ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 varsha bhavishya: ಮೇಷದಿಂದ ಕನ್ಯಾದ ತನಕ ರಾಶಿ ಭವಿಷ್ಯ

By ಶ್ರೀ ಶ್ರೀನಿವಾಸ್ ಗುರೂಜಿ
|
Google Oneindia Kannada News

2021ರ ವರ್ಷ ಭವಿಷ್ಯದ ಬಗೆಗಿನ ಲೇಖನ ಇದು. ಒಂದು ವರ್ಷ ಮೇಷದಿಂದ ಕನ್ಯಾ ರಾಶಿಯ ತನಕ ಯಾರಿಗೆ ಹೇಗಿದೆ ಏರಿಳಿತಗಳು ಎಂದು ತಿಳಿಯುವುದಕ್ಕೆ ಈ ಲೇಖನ ಸಹಾಯ ಮಾಡಲಿದೆ. ಏಪ್ರಿಲ್ ಆರಂಭದ ತನಕ ಗುರು ಮಕರ ರಾಶಿಯಲ್ಲಿದ್ದು, ಆ ನಂತರ ಕುಂಭ ರಾಶಿಗೆ ಪ್ರವೇಶ ಆಗುತ್ತದೆ. ಸೆಪ್ಟೆಂಬರ್ ತನಕ ಅಲ್ಲೇ ಇರುತ್ತದೆ.

ಆ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಮಕರ ರಾಶಿಯಲ್ಲಿದ್ದು, ಮತ್ತೆ ಕುಂಭಕ್ಕೆ ಪ್ರವೇಶ ಆಗುತ್ತದೆ. ವರ್ಷದ ಕೊನೆಯ ತನಕ ಗುರು ಕುಂಭ ರಾಶಿಯಲ್ಲಿ ಇದ್ದರೆ, ಶನಿ ಮಕರ ರಾಶಿಯಲ್ಲಿ, ರಾಹು ವೃಷಭ ಹಾಗೂ ಕೇತು ವೃಶ್ಚಿಕದಲ್ಲಿ ವರ್ಷ ಪೂರ್ತಿ ಇರುತ್ತವೆ. ಇನ್ನುಳಿದಂತೆ ಬಹುತೇಕ ಗ್ರಹಗಳು ದಿನದಿನಕ್ಕೂ, ಪ್ರತಿ ತಿಂಗಳು ಬದಲಾವಣೆ ಆಗುತ್ತವೆ.

ಆದ್ದರಿಂದ ಪ್ರಮುಖ ಗ್ರಹಗಳು ಎನಿಸಿದ ಗುರು, ಶನಿ, ರಾಹು- ಕೇತು ಗ್ರಹಗಳನ್ನು ಗಣನೆಗೆ ತೆಗೆದುಕೊಂಡು, ರಾಶಿ ಭವಿಷ್ಯದ ಬಗ್ಗೆ ತಿಳಿಸಲಾಗುತ್ತಿದೆ. ಇನ್ನು ಆಯಾ ವ್ಯಕ್ತಿಯ ಜನ್ಮ ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿ ಹಾಗೂ ದಶಾ ಕಾಲ ಮುಖ್ಯವಾಗುತ್ತದೆ. ಆದ್ದರಿಂದ ವೈಯಕ್ತಿಕ ಜಾತಕವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ. ಪ್ರೀತಿಯಲ್ಲಿ ನಂಬಿ ಮೋಸ. ಅತ್ತೆ-ಸೊಸೆ ಕಲಹ. ಹಣಕಾಸಿನ ತೊಂದರೆ. ಮದುವೆಯಲ್ಲಿ ಅಡೆತಡೆ. ಸತಿ ಪತಿ ಕಲಹ. ಸಂತಾನ ಸಮಸ್ಯೆ. ಆರೋಗ್ಯ. ಉದ್ಯೋಗ. ಸಾಲ ಭಾದ ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ್, ಬೆಂಗಳೂರು. ಮೊ. 9986623344

ಮೇಷ

ಮೇಷ

ಈ ವರ್ಷದ ಮೊದಲ ಮೂರು ತಿಂಗಳು ಹಿಡಿದ ಕೆಲಸದಲ್ಲಿ ಅಂದುಕೊಂಡಂಥ ಬೆಳವಣಿಗೆ ನಿರೀಕ್ಷೆ ಮಾಡುವುದು ಕಷ್ಟ. ಅದರಲ್ಲೂ ವೃತ್ತಿ- ಉದ್ಯೋಗದಲ್ಲಿ ಪ್ರಗತಿ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಆದರೆ ಏಪ್ರಿಲ್ ನಿಂದ ಅಂದುಕೊಂಡಂಥ ಫಲಿತಾಂಶ ದೊರೆಯಲು ಶುರುವಾಗುತ್ತದೆ. ಆದರೆ ಹಣ ಬಂತು ಎಂಬ ಕಾರಣಕ್ಕೆ ಭೂಮಿ ಮೇಲೆ ಹೂಡಿಕೆ ಮಾಡಿ, ಹಣ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಹೊರಟು ನಿಲ್ಲದಿರಿ. ಸಾಲ ತೀರಿಸಿಕೊಳ್ಳುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಅಜ್ಜ- ಅಜ್ಜಿ ಅಥವಾ ವಯಸ್ಸಾದ ತಂದೆ, ತಾಯಿಯನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಬೇಡಿ. ಆಸ್ತಿ ದಾಖಲೆ ಪತ್ರಗಳನ್ನು ದೂರ ಪ್ರದೇಶಗಳಿಗೆ ತೆಗೆದುಕೊಂಡು ಹೋಗದಿರಿ. ಸುಲಭವಾಗಿ ಹಣ ಬರುತ್ತದೆ ಎಂಬ ಆಸೆ ತೋರಿಸಿ, ಕೆಲವು ದುರ್ಜನರು ನಿಮಗೆ ಹತ್ತಿರ ಆಗಲಿದ್ದಾರೆ. ಅಂಥವರಿಂದ ಎಚ್ಚರಿಕೆಯಿಂದ ಇರಬೇಕು. ಸೆಪ್ಟೆಂಬರ್ ನಿಂದ ನವೆಂಬರ್ ತನಕ ಉದ್ಯೋಗ ಸ್ಥಳದಲ್ಲಿ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಬೇರೆಯವರಿಗೆ ಅದನ್ನು ವರ್ಗಾಯಿಸದಿರಿ. ದೇವರ ಮೇಲೆ ನಂಬಿಕೆ ಇರಲಿ. ಆ ನಂತರ ಅಂದರೆ ನವೆಂಬರ್ ನಲ್ಲಿ ಉದ್ಯೋಗ ಬದಲಾವಣೆಗೆ ಪ್ರಯತ್ನಿಸಬಹುದು. ಹೊಸ ವ್ಯಾಪಾರ- ವ್ಯವಹಾರ, ಭೂಮಿ ಮೇಲಿನ ಹೂಡಿಕೆ, ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ.

ವೃಷಭ

ವೃಷಭ

ಪಿತ್ರಾರ್ಜಿತವಾದ ಆಸ್ತಿ ಬರಬೇಕಿದ್ದಲ್ಲಿ ತಡವಾಗಲಿದೆ. ತಂದೆಯೊಂದಿಗೆ ವಿನಾಕಾರಣ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗಬಹುದು. ಹಿಡಿದ ಕೆಲಸಗಳು ಒಂದು ಸಲಕ್ಕೆ ಪೂರ್ತಿ ಮಾಡುವುದು ಕಷ್ಟವಾಗಲಿದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಉದ್ಯೋಗದಲ್ಲಿ ಬಡ್ತಿ ಹಾಗೂ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಪಡೆಯುವುದಕ್ಕೆ ಅವಕಾಶ ಇದೆ. ಆದರೆ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ತಾಳ್ಮೆ- ಸಂಯಮ ತಂದುಕೊಳ್ಳಬೇಕು. ಈ ಅವಧಿಯಲ್ಲಿ ಆಪ್ತರಿಂದ ಅಗುವ ಯೋಗ ಇದೆ. ಇನ್ನು ಚಾಡಿ ಮಾತುಗಳನ್ನು ಕೇಳದಿರಿ. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಗಳನ್ನು ಮುಗಿಸಿಕೊಡುವ ಕಡೆಗೆ ಹೆಚ್ಚಿನ ನಿಗಾ ಮಾಡಿ. ಏಕೆಂದರೆ ವರ್ಷದ ಮೊದಲ ಮೂರು ತಿಂಗಳು ಎಲ್ಲವೂ ಸರಿಯಿದೆ ಎಂಬ ಭಾವನೆ ಇದ್ದರೂ ನಿಮ್ಮ ಒಳಗೊಂದು ಅಸಮಾಧಾನ ಇದ್ದೇ ಇರುತ್ತದೆ. ಆದರೆ ಏಪ್ರಿಲ್ ನಿಂದ ನಿಮ್ಮ ನಿರ್ಧಾರಗಳು ಸರಿ ಆಗುತ್ತಾ ಸಾಗುತ್ತವೆ. ಯಾವ ವಿಚಾರದಲ್ಲೂ ಅತಿಯಾದ ಆತ್ಮವಿಶ್ವಾಸ ಮಾಡಬೇಡಿ. ಇನ್ನು ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಲೋಚನೆ ಕೂಡ ಮಾಡಬೇಡಿ. ಮತ್ತೆ ಈ ವರ್ಷದ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಉದ್ಯೋಗದ ಕಡೆಗೆ ಹೆಚ್ಚಿನ ನಿಗಾ ಮಾಡಿ. ನಿಮ್ಮನ್ನು ಹೊಗಳುತ್ತಾ ಹೊಗಳುತ್ತಲೇ ಸಂಕಷ್ಟಕ್ಕೆ ಸಿಲುಕಿಸುತ್ತಾರೆ, ಎಚ್ಚರದಿಂದ ಇರಿ.

ಮಿಥುನ

ಮಿಥುನ

ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವರ್ಷದ ಮೊದಲ ಮೂರು ತಿಂಗಳು ಆರೋಗ್ಯ ಸಮಸ್ಯೆ, ಸಾಲಗಾರರ ಒತ್ತಡ, ಆಪ್ತರಿಂದ ದೂರವಾಗುವುದು, ಅವಮಾನ ಎದುರಿಸುವುದು, ನಿರೀಕ್ಷೆಗಿಂತ ಸಿಕ್ಕಾಪಟ್ಟೆ ಖರ್ಚು, ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಹೀಗೆ ನೆಮ್ಮದಿ ಹಾಳಾಗುವಂಥ ವಿದ್ಯಮಾನಗಳು ನಡೆಯುತ್ತವೆ. ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಸ್ವಲ್ಪ ಮಟ್ಟಿಗೆ ನಿರಾಳ ಆಗಬಹುದು. ಆದರೆ ಮತ್ತೆ ಅಲ್ಲಿಂದ ನವೆಂಬರ್ ತನಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೆನಪಿನಲ್ಲಿಡಿ, ಈ ವರ್ಷ ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಕಾನೂನು ತೊಡಕುಗಳು ಎದುರಾಗುವ ಯೋಗ ಕೂಡ ಇದೆ. ಇತರರ ಸಾಲಗಳಿಗೆ ಜಾಮೀನಾಗಿ ನಿಲ್ಲಬೇಡಿ. ಸಟ್ಟಾ ವ್ಯವಹಾರಗಳ ಮೂಲಕ ಹಣ ಬರುವ ಸಾಧ್ಯತೆ ಇದೆ. ಆದರೆ ಹಾಗಂತ ಸಾಲ ಮಾಡಿ, ಹಣ ತೊಡಗಿಸಬೇಡಿ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡದಿರಿ ಹಾಗೂ ದೂರ ಪ್ರಯಾಣಗಳಿಗೆ ನೀವೇ ವಾಹನ ಚಾಲನೆ ಮಾಡದಿರಿ. ಇನ್ನು ವೃತ್ತಿಯೇ ಚಾಲನೆ ಆಗಿದ್ದಲ್ಲಿ ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಬೇಡ. ನಿಮ್ಮ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿ. ಇನ್ನು ಗುರು ಹಾಗೂ ಶನೈಶ್ಚರ ಆರಾಧನೆಯನ್ನು ಮಾಡಿಸಿಕೊಳ್ಳಿ.

ಕರ್ಕಾಟಕ

ಕರ್ಕಾಟಕ

ಮದುವೆ ನಿಶ್ಚಯ ಆಗಿರುವವರು, ಮದುವೆ ಆಗಬೇಕು ಎಂದುಕೊಂಡಿರುವವರಿಗೆ ಎಚ್ಚರಿಕೆ ಮಾತುಗಳನ್ನು ಹೇಳಲೇಬೇಕಿದೆ. ಏಕೆಂದರೆ, ನಿಮ್ಮ ಬಗ್ಗೆ ಅಥವಾ ನೀವು ಮದುವೆ ಆಗಬೇಕು ಎಂದಿರುವವರ ಬಗ್ಗೆ ಇಲ್ಲಸಲ್ಲದ ವಿಚಾರ ಹೇಳಿ, ಮದುವೆ ನಿಂತುಹೋಗುವ ಸಾಧ್ಯತೆ ಇರುತ್ತದೆ. ಇನ್ನು ವಿವಾಹಕ್ಕೆ ವಧು ಅಥವಾ ವರ ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ಕೂಡ ದೊರೆಯುವುದು ಕಷ್ಟ. ಇನ್ನು ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯ ಏರ್ಪಟ್ಟು, ಡೈವೋರ್ಸ್ ತನಕ ಹೋಗಬಹುದು. ಆದ್ದರಿಂದ ಮಾತಿಗೆ ಮಾತು ಬೆಳೆಸಬೇಡಿ. ಇನ್ನು ಹಿರಿಯರ ಮೂಲಕ ಹಾಗೂ ವಿದೇಶಗಳಲ್ಲಿ ಇರುವ ಸಂಬಂಧಿಗಳು, ಮಕ್ಕಳ ಮೂಲಕ ಹಣ ಬರುವ, ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ. ನೀವು ಮಾಡಿರುವ ಹೂಡಿಕೆಗೆ ಒಳ್ಳೆ ರಿಟರ್ನ್ಸ್ ಕೂಡ ಬರುವ ಸಾಧ್ಯತೆಗಳಿವೆ. ಆದರೆ ನೀವು ಪಾರ್ಟನರ್ ಷಿಪ್ ವ್ಯವಹಾರಕ್ಕೆ ಹೋಗಬಾರದು. ಇನ್ನು ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ನಷ್ಟವಾಗುತ್ತದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಹಾಗೂ ನವೆಂಬರ್ ಕೊನೆ ಮತ್ತು ಡಿಸೆಂಬರ್ ನಲ್ಲಿ ತೂಕದ ಕಡೆಗೆ ಗಮನ ನೀಡಿ. ಮಧುಮೇಹ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಹಾಗೂ ಉಲ್ಬಣಿಸಬಹುದು. ಶಸ್ತ್ರಚಿಕಿತ್ಸೆಗಳಾಗುವ ಸಾಧ್ಯತೆಯೂ ಇದೆ. ಹೆಣ್ಣುಮಕ್ಕಳಿಗೆ ಅಪವಾದಗಳು ಬರುತ್ತವೆ. ಇನ್ನು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆ ಆಗುವ ಯೋಗ ಇದೆ. ಆದ್ದರಿಂದ ಶನೈಶ್ಚರ ಆರಾಧನೆ ಜತೆಗೆ ಕಲಬುರ್ಗಿಯಲ್ಲಿನ ಗಾಣಗಾಪುರದ ದತ್ತಾತ್ರೇಯರ ಅಥವಾ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ.

ಸಿಂಹ

ಸಿಂಹ

ಹಣ ಬರುತ್ತದೆ. ಉದ್ಯೋಗದಲ್ಲಿ ನಿಮಗೆ ಒತ್ತಡ ಕಡಿಮೆ ಆಗಿದೆ. ಸುಖವಾಗಿ ಇದ್ದೇನೆ ಎಂದು ಮೈ ಮರೆಯದಿರಿ. ಜನವರಿಯಿಂದ ಏಪ್ರಿಲ್ ಆರಂಭದ ತನಕ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ತನಕ ಶತ್ರುಗಳ ಕಾಟ ಇರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ. ಭೂಮಿ ಖರೀದಿ, ಮನೆ ನಿರ್ಮಾಣ, ವಾಹನ ಖರೀದಿ, ವ್ಯಾಪಾರ ವಿಸ್ತರಣೆ, ಹೊಸದಾಗಿ ಹಣಕಾಸು ಹೂಡಿಕೆ, ವಿದೇಶ ಪ್ರಯಾಣ ಮೊದಲಾದ ಶುಭ ಫಲಗಳು ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಹಾಗೂ ನವೆಂಬರ್ ನಂತರ ಕಾಣಲಿದ್ದೀರಿ. ಆದರೆ ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ. ಅತಿಯಾದ ಆತ್ಮವಿಶ್ವಾಸ ಬೇಡ. ಸುಖದಲ್ಲಿ ಮೈ ಮರೆಯದಿರಿ. ನಿಮ್ಮನ್ನು ಹೊಗಳುತ್ತಾ ಕೆಲವು ಚಟ ಹತ್ತಿಸಿ ಬಿಡುವಂಥ ವ್ಯಕ್ತಿಗಳ ಬಗ್ಗೆ ಬಹಳ ಎಚ್ಚರಿಕೆ ಅಗತ್ಯ. ಸಾಮಾನ್ಯವಾಗಿ ಶೀಘ್ರ ಕೋಪಿಗಳಾದ ನೀವು ಜನವರಿಯಿಂದ ಏಪ್ರಿಲ್ ಮೊದಲ ವಾರದ ತನಕ ಹಾಗೂ ಸೆಪ್ಟೆಂಬರ್ ನಿಂದ ನವೆಂಬರ್ ಕೊನೆ ತನಕ ಬಹಳ ಸಂಯಮದಿಂದ ಇರಬೇಕು. ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು ಅಥವಾ ನಿಮಗೆ ಬರಬೇಕಾದ ಯಾವುದಾದರೂ ಹಣ ಬರಬಹುದು. ಅದರಲ್ಲೂ ಏಪ್ರಿಲ್ ನಿಂದ ಸೆಪ್ಟೆಂಬರ್ ಹಾಗೂ ನವೆಂಬರ್- ಡಿಸೆಂಬರ್ ನಲ್ಲಿ ಅತ್ತೆ ಅಥವಾ ತಾಯಿಯ ಕಡೆಯಿಂದ ಒಡವೆ ಬರುವ ಅಥವಾ ತಂದೆ- ಸೋದರ ಒಡವೆ ಮಾಡಿಸಿಕೊಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ಅವಕಾಶ ಸಿಗಲಿದೆ. ಇನ್ನು ಅವಿವಾಹಿತರಿಗೆ ಸೂಕ್ತ ಸಂಬಂಧ ದೊರೆಯಲಿದೆ.

ಕನ್ಯಾ

ಕನ್ಯಾ

ಮಕ್ಕಳ ಏಳ್ಗೆ ಹಾಗೂ ಪ್ರಗತಿಯಲ್ಲಿ ಮಿಶ್ರ ಫಲಗಳನ್ನು ಕಾಣಬೇಕಾಗುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಬಂತು ಅಂದುಕೊಳ್ಳುವಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಸೂಕ್ತ ಸಮಯಕ್ಕೆ ಔಷಧೋಪಚಾರ ಮಾಡುವುದರಲ್ಲಿ ತಡವಾಗದಂತೆ ನೋಡಿಕೊಳ್ಳಿ. ಭೂಮಿ- ಆಸ್ತಿ ಖರೀದಿ ಮಾರಾಟದಲ್ಲಿ ಆದಾಯ- ಪ್ರಗತಿ ಕಾಣುವ ಯೋಗ ಇದ್ದರೂ ಕಾನೂನು ತೊಡಕುಗಳಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ಅದಕ್ಕೆ ಕಾರಣ ತಿಳಿದುಕೊಳ್ಳುವುದು ಕಷ್ಟವಾಗಲಿದೆ. ವೈದ್ಯಕೀಯ ವೆಚ್ಚಗಳು ವಿಪರೀತ ಹೆಚ್ಚಾಗುತ್ತದೆ. ಜನವರಿಯಿಂದ ಏಪ್ರಿಲ್ ಮೊದಲ ವಾರದ ತನಕ ಹೇಗೋ ಮಿಶ್ರ ಫಲಗಳು ಅನುಭವಕ್ಕೆ ಬರುತ್ತವೆ. ಆ ನಂತರ ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ ಹಾಗೂ ನವೆಂಬರ್ ಕೊನೆ ಮತ್ತು ಡಿಸೆಂಬರ್ ನಲ್ಲಿ ಅಧಿಕಾರ ಸ್ಥಾನದಲ್ಲಿ ಇರುವವರು ಕಾಟ ನೀಡುತ್ತಾರೆ. ಇದರ ಜತೆಗೆ ಸಾಲ ಬಾಧೆಗಳನ್ನು ಎದುರಿಸುತ್ತೀರಿ. ಮುಂದೆ ಯಾವಾಗಲೋ ದುಡ್ದು ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡಲು ಹೋಗದಿರಿ. ಇನ್ನು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಲಕ್ಷ್ಯ ವಹಿಸಿ. ಸ್ತ್ರೀಯರಿಗೆ ಮುಟ್ಟಿನ ಸಮಸ್ಯೆ ಸೇರಿ ಇತರ ಅನಾರೋಗ್ಯ ಎದುರಾದರೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧಿಸುವುದು ಬಹಳ ಕಷ್ಟ ಆಗಲಿದೆ. ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ತೆಗೆಯದಿರಿ. ಪಂಚಮ ಶನಿ ಹಾಗೂ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ, ಒಂಬತ್ತನೇ ಮನೆಯ ರಾಹು ಹಾಗೂ ಮೂರನೇ ಮನೆಯಲ್ಲಿನ ಕೇತು ಸಂಚಾರ ಒಂದು ಬಗೆಯಲ್ಲಿ ವಿಚಿತ್ರ ಸನ್ನಿವೇಶ- ಸವಾಲುಗಳನ್ನು ತಂದೊಡ್ಡುತ್ತವೆ.

(ಮುಂದಿನ ಭಾಗ ತುಲಾ ರಾಶಿಯಿಂದ ಮೀನದ ತನಕ)

English summary
2021 Yearly Horoscope in Kannada: Read your Varshika Bhavishya for all 12 rashi in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X