ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ!
ಇಲ್ಲಿಂದ
ಅಲ್ಲಿಗೆ
ಹೋದ
ಕನ್ನಡಿಗ
"ದೆಹಲೀಲಿ
ಕನ್ನಡ
ನಡ್ಯುತ್ತೆ,
ಬಾಳಕ್ಕೆ
ಏನೇನೂ
ತೊಡಕಿಲ್ಲಾ
ಬನ್ರಪ್ಪಾ"
ಅಂತಾ
ತನ್ನ
ಬಂಧು,
ಬಳಗ,
ನೆಂಟರು
ಪಂಟರು,
ಬೆಕ್ಕು,
ನಾಯಿ,
ಅಂಗಿ,
ಚಡ್ಡಿ
ಎಲ್ಲಾನು
ಹೊತ್ಕೊಂಡು
ದೆಹಲಿಗೆ
ವಲಸೆ
ಹೋಗಲ್ವಾ?
ಇದೇ
ಗುರೂ,
ಇಲ್ಲಿ
ಹಿಂದೀಲಿ
ವ್ಯವಸ್ಥೆಗಳು
ಬಂದರೂ
ಆಗೋದು...
ಅಲ್ವಾ
ಗುರೂ!
ಮೊದಲೇ
ಜನಸಂಖ್ಯಾ
ಸ್ಫೋಟದಿಂದ
ನರುಳ್ತಾ
ಇರೋ
ಹಿಂದೀ
ಭಾಷಿಕ
ಪ್ರದೇಶಗಳ
ಜನರು
ಕಡಿಮೆ
ಜನದಟ್ಟಣೆಯ
ಕರ್ನಾಟಕದಂತಹ
ಚಿನ್ನದ
ನಾಡಿಗೆ
ಸುನಾಮಿ
ಹಾಗೆ
ನುಗ್ಗೋದು
ಖಂಡಿತಾ!
ಇದರಿಂದಾಗಿ
ನಮ್ಮೂರಲ್ಲೇ
ನಾಳೆ,
ಹಿಂದೀಯಿಲ್ಲದೆ
ನಮ್ಮ
ಮಕ್ಕಳು
ಮರಿ
ಬದುಕಲಿಕ್ಕಾಗದ
ಪರಿಸ್ಥಿತಿ
ಹುಟ್ಟುವುದಿಲ್ಲವೇ?
ಈ
ಕಾರಣಕ್ಕಾಗಿ
ಬೆಂಗಳೂರಿನ
ಮೆಟ್ರೋಲಿ
ಹಿಂದೀ
ಬೇಡ.
ಇದು
ಬರೀ
ವಲಸೆ
ಪ್ರಶ್ನೆಯಲ್ಲ!
:
ಅಷ್ಟಕ್ಕೂ
ಇದು
ಬರೀ
ವಲಸೆಯ
ಪ್ರಶ್ನೆಯೂ
ಅಲ್ಲ.
ಭಾರತ
ಒಂದು
ಒಕ್ಕೂಟ,
ಇಲ್ಲಿ
ಪ್ರತಿಯೊಂದು
ಭಾಷೆಯೂ,
ಜನಾಂಗವೂ
ಸಮಾನ.
ಪ್ರತಿಯೊಬ್ಬ
ನಾಗರೀಕನಿಗೂ
ಸಮಾನ
ಹಕ್ಕುಗಳಿವೆ
ಎನ್ನುವ
ಕೇಂದ್ರ
ಸರ್ಕಾರ
ಬೆಂಗಳೂರಿನ
ಮೆಟ್ರೋಲಿ
ಪಾಲು
ಹೊಂದಿದೆ
ಎನ್ನುವ
ಕಾರಣಕ್ಕೆ
ಹಿಂದೀಲಿ
ಸೇವೆ
ಕೊಡಬೇಕು
ಅನ್ನೋದು
ಯಾವ
ಸೀಮೆಯ
ಸಮಾನತೆ?
ಕನ್ನಡಿಗರಿಗೆ
(ಉಳಿದೆಲ್ಲಾ
ಭಾಷಿಕರಿಗೂ)
ಇಂಥದೇ
ಸೇವೆಯನ್ನು
ದೇಶದ
ಎಲ್ಲಾ
ಮೂಲೆಯಲ್ಲೂ
ಒದಗಿಸಿಕೊಡುತ್ತದೆಯೇ?
ಇಲ್ಲದಿದ್ದರೆ
ಹಿಂದೀ
ಭಾಷೆಯವರಿಗೆ
ಮಾತ್ರಾ
ವಿಶೇಷ
ಸವಲತ್ತು
ಒದಗಿಸಿಕೊಡುವ
ಇಂತಹ
ನೀತಿ
ಏನನ್ನು
ಸಾರುತ್ತದೆ?
ವೈವಿಧ್ಯತೆಯಲ್ಲಿ
ಏಕತೆಯನ್ನೆ?
ಹಿಂದೀ
ಸಾಮ್ರಾಜ್ಯಶಾಹಿಯನ್ನೇ?
ಸರಿಯಾದ
ವ್ಯವಸ್ಥೆಯನ್ನು
ಕಟ್ಟುವ
ಯೋಗ್ಯತೆ
ಸರ್ಕಾರಕ್ಕಿಲ್ಲದಿದ್ದಲ್ಲಿ
ಬೇರೆ
ಬೇರೆ
ದೇಶಗಳಲ್ಲಿನ
ವ್ಯವಸ್ಥೆ
ನೋಡಿ
ಕಲಿಯಲಿ...
ಅಲ್ವಾ
ಗುರೂ!
ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲಿಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲಿಷ್ ಒಪ್ಪಿದರೆ, ಇಂಗ್ಲಿಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ... ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ ಭೂಪಟದಿಂದಲೇ ಹೊಸಕಿ ಹಾಕುತ್ತದೆ.