ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಳಂಬಿ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರ ಆದಾಯ, ಆರೋಗ್ಯ ಹೇಗಿದೆ?

By ದೈವಜ್ಞ ಶಂಕರ್ ಭಟ್
|
Google Oneindia Kannada News

ಈ ದಿನದ ಲೇಖನದಲ್ಲಿ ವೃಶ್ಚಿಕ ರಾಶಿಯವರ ಯುಗಾದಿ ಫಲವನ್ನು ನೋಡೋಣ. ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನೂರಾಧ ನಕ್ಷತ್ರ ಒಂದು, ಎರಡು, ಮೂರು, ನಾಲ್ಕನೇ ಪಾದ ಹಾಗೂ ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದಗಳು ಸೇರಿ ವೃಶ್ಚಿಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ.

ವಿಳಂಬಿ ನಾಮ ಸಂವತ್ಸರದಲ್ಲಿ ವೃಶ್ಚಿಕ ರಾಶಿಯವರಿಗೆ ಆದಾಯ 2 ಇದ್ದರೆ, ವ್ಯಯ 14 ಇದೆ. ಆರೋಗ್ಯ 3 ಹಾಗೂ ಅನಾರೋಗ್ಯ 0 ಇದೆ. ನಿಮಗೆ ಸಿಗುವ ಮನ್ನಣೆ- ಗೌರವದ ಪ್ರಮಾಣ 5 ಇದ್ದರೆ, ಅವಮಾನದ ಪ್ರಮಾಣ 6 ಇದೆ. ಇನ್ನು ಸುಖ 3, ದುಃಖ 3 ಇದೆ. ಇನ್ನು ನಾಲ್ಕು ತಿಂಗಳಂತೆ ಮೂರು ಭಾಗ ಮಾಡಿ, ಕಂದಾಯ ಫಲದ ಕಡೆ ನೋಡೋಣ.

ಸೊಂಟದ ಕೆಳ ಭಾಗದಲ್ಲಿ ವೃಶ್ಚಿಕ ರಾಶಿ ಸ್ತ್ರೀಯರ ಆ ಕ್ಷಣದ ಮೂಡ್ಸೊಂಟದ ಕೆಳ ಭಾಗದಲ್ಲಿ ವೃಶ್ಚಿಕ ರಾಶಿ ಸ್ತ್ರೀಯರ ಆ ಕ್ಷಣದ ಮೂಡ್

ವಿಶಾಖ ನಕ್ಷತ್ರಕ್ಕೆ 7 0 2, ಅನೂರಾಧ ನಕ್ಷತ್ರಕ್ಕೆ 2 1 0, ಜ್ಯೇಷ್ಠಾ ನಕ್ಷತ್ರಕ್ಕೆ 5 2 3 ಇದೆ. ವಿಶಾಖ, ಅನೂರಾಧ ಹಾಗೂ ಜ್ಯೇಷ್ಠಾ ನಕ್ಷತ್ರದವರಿಗೆ ಸಂವತ್ಸರದ ಆದಿಯ ಮೊದಲ ನಾಲ್ಕು ತಿಂಗಳು ಆದಾಯದ ದೃಷ್ಟಿಯಿಂದ ಅಡ್ಡಿ ಇಲ್ಲ. ಆದರೆ, ವಿಶಾಖ ಮತ್ತು ಅನೂರಾಧ ನಕ್ಷತ್ರದರಿಗೆ ಉಳಿದ ಎಂಟು ತಿಂಗಳು ಆದಾಯ ವಿಚಾರದಲ್ಲಿ ಹೆಚ್ಚು ಆಶಾದಾಯಕ ಆಗಿಲ್ಲ. ಇದ್ದುದರಲ್ಲಿ ಜ್ಯೇಷ್ಠಾ ನಕ್ಷತ್ರದವರಿಗೆ ಸ್ವಲ್ಪ ಪರವಾಗಿಲ್ಲ.

ಸದ್ಯದ ಗೋಚಾರ ಫಲ

ಸದ್ಯದ ಗೋಚಾರ ಫಲ

ಗೋಚಾರ ವಿಚಾರದಲ್ಲಿ ಗಮನಿಸಿದಾಗ ವೃಶ್ಚಿಕ ರಾಶಿಯವರಿಗೆ ಈಗ ಸಾಡೇಸಾತ್ ನಡೆಯುತ್ತಿದೆ. ಹನ್ನೆರಡನೇ ಮನೆಯಲ್ಲಿ ಗುರು ಇದ್ದಾನೆ, ಮುಂದಿನ ಅಕ್ಟೋಬರ್ ತನಕ ಅಲ್ಲೇ ಇರುತ್ತದೆ. ಆ ನಂತರ ನಿಮ್ಮ ಜನ್ಮ ರಾಶಿಗೆ ಪ್ರವೇಶ ಆಗುತ್ತದೆ. ಇನ್ನು ಶನಿ ಎರಡನೇ ಮನೆಯಲ್ಲಿದ್ದು, ರಾಹು ಮೂರನೇ ಸ್ಥಾನ, ಕೇತು ಒಂಬತ್ತನೇ ಸ್ಥಾನದಲ್ಲಿ ಸ್ಥಿತವಾಗಿದೆ.

ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ

ಖರ್ಚು ವೆಚ್ಚ ಹೆಚ್ಚಾಗುವ ಸಾಧ್ಯತೆ

ಹನ್ನೆರಡನೇ ಮನೆಯ ಗುರು, ಎರಡನೇ ಸ್ಥಾನದಲ್ಲಿರುವ ಶನಿ ಎರಡೂ ಗ್ರಹವೂ ಖರ್ಚನ್ನೇ ಸೂಚಿಸುತ್ತಿವೆ. ಮುಖ್ಯವಾಗಿ ಕುಟುಂಬದವರ ಆರೋಗ್ಯ ಅಥವಾ ನಿಮ್ಮದೇ ಆರೋಗ್ಯದಲ್ಲಿ ಸಮಸ್ಯೆಯಾಗಿ ಖರ್ಚು- ವೆಚ್ಚ ಹೆಚ್ಚಾಗುತ್ತದೆ. ಮಾಡಿಟ್ಟುಕೊಂಡಿದ್ದ ಲೆಕ್ಕಾಚಾರವೆಲ್ಲ ಏರುಪೇರಾಗಿ ಖರ್ಚು ಹೆಚ್ಚಾಗಿ, ಸಾಲ ಮಾಡುವ ಸ್ಥಿತಿ ಏರ್ಪಡುತ್ತದೆ.

ಮಧುಮೇಹ, ರಕ್ತದೊತ್ತಡ ಇರುವವರು ಎಚ್ಚರ

ಮಧುಮೇಹ, ರಕ್ತದೊತ್ತಡ ಇರುವವರು ಎಚ್ಚರ

ಕೋರ್ಟ್-ಕಚೇರಿ ವ್ಯಾಜ್ಯಗಳಿಗೆ ಹೊಸದಾಗಿ ಹಾಕಬೇಡಿ. ಯಾರದೋ ಮಾತು ನಂಬಿ ವಿದೇಶ ಪ್ರಯಾಣದ ಸಲುವಾಗಿ ಖರ್ಚು ಮಾಡದಿರುವುದು ಒಳಿತು. ಮದುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರು ಔಷಧ-ಮಾತ್ರೆ, ವೈದ್ಯರ ನಿಯಮಿತ ಭೇಟಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಮದ್ಯ- ಸಿಗರೇಟಿನ ಚಟ ವಿಪರೀತ ಇರುವವರು ಆರೋಗ್ಯದ ಬಗ್ಗೆ ಗಮನ ಕೊಡಿ.

ವಿವೇಚನೆ ಬಳಸಿ ಖರ್ಚು ಮಾಡಿ

ವಿವೇಚನೆ ಬಳಸಿ ಖರ್ಚು ಮಾಡಿ

ಒಳ್ಳೆ ದಶಾ-ಭುಕ್ತಿ ನಡೆಯುತ್ತಿರುವವರಿದ್ದರೆ ಶುಭ ಕಾರ್ಯಗಳಿಗೆ, ಅಭರಣ-ಮನೆ ಖರೀದಿಗೆ ಹಣ ಸಾಲ ಮಾಡಬೇಕಾಗಿ ಬರುತ್ತದೆ. ಈ ಸಂವತ್ಸರದ ಒಟ್ಟಾರೆ ಫಲ ಏನೆಂದರೆ, ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಿನ ಪ್ರಮಾಣದಲ್ಲಿ ತೋರುತ್ತಿದೆ. ಆದ್ದರಿಂದ ಸ್ವಲ್ಪ ವಿವೇಚನೆ ಬಳಸಿ, ಖರ್ಚು ಮಾಡಿ.

English summary
Ugadi annual prediction for 12 Zodiac signs mentioned in Vilambinama samvatsara commenced on March 18th, Sunday. Income and expenditure, health and other details for Libra, explain in the article by well known astrologer Shankar Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X