಿಯನ್ನೇ ನೇರವಾಗಿ ಕೇಳುವ ಪ್ರಸಂಗ ಅದು. ಕೇಳಿದವರು ಬೇರೆ ಯಾರೂ ಅಲ್ಲ, ಅವಳ ಪ್ರತಿಬಿಂಬವಾದ ರುಕ್ಮಿಣಿಯೇ:
ಯಾರು
ಯಾರುಗೆ
ಒಲಿದು
ನೀ
ನಲಿವೆ,
ಸಿರಿಯೆ?
ಯಾರು
ಯಾರಲ್ಲಿರುವೆ?
ನಿಲ್ಲುವೆಯೆ
ನೆಲಸಿ?
ಜೀವ-ಜಡ-ಜಗ-ರಕ್ಷಣೆಯ
ಪೂರಕದ
ಓ
ತತ್ತ್ವವೇ,
ಲಕ್ಷ್ಮಿಯೆ,
ನಿನ್ನ
ಮನದಿಂಗಿತವ
ತಿಳಿಯ
ಹೇಳೆ!
(ಕಾನಿ
ಇಹ
ಭೂತಾನಿ
ಉಪಸೇವಸೇ
ತ್ವಂ?
ಸಂ-ತಿಷ್ಠಸೇ
ಕಾನ್
ಇವ,
ಸೇವಸೇ
ತ್ವಂ?
ಕಾನಿ
ತ್ರಿಲೋಕೇಶ್ವರ-ಭೂತಕಾನ್ತೇ,
ತ್ತತ್ತ್ವೇನ
ಮೇ
ಬ್ರೂಹಿ,
ಮಹರ್ಷಿ-ಕನ್ಯೇ।।
-
ಮಹಾಭಾರತ,
ಅನುಶಾಸನ
ಪರ್ವ
11.4)
ಲಕುಮಿಯ ನೆಲೆಯ ನೀವ ಬಲ್ಲಿರಾ.. ನೀವು ಬಲ್ಲಿರಾ..
ತಾನು
ಎಲ್ಲಿರುತ್ತಾಳೆ,
ಇರಬಹುದು,
ಇರಬಯಸಳು-
ಎಂಬುದನ್ನ
ಲಕ್ಷ್ಮಿ
ಪಟ್ಟಿ
ಮಾಡಿ
ಹೇಳುತ್ತಾಳೆ.
ಸಾರಾಂಶಿಸಿ
ಹೇಳುವುದಾದರೆ,
ಆತ್ಮವಿಶ್ವಾಸಿಗಳಲ್ಲಿ,
ದಕ್ಷರಲ್ಲಿ,
ಸಾಹಸಿಗಳಲಿ,
ಕಾರ್ಯಕುಶಲರಲಿ,
ಜಿತೇಂದ್ರಿಯರಲಿ,
ಕೃತಜ್ಞರಲಿ,
ಕ್ರೋಧ-
ರಹಿತರಲಿ,
ಮೋಹ-ಮರೆತವರಲ್ಲಿ,
ಮದವ
ತುಳಿದವರಲ್ಲಿ,
ಸೌಂದರ್ಯದ
ನೆಲೆವೀಡಾದವರಲ್ಲಿ,
ಶುಚಿ
ಇದ್ದ
ಕಡೆಯಲ್ಲಿ,
ಗುಣದ
ಖಣಿಯಾದವರಲ್ಲಿ-
ಲಕ್ಷ್ಮಿ
ಇರಲು
ಸಂತೋಷಿಸುವಳು.
ಇದಕ್ಕೆ
ವ್ಯತಿರಿಕ್ತ
ಗುಣ
(ದೋಷ?)
ವುಳ್ಳವರನ್ನು
ಅವಳು
ಬೇಗ
ತೊರೆದು
ಹೋಗಿ
ಬಿಡುತ್ತಾಳಂತೆ!
ಸದ್ಗುಣ,
ಸಚ್ಚಾರಿತ್ರ್ಯ,
ಸದುದ್ದೇಶಗಳನ್ನೇ
ಬಾಳ
ದೀವಿಗೆಯಾಗಿ
ಉಳ್ಳವರ
ಎದೆಯಲ್ಲಂತೂ
ನೆಮ್ಮದಿಯಿಂದ
ಇರುತ್ತಾಳೆ;
ಕೇಳಿದರೆ
ಹೇಳಿಯಾಳು:
ನಂಬಿ
ಮೊರೆ
ಹೊಕ್ಕವರ,
ತುಂಬಿ
ಭಕ್ತಿಯನೊಂದೆ
ಬೇರೆಲ್ಲದಕೆ
ಬರಿದಾಗಿಸಿಕೊಂಡವರ
ಹೃದಯದಲ್ಲಿ,
ಭಾವಪರವಶರಾಗಿ
ಕರೆದವರ
ಎದುರಿನಲಿ,
ನೆನೆದವರ
ಮನದಲ್ಲಿ
ಬೇಕೆಂದ
ರೂಪದಲಿ
ಮೈದೋರುವೆ
!