ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

By Staff
|
Google Oneindia Kannada News


ಆರೋಗ್ಯ ಪ್ರಕೃತಿಯ ವರದಾನ. ರೋಗ ನಿಸರ್ಗದ ಶಾಪ. ಅರೋಗ್ಯ ಎಂದರೆ ಪ್ರಕೃತಿ, ಅನಾರೋಗ್ಯವೆಂದರೆ ವಿಕೃತಿ. ಹಿಂದಿನ ಕಾಲದಲ್ಲಿ ‘ನಿಮ್ಮ ಆರೋಗ್ಯ ಹೇಗಿದೆ?’ ಎಂದು ಕೇಳುವ ಬದಲು, ‘ನಿಮ್ಮ ಪ್ರಕೃತಿ ಹೇಗಿದೆ?’ ಎಂದು ಕೇಳುತ್ತಿದ್ದರು. ರೋಗ ಬಂದಮೇಲೆ ಅದನ್ನು ಹೋಗಲಾಡಿಸಲು ಪರದಾಡುವುದಕ್ಕಿಂತ ಅದು ಬರದಂತೆ ಎಚ್ಚರ ವಹಿಸುವುದೇ ಜಾಣತನ. ಇದೇ ಸುವರ್ಣಮಾರ್ಗ. ಈ ವಾರ ಮಲಬದ್ಧತೆ ತೊಂದರೆ, ಪರಿಹಾರಗಳತ್ತ ಗಮನಹರಿಸೋಣವೇ?


Constipation - A common ailmentಯಾವುದೇ ಬಗೆಯ ದೈಹಿಕ ವಿಕಾರವನ್ನು ಅಲಕ್ಷ್ಯಮಾಡಬಾರದು. ಕೂಡಲೇ ಯೋಗ್ಯ ಉಪಾಯ ಮಾಡಬೇಕು. ಕೆಲವರಂತೂ ಆಯುಷ್ಯದುದ್ದಕ್ಕೂ ಒಂದಿಲ್ಲೊಂದುಔಷಧಿ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಔಷಧಿ ಸೇವನೆ ಚಟವಾಗಿಬಿಟ್ಟರೆ ಅದೊಂದು ವಿಷಚಕ್ರದಂತೆ ನಮ್ಮನ್ನು ಪೀಡಿಸುತ್ತದೆ. ಅದು ಸಾಲಗಾರನಂತೆ; ಒಂದು ಸಾಲ ತೀರಿಸಲು ಹತ್ತು ಕಡೆ ಸಾಲಮಾಡುತ್ತಾನೆ.

ಔಷಧಿಯಿಂದ ಒಂದು ಕಾಯಿಲೆ ವಾಸಿಯಾದಾಗ ಬೇರೆ ಕಾಯಿಲೆಗಳು ತಲೆ ಎತ್ತಿರುತ್ತವೆ. ರೋಗವಿಲ್ಲದೆ ಬದುಕಲು ಕಲಿಯಬೇಕು. ‘ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುತ್ತಾರೆ. ಹೆಚ್ಚಿನ ಕಾಯಿಲೆಗಳು ನಮ್ಮ ತಪ್ಪು ಊಟದಿಂದ ಉಂಟಾಗುತ್ತವೆ ಎಂಬ ಎಚ್ಚರ ಬರಬೇಕಾಗಿದೆ. ಭೋಗ- ಜೀವನ ಯೋಗ-ಜೀವನವಾಗಬೇಕು, ಆಗ ಬೆಳಕನ್ನು ಕಂಡ ಕತ್ತಲೆಯಂತೆ ರೋಗಗಳು ಮಾಯವಾಗತೊಡಗುತ್ತವೆ.

ಕೆಲವು ಸಾಮಾನ್ಯ ಕಾಯಿಲೆಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತೇವೆ. ಅದು ಸರಿಯಲ್ಲ. ಅವುಗಳ ನಿವಾರಣೆಗೆ ಯೋಗ್ಯ ಆಹಾರ,ವಿಹಾರ(ವ್ಯಾಯಾಮ) ಅನುಸರಿಸಿದರೆ ಹೆಚ್ಚಿನ ಕಾಯಿಲೆಗಳನ್ನು ತಡೆಯಬಹುದು.

ಕೆಲವು ಸಾಮಾನ್ಯ ಕಾಯಿಲೆಗಳನ್ನು ನಿಸರ್ಗಚಿಕಿತ್ಸೆಯ ಉಪಕ್ರಮದಿಂದ ಹಾಗೂ ಯೋಗಾಭ್ಯಾಸದಿಂದ ಹೋಗಲಾಡಿಸಿ ಒಳ್ಳೆಯ ಆರೋಗ್ಯ ಪಡೆಯಬಹುದು. ಈ ದಿಶೆಯಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿವೆ. ಅವುಗಳನ್ನು ಅನುಸರಿಸಿದರೆ, ಜನಸಾಮಾನ್ಯರು ಕೂಡ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ.

ಮಲಬದ್ಧತೆ :

ನಾವು ಉಂಡ ಆಹಾರವು ನಮ್ಮ ದೇಹಕ್ಕೆ ಬೇಕಾದ ರಕ್ತವನ್ನು ಒದಗಿಸುತ್ತದೆ. ನಾವು ಉಂಡ ಆಹಾರದ ಹೆಚ್ಚಿನ ಭಾಗ ಮಲವಾಗಿ ಹೊರಗೆ ಹೋಗುತ್ತದೆ. ಮಲವನ್ನು ಹೊರಗೆ ಹಾಕುವ ಸಾಮಾನ್ಯ ಕ್ರಿಯೆಗೆ ಮಲವಿಸರ್ಜನೆ ಎನ್ನುತ್ತಾರೆ. ಇದನ್ನು ಶೌಚ, ಬಹಿರ್ದೇಶ, ಬಯಲುಕಡೆ ಮೊದಲಾದ ಹೆಸರಿನಿಂದಲೂ ಕರೆಯುತ್ತಾರೆ.

ನಾವು ಉಂಡ ಅನ್ನ ಪಚನವಾದರೆ ಮಲವಿಸರ್ಜನೆಯ ಕೆಲಸ ಸಲೀಸಾಗುತ್ತದೆ. ಇಲ್ಲದಿದ್ದರೆ ಮಲಬದ್ಧತೆಗೆ ಆಸ್ಪದ ಮಾಡಿಕೊಡುತ್ತದೆ. ಇದಕ್ಕೆ ‘ಕಾನ್‌ಸ್ಟಿಪೇಶನ್’ ಎನ್ನುತ್ತಾರೆ. ಮಕ್ಕಳಿಂದ ಹಿಡಿದು ಮುದುಕರ ವರೆಗೆ ಇದೊಂದು ದೇಶವನ್ನು ವ್ಯಾಪಿಸಿದ ಕಾಯಿಲೆ. ಹೆಚ್ಚಿನ ಜನರು ಇದಕ್ಕೆ ಪರಿಹಾರ ಕಂಡುಹಿಡಿಯುವುದರ ಬದಲಾಗಿ ಅದರೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಾಳಲು ಕಲಿಯುತ್ತಾರೆ. ಇದು ರಾಷ್ಟ್ರೀಯ ಮಟ್ಟದ, ಇಲ್ಲ ಅಂತಾರಾಷ್ಟ್ರೀಯ ಮಟ್ಟದ ಕಾಯಿಲೆ. ಇದನ್ನು ನಿವಾರಿಸಲು ಎಲ್ಲ ಔಷಧಿ ಕಂಪನಿಗಳು ಮಾತ್ರೆ ಒದಗಿಸುತ್ತವೆ. ರೋಗ ಗುಣವಾಗಲಿ ಬಿಡಲಿ ಕಂಪನಿಗಳಿಗೆ ಲಾಭ ಮಾತ್ರ ನಿಶ್ಚಿತ.

ಕೆಲವರಿಗೆ ಮುಂಜಾನೆ ಹೆಚ್ಚು ಸಮಯ ಟಾಯ್‌ಲೆಟ್‌ನಲ್ಲಿ ಕೂಡುವ ಅಭ್ಯಾಸವಾಗಿಬಿಡುತ್ತದೆ. ಕೆಲವರಿಗೆ ಮುಂಜಾನೆ ಚಹ ಕುಡಿಯುವ ಇಲ್ಲವೆ ಸಿಗರೇಟ್ ಸೇದುವ ಅಭ್ಯಾಸ ಅನಿವಾರ್ಯವಾಗುತ್ತದೆ. ಇನ್ನು ಕೆಲವರು ಮುಂಜಾನೆಯ ಪೇಪರ್ ಪೂರ್ತಿ ಓದುವ ವರೆಗೆ ಟಾಯ್‌ಲೆಟ್‌ನಲ್ಲೇ ಕೂತಿರುತ್ತಾರೆ. ಆಧುನಿಕ ಫ್ಲ್ಯಾಟ್‌ಗಳಲ್ಲಿ ಪ್ರತಿ ಬೆಡ್-ರೂಮ್‌ಗೂ ಆಟ್ಯಾಚ್ಡ್ ಟಾಯ್‌ಲೆಟ್ ಜೋಡಿಸಲಾಗುತ್ತದೆ. ಇದು ಮನೆಯವರಿಗೆ ಪರಿಹಾರ ನೀಡುವ ಬದಲು ಹೆಚ್ಚಿನ ಮಲಬದ್ಧತೆಯೊಂದಿಗೆ ಬದುಕಲು ಕಲಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X