ರಾಜಕಾರಣಿಗಳ ಬೊಜ್ಜಿಗೆ ಭ್ರಷ್ಟಾಚಾರ ನಿಲ್ಲಿಸೋದೇ ಡಯೆಟ್!
ರಾಜಕಾರಣಿಗಳಿಗೂ ಬೊಜ್ಜಿಗೂ ಅವಿನಾಭಾವ ಸಂಬಂಧ. ಎಷ್ಟೇ ಸ್ಲಿಮ್ಮು, ಹ್ಯಾಂಡ್ಸಮ್ ಇರುವವರಾದರೂ ಆ ರಾಜಕೀಯದ ಅಂಗಳಕ್ಕೆ ಇಳಿದರೆ ಸಾಕು ತಾನೇ ತಾನಾಗಿ ಬೊಜ್ಜು ಆವರಿಸುತ್ತದೆ.
ಹಣವನ್ನು ಕೊಳ್ಳೆ ಹೊಡೆದು, ತಿಂದು ತಿಂದು ಬೊಜ್ಜು ಬೆಳಸಿಕೊಳ್ಳುವ ರಾಜಕಾರಣಿಗಳಿಗೆ ಬೊಜ್ಜು ಕರಗಿಸಿಕೊಳ್ಳುವ ಸಲಹೆ ಅಪಥ್ಯವೇ. ಆದರೂ ಈ ಕಾರ್ಟೂನ್ ಮೂಲಕ ಅಂಥದೊಂದು ಸಲಹೆ ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ರಾಜಕಾರಣಿಗಳು ಬೊಜ್ಜು ಕರಗಿಸಿಕೊಂಡರೆ ನಮಗೂ ಮಾರುದ್ದ ಬಟ್ಟೆ ಕಟ್ ಮಾಡೋ ತಾಪತ್ರಯವಿಲ್ಲ ಎನ್ನುತ್ತಿದ್ದಾರೆ ಟೈಲರ್ ಗಳು! ರಾಜಕಾರಣಿಗಳ ಬೊಜ್ಜಿನ ಪರಿಹಾರಕ್ಕಿರುವ ಡಯಟ್ ಎಂದರೆ ಭ್ರಷ್ಟಾಚಾರ ಬಿಡುವುದು!
ಕಾರ್ಟೂನ್: ಸಾಮಾನ್ಯ ಮತದಾರನಿಗೆ ಕನ್ಫ್ಯೂಶನ್ನೋ ಕನ್ಫ್ಯೂಶನ್!
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12 ರಂದು ನಡೆಯಲಿದ್ದು ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಕುರಿತು, ರಾಜಕಾರಣಿಗಳನ್ನು ಕುರಿತು ಹುಟ್ಟಿಕೊಳ್ಳುತ್ತಿರುವ ತರಹೇವಾರಿ ಜೋಕುಗಳು ಚುನಾವಣಾ ರಂಗಕ್ಕೆ ಮೊನಚಿನ ಪರಿಭಾಷೆ ಬರೆದಿವೆ. ಕಾರ್ಟೂನಿಸ್ಟ್ ಶಂಕರ್ ಅವೆರ ಅಂಥದೊಂದು ಮೊನಚು ಕಾರ್ಟೂನ್ ಇಲ್ಲಿದೆ.