ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಸಂಚಾರ: ಯಾವ ರಾಶಿಗೆ ಶನಿದೇವನ ಕೃಪೆ ಇರಲಿದೆ?

|
Google Oneindia Kannada News

ವೈದಿಕ ಜ್ಯೋತಿಷ್ಯದ ಪ್ರಕಾರ, ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಸಂಚಾರ ಜೂನ್ 5, 2022 ರಂದು ನಡೆಯುತ್ತಿದೆ. ಎಲ್ಲಾ ಗ್ರಹಗಳಲ್ಲಿ ಶನಿ ದೇವನನ್ನು ನಿಧಾನವಾಗಿ ಚಲಿಸುವ ನ್ಯಾಯ-ಪ್ರೀತಿಯ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ಕರ್ಮ ಫಲವನ್ನು ನೀಡುತ್ತದೆ. ಜೊತೆಗೆ ವ್ಯಕ್ತಿಯ ಕೆಲಸ ಮತ್ತು ವ್ಯವಹಾರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಶನಿದೇವನು ಸುಮಾರು ಎರಡೂವರೆ ವರ್ಷಗಳ ಕಾಲ ರಾಶಿಚಕ್ರದಲ್ಲಿ ಇರುತ್ತಾನೆ ಮತ್ತು ಅದರ ನಂತರವೇ ಗ್ರಹವು ಮತ್ತೊಂದು ರಾಶಿಗೆ ಸಾಗುತ್ತದೆ. ಎಲ್ಲಾ ಜ್ಯೋತಿಷಿಗಳಿಗೆ ಶನಿಯು ಬಹಳ ಮುಖ್ಯವಾದ ಗ್ರಹವಾಗಿದೆ ಮತ್ತು ಈ ಕಾರಣಕ್ಕಾಗಿ, ವ್ಯಕ್ತಿಯ ಜಾತಕವನ್ನು ಅಧ್ಯಯನ ಮಾಡುವಾಗ, ಜ್ಯೋತಿಷಿಗಳು ವಿಶೇಷವಾಗಿ ಜಾತಕದಲ್ಲಿ ಶನಿಯ ಸ್ಥಾನವನ್ನು ನೋಡುತ್ತಾರೆ.

ಜ್ಯೋತಿಷ್ಯದ ಪ್ರಕಾರ, ಸೂರ್ಯನಿಗೆ ಗ್ರಹಗಳ ರಾಜ ಎಂಬ ಬಿರುದನ್ನು ನೀಡಲಾಗಿದೆ. ನಂತರ ಸೂರ್ಯನ ಮಗ ಶನಿಯು ಗ್ರಹಗಳ ಜೋಡಣೆಯಲ್ಲಿ ಸೇವಕನ ಸ್ಥಾನವನ್ನು ಪಡೆಯುತ್ತಾನೆ. ಈ ಗ್ರಹವು ಸ್ಥಳೀಯರಿಗೆ ಮುಖ್ಯ ಮ್ಯಾಜಿಸ್ಟ್ರೇಟ್ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಇದರ ಹೊರತಾಗಿ, ಶನಿ ಗ್ರಹವು ಯಾವುದೇ ರಾಶಿಚಕ್ರದಲ್ಲಿ ಹಿಮ್ಮೆಟ್ಟಿದಾಗ, ಅದರ ಪ್ರಯತ್ನದ ಬಲವು ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ, ಶನಿಯು ಪ್ರತಿ ರಾಶಿಚಕ್ರ ಚಿಹ್ನೆಯಲ್ಲಿ ತನ್ನ ಫಲವನ್ನು ಹೆಚ್ಚು ವಿಸ್ತಾರವಾಗಿ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ, ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ, ಶನಿಯು ಹಿಮ್ಮುಖವಾಗಿದ್ದಾಗ ಕೆಲಸದಲ್ಲಿ ನಿಧಾನವಾಗುವ ಸಾಧ್ಯತೆಯಿದೆ. ಇದರಿಂದಾಗಿ ವ್ಯಕ್ತಿಯಿಂದ ಹೆಚ್ಚಿನ ಶ್ರಮದ ಬೇಡಿಕೆ ಇರುತ್ತದೆ.

ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಸಂಚಾರ: ಸಮಯ ಮತ್ತು ದಿನಾಂಕ

ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಸಂಚಾರ ಜೂನ್ 5, 2022 ರಂದು ಭಾನುವಾರ 4:14 AM ಕ್ಕೆ ನಡೆಯಲಿದೆ. ಈ ಹಿಮ್ಮುಖ ಸಂಚಾರದ ಶನಿಯ ಫಲಿತಾಂಶಗಳು ಪ್ರತಿ ರಾಶಿಚಕ್ರ ಚಿಹ್ನೆಗೆ ವಿಭಿನ್ನವಾಗಿರುತ್ತವೆ. ಈ ಅವಧಿಯಲ್ಲಿ ಶನಿಗ್ರಹದ ಫಲಿತಾಂಶವು ಕೆಲವರಿಗೆ ಅಶುಭವಾಗಿರುತ್ತದೆ, ಆಗ ಶನಿಗ್ರಹವು ಅಶುಭವೆಂದು ಸಾಬೀತುಪಡಿಸಬಹುದು. ಕೆಲವರಿಗೆ ಶುಭ ಫಲಿತಾಂಶಗಳನ್ನೂ ನೀಡಬಹುದು. ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕುಂಭದಲ್ಲಿ ಶನಿಯು ಹಿಮ್ಮೆಟ್ಟುವಿಕೆಯ ಜ್ಯೋತಿಷ್ಯ ಪರಿಣಾಮವನ್ನು ಈಗ ವಿವರವಾಗಿ ತಿಳಿಯೋಣ.

ಮೇಷ: ವ್ಯಾಪಾರಸ್ಥರಿಗೆ ಅನುಕೂಲಕರ

ಮೇಷ: ವ್ಯಾಪಾರಸ್ಥರಿಗೆ ಅನುಕೂಲಕರ

ಈ ಅವಧಿಯಲ್ಲಿ ಮೇಷ ರಾಶಿಯ ಸ್ಥಳೀಯರಿಗೆ ಮಂಗಳಕರ ಫಲಿತಾಂಶಗಳು ದೊರೆಯಲಿವೆ. ಉದ್ಯೋಗವನ್ನು ಬದಲಾಯಿಸುವ ಆಲೋಚನೆಯಲ್ಲಿರುವವರಿಗೆ ಈ ಸಮಯವು ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿರುತ್ತದೆ. ಹೊಸ ಕೆಲಸದ ಅವಕಾಶಗಳು ಸಿಗಲಿವೆ. ಆದಾಯ ಹೆಚ್ಚಾಗಲಿದೆ. ಬೆಳವಣಿಗೆಗೆ ಸಂಪೂರ್ಣ ಅವಕಾಶಗಳಿವೆ. ಕೆಲಸದಲ್ಲಿ ಭಿನ್ನಾಭಿಪ್ರಾಯಗಳ ಸಾಧ್ಯತೆ ಇರುತ್ತದೆ. ವಿದೇಶಕ್ಕೆ ಹೋಗಬಹುದು. ವಿದೇಶದಲ್ಲಿ ನೆಲೆಸಲು ಬಯಸಿದರೆ ಈ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು.


ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರು ಈ ಸಮಯದಲ್ಲಿ ತಮ್ಮ ಕೆಲಸ ಮತ್ತು ಪ್ರಯತ್ನಗಳಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಐಟಿ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ನೀಡಲು ಶನಿ ದೇವ ಕೆಲಸ ಮಾಡಲಿದ್ದಾರೆ.

 ವೃಷಭ: ಕೆಲಸದಲ್ಲಿ ಹೊಸ ಅವಕಾಶ

ವೃಷಭ: ಕೆಲಸದಲ್ಲಿ ಹೊಸ ಅವಕಾಶ

ಈ ದಿನ ವೃಷಭ ರಾಶಿಯವರಿಗೆ ಉತ್ತಮ ದಿನವಾಗಿರಲಿದೆ. ಕೆಲಸದ ಬೇರೆ ಬೇರೆ ಅವಕಾಶಗಳು ಲಭಿಸಲಿವೆ. ವೃಷಭ ರಾಶಿಯ ಜನರು ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತಾರೆ. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರುವ ಜನರಿಗೆ ಈ ಅವಧಿಯು ವಿಶೇಷವಾಗಿ ಉತ್ತಮವಾಗಿರುತ್ತದೆ.


ಇದಲ್ಲದೆ, ಶನಿದೇವನು ನಿಮ್ಮ ಅದೃಷ್ಟದ ಅಧಿಪತಿಯಾಗಿರುವುದರಿಂದ, ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ. ಇದರೊಂದಿಗೆ, ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಕೆಲವು ಕಾರಣಗಳಿಂದ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ನೀವು ಪಾಲುದಾರಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಸ್ವಲ್ಪ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ನೀವು ವ್ಯವಹಾರದಲ್ಲಿ ನಷ್ಟದ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದದ ಸಾಧ್ಯತೆ ಇರುತ್ತದೆ. ಖರ್ಚುಗಳನ್ನು ನೀವು ನಿಯಂತ್ರಿಸಬೇಕಾಗುತ್ತದೆ.

ಮಿಥುನ: ಆತ್ಮವಿಶ್ವಾಸ ಹೆಚ್ಚಳ

ಮಿಥುನ: ಆತ್ಮವಿಶ್ವಾಸ ಹೆಚ್ಚಳ

ಮಿಥುನ ರಾಶಿಯವರಿಗೆ ಈ ದಿನ ಅದೃಷ್ಟದ ಬೆಂಬಲ ಸಿಗಲಿದೆ. ಕೆಲಸದಲ್ಲಿ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವಿಸುವಿರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನಿಮ್ಮ ಆಕರ್ಷಕ ನಡುವಳಿಕೆ ಎಲ್ಲರನ್ನು ಆಕರ್ಷಿಸುತ್ತದೆ. ಶನಿದೇವನ ಆಶೀರ್ವಾದದಿಂದ ಹೊಸ ಕೆಲಸಗಳಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ.

ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಉತ್ತಮ ವೈದ್ಯರ ಸಲಹೆಯನ್ನು ಪಡೆಯಿರಿ. ನಿಮ್ಮ ಮನಸ್ಸು ಸ್ವಲ್ಪಮಟ್ಟಿಗೆ ಗೊಂದಲಕ್ಕೊಳಗಾಗಬಹುದು. ಪ್ರಯಾಣವನ್ನು ತಪ್ಪಿಸಬೇಕು. ಪ್ರಯಾಣದಿಂದ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಧೈರ್ಯವನ್ನು ಪ್ರದರ್ಶಿಸುವ ಮೂಲಕ ಶಿಕ್ಷಣಕ್ಕೆ ಸಂಬಂಧಿಸಿದ ತಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾಗುತ್ತದೆ.

ಕರ್ಕ: ಆರ್ಥಿಕ ಜೀವನ ಸುಧಾರಣೆ

ಕರ್ಕ: ಆರ್ಥಿಕ ಜೀವನ ಸುಧಾರಣೆ

ಕರ್ಕ ರಾಶಿಯವರಿಗೆ ಈ ದಿನ ಸಮತೋಲನವಾಗಿರುತ್ತದೆ. ಶನಿದೇವನು ಶತ್ರು ಕಾಟದಿಂದ ಮುಕ್ತಿ ನೀಡುತ್ತಾನೆ. ನಿಮ್ಮ ಆರ್ಥಿಕ ಜೀವನ ಸುಧಾರಿಸುತ್ತದೆ. ಅಂದುಕೊಂಡ ಕಾರ್ಯಗಳು ಸುಲಭವಾಗಿ ಸಾಗುತ್ತವೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಸಣ್ಣ ಸಮಸ್ಯೆಯನ್ನು ಸಹ ನಿರ್ಲಕ್ಷಿಸದಂತೆ ಸಲಹೆ ನೀಡಲಾಗುತ್ತದೆ.


ಚಾಲನೆ ಮಾಡುವಾಗ ಅಥವಾ ರಸ್ತೆಯಲ್ಲಿ ನಡೆಯುವಾಗ ಬಹಳ ಜಾಗರೂಕರಾಗಿರಿ. ವೈಯಕ್ತಿಕ ಜೀವನ ಉತ್ತಮವಾಗಿರುತ್ತದೆ. ವಿಶೇಷವಾಗಿ ನೀವು ವಿವಾಹಿತರಾಗಿದ್ದರೆ ಸಂಗಾತಿಯೊಂದಿಗೆ ಈ ದಿನವನ್ನು ಆನಂದಿಸುತ್ತೀರಿ. ಶನಿದೇವನ ಆಶೀರ್ವಾದದಿಂದಾಗಿ ವಿದೇಶಕ್ಕೆ ಹೋಗಲು ಇಚ್ಛಿಸುವ ಜನರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಹೊಂದುತ್ತಾರೆ. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ.

ಸಿಂಹ: ವಿದೇಶ ಪ್ರಯಾಣ ಸಾಧ್ಯತೆ

ಸಿಂಹ: ವಿದೇಶ ಪ್ರಯಾಣ ಸಾಧ್ಯತೆ

ಸಿಂಹ ರಾಶಿಯವರು ಶನಿದೇವರ ಆಶೀರ್ವಾದ ಕೆಲ ವಿಚಾರದಲ್ಲಿ ಕಳೆದುಕೊಳ್ಳಬಹುದು. ವಿದೇಶಕ್ಕೆ ಹೋಗಲು ಇಚ್ಛಿಸುವವರಿಗೆ ಶನಿದೇವರು ಅದೃಷ್ಟದ ಮೂಲಕ ಬೆಂಬಲ ನೀಡಲಿದ್ದಾರೆ. ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಭಿನ್ನಾಭಿಪ್ರಾಯ, ತಪ್ಪು ತಿಳುವಳಿಕೆಯನ್ನು ಉಂಟು ಮಾಡಬಹುದು. ಶತ್ರುಗಳು ಮತ್ತು ವಿರೋಧಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.


ಇನ್ನು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಹೆಚ್ಚು ಶ್ರಮಪಡಬೇಕಾಗುತ್ತದೆ. ಸಿಂಹ ರಾಶಿಯವರಿಗೆ ವೃತ್ತಿ ಸಂಬಂಧಿ ಹಲವು ಲಾಭಗಳ ಸಾಧ್ಯತೆ ಇದೆ. ವ್ಯಾಪಾರದಲ್ಲಿರುವವರು ಈ ಸಮಯದಲ್ಲಿ ಶನಿದೇವನ ಕೃಪೆಯಿಂದ ತಮ್ಮ ವ್ಯವಹಾರದಲ್ಲಿ ಹಠಾತ್ ಹಣವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಇದರ ಹೊರತಾಗಿಯೂ, ನಿಮ್ಮ ಹಣವನ್ನು ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ.

ಕನ್ಯಾ: ವೈವಾಹಿಕ ಸಮಸ್ಯೆಗಳಿಂದ ಮುಕ್ತಿ

ಕನ್ಯಾ: ವೈವಾಹಿಕ ಸಮಸ್ಯೆಗಳಿಂದ ಮುಕ್ತಿ

ಕನ್ಯಾರಾಶಿಯವರಿಗೆ ಈ ದಿನ ಸಾಮಾನ್ಯ ದಿನವಾಗಿರುತ್ತದೆ. ವೈವಾಹಿಕ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ. ಅದೃಷ್ಟದ ನಿಮ್ಮನ್ನು ಕೈ ಹಿಡಿಯುತ್ತದೆ. ಮನೆಯಲ್ಲಿ ಕುಟುಂಬಸ್ಥರೊಂದಿಗೆ ಕೊಂಚ ಮನಸ್ತಾಪಗಳಿರಬಹುದು. ನಿಮ್ಮ ಶತ್ರುಗಳೊಂದಿಗೆ ಜಾಗರೂಕರಾಗಿರಬೇಕು. ಆರ್ಥಿಕ ಜೀವನ ಸುಧಾರಣೆಯಾಗಲಿದೆ. ಹೊಸ ಯೋಜನೆಗಳ ಬಗ್ಗೆ ಗಮನ ಹರಿಸುವಿರಿ.


ಹೂಡಿಕೆ ಅಡಚಣೆ ಸಾಧ್ಯತೆಯಿದೆ. ಲಾಭದಂತೆ ಖರ್ಚು ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳು ನಿಧಾನಗತಿ ಸಾಗುತ್ತವೆ. ಮಾಡುವ ಕೆಲಸದಲ್ಲಿ ಶ್ರದ್ದೆಯನ್ನು ಹೊಂದಿರುತ್ತೀರಿ. ಕುಟುಂಬಸ್ಥರ ಸಹಕಾರ ನಿಮ್ಮೊಂದಿರುತ್ತದೆ. ಅಪಘಾತದ ಸಾಧ್ಯತೆಯೂ ಇರುತ್ತದೆ. ಶನಿ ದೇವನು ಆರೋಗ್ಯದ ವಿಚಾರದಲ್ಲಿ ಮುನಿಸಿಕೊಳ್ಳಬಹುದು. ಹೀಗಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಬಹುದು. ಹೊರಗಿನ ಆಹಾರವನ್ನು ತ್ಯಜಿಸಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ತಿನ್ನಲು ಸಲಹೆ ನೀಡಲಾಗುತ್ತದೆ. ಶನಿದೇವನ ಆಶೀರ್ವಾದ ಪಡೆಯಲು ಆರಾಧನೆ ಮಾಡುವುದು ಉತ್ತಮ.

ತುಲಾ: ಸಂಪತ್ತು ಗಳಿಸುವ ಸಾಧ್ಯತೆ

ತುಲಾ: ಸಂಪತ್ತು ಗಳಿಸುವ ಸಾಧ್ಯತೆ

ತುಲಾ ರಾಶಿಯವರಿಗೆ ಈ ದಿನ ಹಲವಾರು ಬದಲಾವಣೆಗಳು ಆಗಲಿವೆ. ಜೀವನದಲ್ಲಿ ಸಂತೋಷ ನೆಲೆಸಲಿದೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಶಿಕ್ಷಣ ಮತ್ತು ಪ್ರೀತಿಯಲ್ಲಿ ಕೊರತೆ ಇರುವುದಿಲ್ಲ. ಸಂಪತ್ತು ಗಳಿಸಲು ಸಾಧ್ಯವಾಗುತ್ತದೆ. ಕುಂಭ ರಾಶಿಯ ಹಿಮ್ಮುಖ ಸಂಚಾರದಿಂದ ಮಕ್ಕಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರೇಮಿಯ ನಡುವೆ ಕೆಲವು ಸಣ್ಣ ವಿಷಯಕ್ಕೆ ಜಗಳ ಸಾಧ್ಯ.

ಕುಟುಂಬದಲ್ಲಿ ಅಶಾಂತಿಯ ವಾತಾವರಣವು ನಿಮಗೆ ಒತ್ತಡವನ್ನು ನೀಡುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ಅದೃಷ್ಟ ನಿಮ್ಮನ್ನು ಕೈಬಿಡದೆ ಕಾಪಾಡುತ್ತದೆ. ಕೆಲಸದಲ್ಲಿ ಆಸಕ್ತಿ ಹೊಂದಿರುತ್ತೀರಿ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಿರುತ್ತದೆ.

ವೃಶ್ಚಿಕ: ವೃತ್ತಿ ಜೀವನಕ್ಕೆ ಬಲ

ವೃಶ್ಚಿಕ: ವೃತ್ತಿ ಜೀವನಕ್ಕೆ ಬಲ

ವೃತ್ತಿಯ ವಿಷಯದಲ್ಲಿ ಸಮಯವು ಉತ್ತಮವಾಗಿರುತ್ತದೆ. ವೃಶ್ಚಿಕ ರಾಶಿಯವರಿಗೆ ಈ ದಿನ ನಿಮ್ಮ ವೃತ್ತಿ ಜೀವನಕ್ಕೆ ಬಲ ನೀಡುತ್ತದೆ. ಆರ್ಥಿಕ ಸ್ಥಿತಿಗತಿ ಉತ್ತಮವಾಗಿರುತ್ತವೆ. ಕೆಲಸದಲ್ಲಿ ಹೊಸ ಅವಕಾಶಗಳು ಸಿಗಲಿವೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮದಿಂದ ಸ್ವಲ್ಪ ಉತ್ತಮ ಲಾಭವನ್ನು ಪಡೆಯುತ್ತೀರಿ.ಈ ಅವಧಿಯು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತಿದೆ.

ಶನಿದೇವನ ಕೃಪೆಯಿಂದ ನಿಮ್ಮ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ವಿವಾಹಿತರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ವಿವಾದಗಳು ಸಾಧ್ಯ. ನಿಮ್ಮ ಸಂಗಾತಿಯೊಂದಿಗೆ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಾಗಿರುತ್ತದೆ. ಆದರೆ ಎಲ್ಲಾ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವಲ್ಲಿ ನೀವು ಯಶಸ್ವಿಯಾಗುವಿರಿ.

ಧನು: ಸರ್ಕಾರಿ ಉದ್ಯೋಗಗಳಿಗೆ ಅನುಕೂಲ

ಧನು: ಸರ್ಕಾರಿ ಉದ್ಯೋಗಗಳಿಗೆ ಅನುಕೂಲ

ಈ ದಿನ ಹೊಸ ವಿಚಾರಗಳನ್ನು ಕಲಿಯಲು ಆಸಕ್ತಿ ಹೊಂದಿರುತ್ತೀರಿ. ಕೆಲಸದಲ್ಲಿ ಬದಲಾವಣೆ ಆಗಬಹುದು. ಉತ್ತಮ ಅವಕಾಶಗಳು ಸಿಗಲಿವೆ. ನಿಮ್ಮ ಆತ್ಮೀಯರು ನಿಮ್ಮ ಮಾತುಗಳನ್ನು ಆಲಿಸುತ್ತಾರೆ. ವಿಶೇಷವಾಗಿ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿಯು ಅನುಕೂಲಕರವಾಗಿರುತ್ತದೆ. ಅಲ್ಲದೆ, ಶನಿದೇವನ ಕೃಪೆಯಿಂದ ನೀವು ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ಶಾಂತಿ ಕೊರತೆ ಎದ್ದು ಕಾಣಬಹುದು. ಆದರೂ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ.

ಅಂದುಕೊಂಡ ಕೆಲಸಗಳು ಸುಲಭವಾಗಿ ಸಾಗಲಿವೆ. ಸಣ್ಣ ಪ್ರವಾಸಕ್ಕೆ ಹೋಗಬಹುದು. ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಕೆಲಸದಲ್ಲಿ ಬುದ್ಧಿವಂತಿಕೆಯನ್ನು ಗುರುತಿಸಲಾಗುತ್ತದೆ. ಸಹೋದ್ಯೋಗಿಗಳ ಮೆಚ್ಚುಗೆ ಪಡೆಯುತ್ತೀರಿ.

ಮಕರ: ಕುಟುಂಬದಲ್ಲಿ ವಾದ ವಿವಾದ

ಮಕರ: ಕುಟುಂಬದಲ್ಲಿ ವಾದ ವಿವಾದ

ಜೂನ್ 5 ರಂದು ನಡೆಯುವ ಕುಂಭ ರಾಶಿಯಲ್ಲಿ ಶನಿಯ ಹಿಮ್ಮಖ ಸಂಚಾರ ಮಕರ ರಾಶಿಯವರಿಗೆ ಕುಟುಂಬದಲ್ಲಿ ವಾದ ವಿವಾದ ಉಂಟು ಮಾಡುವುದು. ನಿಮ್ಮ ಕಾರ್ಯವನ್ನು ಶ್ಲಾಘಿಸಲಾಗುತ್ತದೆ. ನಿಮ್ಮ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮನೆಯ ಸದಸ್ಯರಲ್ಲಿ ಶಾಂತಿಯ ಕೊರತೆ ಉಂಟಾಗಬಹುದು. ನಿಮ್ಮ ಸೌಕರ್ಯವು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ. ಮಾತುಗಾರಿಕೆಗೆ ಜನ ಆಕರ್ಷಕರಾಗುತ್ತಾರೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ.

ಪ್ರೇಮ ಪರೀಕ್ಷೆ ಉಂಟಾಗಲಿದೆ. ಶನಿದೇವನ ಪರೀಕ್ಷೆಯಲ್ಲಿ ನೀವು ಯಶಸ್ಸು ಸಾಧಿಸುತ್ತೀರಿ. ಪರಸ್ಪರ ಗೌರವ ಹೆಚ್ಚಾಗಲಿದೆ. ಪರೀಕ್ಷೆಯಲ್ಲಿ ಜಯಶಾಲಿಯಾಗುತ್ತೀರಿ. ಅನೇಕ ಪ್ರೇಮಿಗಳು ತಮ್ಮ ಕುಟುಂಬ ಸದಸ್ಯರಿಗೆ ಪ್ರಿಯತಮೆಯನ್ನು ಪರಿಚಯಿಸಲು ಯೋಜಿಸಬಹುದು.

ಕುಂಭ: ವೈವಾಹಿಕ ಜೀವನದಲ್ಲಿ ಸಂತೋಷ

ಕುಂಭ: ವೈವಾಹಿಕ ಜೀವನದಲ್ಲಿ ಸಂತೋಷ

ಶನಿ ದೇವನ ಕೃಪೆಯಿಂದಾಗಿ ಕುಂಭ ರಾಶಿಯವರ ತಿಳುವಳಿಕೆಯ ಶಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಹಿರಿಯರ ಬೆಂಬಲ ಸಿಗಲಿದೆ. ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ವೃತ್ತಿಜೀವನ ಅಂದುಕೊಂಡಂತೆ ನಡೆಯಲಿದೆ. ಕೆಲಸದ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಕೆಲಸಕ್ಕೆ ಸಂಬಂಧಿಸಿದ ಉತ್ತಮ ಅವಕಾಶಗಳು ಲಭಿಸಲಿವೆ. ಅದೃಷ್ಟ ನಿಮ್ಮೊಂದಿಗಿರುತ್ತದೆ. ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳೂ ತಮ್ಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ.

ಹೂಡಿಕೆಗೆ ಇದು ಉತ್ತಮ ಸಮಯ. ಆದರೆ ಅನುಭವಿಗಳಿಂದ ಸಲಹೆ ಪಡೆಯುವುದು ಅಗತ್ಯ. ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಬಹುದು. ಆರ್ಥಿಕ ಪ್ರಯೋಜನಗಳು ಸಿಗಲಿವೆ. ಮೇಲಾಧಿಕಾರಿಗಳಿಂದ ನಿಮ್ಮ ಬಗ್ಗೆ ಗೌರವ ಹೆಚ್ಚಾಗಲಿದೆ.

ಮೀನ: ಖರ್ಚು ಹೆಚ್ಚು

ಮೀನ: ಖರ್ಚು ಹೆಚ್ಚು

ಈ ಅವಧಿಯಲ್ಲಿ ಕುಂಭ ರಾಶಿಯವರು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಉತ್ತಮ. ಶನಿದೇವನ ದೃಷ್ಟಿ ವ್ಯಾಪಾರಸ್ಥರ ಮೇಲೆ ಇರುತ್ತದೆ. ಇದರಿಂದ ಹೂಡಿಕೆಗೆ ಹಣದ ಕೊರತೆ ಎದುರಾಗಬಹುದು. ಸಾಲ ಪಡೆಯುವ ಸಂದರ್ಭ ಉದ್ಬವಿಸಬಹುದು.

ಅಲ್ಲದೆ ಶತ್ರುಗಳ ಮೇಲೂ ನಿಗಾ ಇರಿಸಿ, ಇಲ್ಲದಿದ್ದರೆ ಅವರು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಒಟ್ಟಾರೆಯಾಗಿ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಸಂಚಾರದ ವೇಳೆ ದುಂದು ವೆಚ್ಚ ಮಾಡದಂತೆ ಸಲಹೆ ನೀಡಲಾಗುತ್ತದೆ. ವಿವಾಹಿತರು ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ತಾಳ್ಮೆಯಿಂದಿರಬೇಕು.

English summary
Saturn retrograde in Aquarius will take place on June 5, 2022, Sunday at 4:14 AM. Let us now know in detail the astrological effect and remedies of Saturn retrograde in Aquarius on all the zodiac signs in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X