ಊರು ಹೋಗು ಅನ್ನೋ ಕಾಲದಲ್ಲೂ ರಾಜಕೀಯ ಬಾ ಅನ್ನುತ್ತೆ!
ರಾಜಕಾರಣಕ್ಕೆ ವಯಸ್ಸಿನ ಹಂಗಿಲ್ಲ. ಎಷ್ಟೇ ವಯಸ್ಸಾದರೂ ಸರಿಯೇ, ಈ ಅಧಿಕಾರದ ವಾಂಛೆ ಅಷ್ಟು ಸುಲಭಕ್ಕೆಲ್ಲ ಬಿಟ್ಟು ಹೋಗುವುದಲ್ಲ. ಅತ್ತ ಊರು ಹೋಗು ಎಂದು ಕೈತೋರಿಸಿ ಆಚೆ ಕಳಿಸುತ್ತಿದ್ದರೂ, ರಾಜಕಾರಣ ಮಾತ್ರ ಬಾ ಅನ್ನುತ್ತಿರುತ್ತೆ! ಕೊನೆ ಉಸಿರಿರುವವರೆಗೂ ನನ್ನ ಜೀವನ ರಾಜಕೀಯಕ್ಕೇ ಮುಡಿಪು ಎಂದುಕೊಂಡವರೆಲ್ಲ ಹಾಗೆಯೇ!
ಕಾರ್ಟೂನಿಸ್ಟ್ ಎಂ ಎನ್ ದತ್ತಾತ್ರಿಯವರು ಈ ಕಾರ್ಟೂನ್ ಮೂಲಕ ಅದನ್ನೇ ಹೇಳಿದ್ದಾರೆ. ರಾಜಕಾರಣಿ ತನ್ನ ಕೆಲಸವನ್ನೂ ತಾನು ಮಾಡಿಕೊಳ್ಳುವುದಕ್ಕಾಗದಷ್ಟು ವಯಸ್ಸಾಗಿದ್ದರೂ ಜನಸೇವೆ ಮಾಡುತ್ತೀನಿ ಎನ್ನುತ್ತಿದ್ದಾರೆ ಇಲ್ಲಿ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ರಾಜಕಾರಣದಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು, ಯುವ ನಾಯಕರನ್ನು ಬೆಳೆಸಬೇಕು ಎಂಬ ಕೂಗು ಕೇಳಿಬರುತ್ತಿರುವ ಹೊತ್ತಲ್ಲಿ ಈ ಕಾರ್ಟೂನ್ ಸಕಾಲಿಕವೆನ್ನಿಸಿದೆ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15 ರಂದು ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಎಷ್ಟು ಯುವ ರಾಜಕಾರಣಿಗಳು ಅವಕಾಶ ಪಡೆಯುತ್ತಾರೆ ಎಂಬುದನ್ನು ಅಲ್ಲಿಯವರೆಗೂ ಕಾದು ನೋಡಬೇಕು!
ರಾಜಕಾರಣಿಗಳ ಬೊಜ್ಜಿಗೆ ಭ್ರಷ್ಟಾಚಾರ ನಿಲ್ಲಿಸೋದೇ ಡಯೆಟ್!