ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆ ಮೂರು ಕ್ಷೇತ್ರ'ಗಳಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರು ಫೇವರಿಟ್?

By ಅನಿಲ್ ಆಚಾರ್
|
Google Oneindia Kannada News

Recommended Video

Lok Sabha Elections2019:3 ಕ್ಷೇತ್ರಗಳ ಬಗ್ಗೆ ಕುತೋಹಹಲಕಾರಿ ವಿಷಯ ಬಿಚ್ಚಿಟ್ಟ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ

ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೂ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಯಾರಿಗೆ ಗೆಲುವು ಎಂಬುದು ಬಹು ಚರ್ಚಿತ ವಿಷಯ ಆಗಿದೆ. ಮಂಡ್ಯ ಆ ಪೈಕಿ ಮೊದಲ ಹೆಸರು. ಆ ನಂತರ ಹಾಸನ, ತುಮಕೂರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿನ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ವಿಪರೀತವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸದ್ಯದ ಸ್ಥಿತಿಯಲ್ಲಿ ಅಥವಾ ಸನ್ನಿವೇಶದ ಆಧಾರದಲ್ಲಿ ಟಾರೋ ಕಾರ್ಡ್ ರೀಡಿಂಗ್ ಮೂಲಕ ಮುಂಬೈ ಮೂಲದ ಪ್ರಕಾಶ್ ದಳವಿ ಮೂರು ಪ್ರತಿಷ್ಠಿತ ಕ್ಷೇತ್ರದ ಬಗ್ಗೆ ಏನಾಗಬಹುದು ಎಂಬ ವಿಚಾರ ತೆರೆದಿಟ್ಟಿದ್ದಾರೆ. ಟಾರೋ ಕಾರ್ಡ್ ರೀಡಿಂಗ್ ಅನ್ನೋದು ಬಹಳ ಆಸಕ್ತಿಕರವಾದ ವಿಧಾನ. ಆ ಮೂಲಕ ಅವರು ಹೇಳಿರುವುದನ್ನು ನಿಮ್ಮೆದುರು ಇಡುತ್ತಿದ್ದೇವೆ.

ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?

ಮೊದಲಿಗೆ ಮಂಡ್ಯ. ಈ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ, ಜಿದ್ದಾಜಿದ್ದಿನ ಹೋರಾಟ ಆಗುತ್ತದೆ. ಮೇ ಇಪ್ಪತ್ಮೂರರ ಫಲಿತಾಂಶದ ದಿನವೇ ಅಂತಿಮವಾಗಿ ವಿಜೇತರು ಯಾರು ಎಂದು ಗೊತ್ತಾದರೆ ಅದು ಸುಮಲತಾ ಅವರಿಗೆ ಅನುಕೂಲಕರ ಸನ್ನಿವೇಶ ಇದೆ. ಒಂದು ವೇಳೆ ಫಲಿತಾಂಶ ಪ್ರಕಟ ಆಗುವುದು ಒಂದು ದಿನ ಮುಂದೆ ಹೋದರೂ ಯಾವುದಾದರೂ ಕಾರಣಕ್ಕೆ ಇಪ್ಪತ್ನಾಲ್ಕನೇ ತಾರೀಕಿನ ತನಕ ಹೋದರೆ ನಿಖಿಲ್ ಕುಮಾರಸ್ವಾಮಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ.

Who is favorite in these high voltage LS constituency?

ಇನ್ನು ಹಾಸನದಲ್ಲಿ ಎಷ್ಟೇ ಪೈಪೋಟಿ ಕಂಡುಬಂದರೂ ತಕ್ಕಡಿ ಎ.ಮಂಜು ಅವರ ಪರವಾಗಿ ಹೆಚ್ಚು ವಾಲುತ್ತಿದೆ. ಈ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಎಷ್ಟೇ ಕಠಿಣ ಎನಿಸಬಹುದಾದರೂ ಎ.ಮಂಜುಗೆ ಸಾಧಕ ಆಗುವ ಅಂಶಗಳು ಹೆಚ್ಚಿವೆ ಎಂದು ಪ್ರಕಾಶ್ ದಳವಿ ಅಭಿಪ್ರಾಯ ಪಡುತ್ತಾರೆ.

ದೇವರ ದಯೆಯಿಂದ ಸುಸೂತ್ರವಾಗಿ ಚುನಾವಣೆ ನಡೆಯಲಿ: ಅಮ್ಮಣ್ಣಾಯದೇವರ ದಯೆಯಿಂದ ಸುಸೂತ್ರವಾಗಿ ಚುನಾವಣೆ ನಡೆಯಲಿ: ಅಮ್ಮಣ್ಣಾಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಅದೇನೇ ಬಿಜೆಪಿ ಭದ್ರಕೋಟೆ ಅಂತ ಹೇಳಿದರೂ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ಬಲಿಷ್ಠರಾಗುವ, ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಅನಿರೀಕ್ಷಿತ ಹಾಗೂ ಬಿಜೆಪಿ ಪಾಲಿಗೆ ಆಘಾತಕಾರಿ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಪ್ರಕಾಶ್ ದಳವಿ.

English summary
Mandya, Hassan and Bangalore South considering as high voltage LS constituency of Karnataka. Mumbai based Tarot card reader Prakash Dalavi predicted about who is favorite in these constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X