ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Horoscope Today 19 April 2024: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ....

Google Oneindia Kannada News

ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.

ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಮೇಷ

ಮೇಷ

ಟ್ರಾನ್ಸ್ ಪೋರ್ಟೆಷನ್ ವ್ಯವಹಾರ ನಡೆಸುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಹೊಸ ವ್ಯವಹಾರ- ವ್ಯಾಪಾರ ವಿಸ್ತರಣೆಗೆ ಅವಕಾಶ ದೊರೆಯಲಿದೆ. ಇತರರ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಸಂಗಾತಿ- ಮಕ್ಕಳಿಗಾಗಿ ಹೊಸ ಇನ್ಷೂರೆನ್ಸ್ ಯೋಜನೆಗಳಿಗೆ ಹಣ ತೊಡಗಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ.

ವೃಷಭ

ವೃಷಭ

ನಿಮ್ಮ ಬಹು ದಿನದ ನಿರೀಕ್ಷೆ ಈಡೇರಲಿದೆ. ಸ್ವಚ್ಛತೆಯ ಸಲುವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ತಂದೆ- ತಾಯಿ, ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಸಂತೋಷದಿಂದ ದಿನ ಕಳೆಯಲಿದೆ.

ಮಿಥುನ

ಮಿಥುನ

ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವೈದ್ಯರ ಸಲಹೆಯನ್ನು ಶಿಸ್ತಾಗಿ ಪಾಲನೆ ಮಾಡಿ. ಈ ಹಿಂದೆ ನಿಮ್ಮನ್ನು ಕಾಡುತ್ತಿದ್ದ ದೈಹಿಕ ಬಾಧೆಗಳು ಮತ್ತೆ ಕಾಡುತ್ತವೆ. ಅದರಲ್ಲೂ ಕಾಲು ನೋವು, ಮಧುಮೇಹ ಇದ್ದವರು ಕಡ್ಡಾಯವಾಗಿ ಪಥ್ಯ ಹಾಗೂ ಔಷಧೋಪಚಾರವನ್ನು ಪಾಲಿಸಿ.

ಕರ್ಕಾಟಕ

ಕರ್ಕಾಟಕ

ಗೆದ್ದ ಎತ್ತಿನ ಬಾಲ ಹಿಡಿಯುವ ಸ್ವಭಾವದವರು ನಿಮ್ಮಿಂದ ಕೆಲಸ ಆಗಬೇಕು ಎಂಬ ಕಾರಣಕ್ಕೆ ಹೊಗಳುತ್ತಾರೆ. ಆದ್ದರಿಂದ ಯಾರು ನಿಮ್ಮ ಹಿತ ಬಯಸುವವರು ಎಂಬ ಬಗ್ಗೆ ತಿಳಿದಿರಲಿ. ಆಧಾರ- ದಾಖಲೆ ಇಲ್ಲದೆ ಯಾರ ಮೇಲೂ ಆರೋಪ ಹೊರೆಸಬೇಡಿ. ನಿಮ್ಮ ಹಗುರ ಮಾತುಗಳಿಂದ ವರ್ಚಸ್ಸಿಗೆ ಹಾನಿ ಆಗಬಹುದು.

ಸಿಂಹ

ಸಿಂಹ

ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳು ಇದ್ದಲ್ಲಿ ಪ್ರಗತಿ ಕಾಣುತ್ತದೆ. ಹಿರಿಯ ಅಧಿಕಾರಿಗಳಿಂದ ಸಹಾಯ ದೊರೆಯುತ್ತದೆ. ಆದರೆ ಶತ್ರುಗಳ ಕಾಟ ಹೆಚ್ಚಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆ ಹಾಗೂ ತಾಳ್ಮೆಯಿಂದ ಅವೆಲ್ಲವನ್ನೂ ದಾಟಬೇಕಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾಡಿ.

ಕನ್ಯಾ

ಕನ್ಯಾ

ಯಾರಿಗೂ ಹೊಳೆಯದಂಥ ಉಪಾಯಗಳು ನಿಮಗೆ ಹೊಳೆಯುತ್ತವೆ. ಇದರಿಂದ ಹಣ- ಸಮಯ ಉಳಿತಾಯ ಆಗುತ್ತದೆ. ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳುತ್ತೀರಿ. ದೀರ್ಘಾವಧಿ ಯೋಜನೆಗಳನ್ನು ಕೈಗೆತ್ತಿಕೊಂಡು, ಅದರಲ್ಲಿ ಪ್ರಗತಿ ಸಾಧಿಸುವಲ್ಲಿ ಯಶಸ್ವಿ ಆಗುತ್ತೀರಿ.

ತುಲಾ

ತುಲಾ

ನೀವೇ ನೇಮಿಸಿಕೊಂಡ ಅಥವಾ ಆರಿಸಿಕೊಂಡ ವ್ಯಕ್ತಿಗಳು ಮಾತು ಕೇಳುತ್ತಿಲ್ಲ ಎಂದೆನಿಸುತ್ತದೆ. ಆಪತ್ತಿನ ಕಾಲದಲ್ಲಿ ನಿರೀಕ್ಷೆಯಂತೆ ಏನೂ ನಡೆಯುತ್ತಿಲ್ಲ ಎಂಬ ಆಲೋಚನೆ ನಿಮ್ಮಲ್ಲಿ ಮೂಡುತ್ತದೆ. ಹಣ ಖರ್ಚಿನ ಬಗ್ಗೆ ನಿಗಾ ಇರಲಿ. ಅಗತ್ಯ ಹಾಗೂ ಅನಗತ್ಯ ಖರ್ಚುಗಳು ಯಾವುದು ಎಂಬುದರ ಸ್ಪಷ್ಟ ಅರಿವು ಮುಖ್ಯ.

ವೃಶ್ಚಿಕ

ವೃಶ್ಚಿಕ

ಇತರರು ತಮ್ಮಿಂದ ಆಗುವುದಿಲ್ಲ ಎಂದು ಕೈ ಬಿಟ್ಟಿದ್ದ ಕೆಲಸವನ್ನು ನೀವು ಮಾಡಿ ಮುಗಿಸುತ್ತೀರಿ. ಸಹೋದ್ಯೋಗಿಗಳು ನಿಮ್ಮ ತೀರ್ಮಾನಗಳನ್ನು ಮೆಚ್ಚಿಕೊಳ್ಳುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ, ವೈದ್ಯರಿಗೆ ಬಹಳ ಒತ್ತಡದ ದಿನವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಆಗುವಂತೆ ನೋಡಿಕೊಳ್ಳಿ.

ಧನು

ಧನು

ಯಾರ ಜತೆಗೆ ಮಾತನಾಡಬಾರದು, ಜತೆಗೆ ಕೆಲಸ ಮಾಡಬಾರದು ಅಂದುಕೊಂಡಿರುತ್ತೀರೋ ಅದೇ ಆಗುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಆದರೆ ತಾಳ್ಮೆ, ಸಂಯಮ ಅಗತ್ಯ. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಬೇಕಾಗುತ್ತದೆ. ದೇವತಾರಾಧನೆ, ಧ್ಯಾನಕ್ಕಾಗಿ ಸಮಯ ಮೀಸಲಿಡಿ.

ಮಕರ

ಮಕರ

ಲೆಕ್ಕಾಚಾರದ ಹೆಜ್ಜೆಗಳನ್ನು ಇಡಬೇಕು. ಭವಿಷ್ಯದಲ್ಲಿನ ದೊಡ್ಡ ಗುರಿಗಳ ಬಗ್ಗೆ ಆಲೋಚಿಸಿ. ತಾತ್ಕಾಲಿಕ ಹಿನ್ನಡೆಗಳನ್ನು ಪಕ್ಕಕ್ಕೆ ಸರಿಸಿ. ಯಾರದೇ ಮಾತಿಗೂ ಕೋಪದಿಂದ ಪ್ರತಿಕ್ರಿಯೆ ನೀಡಬೇಡಿ. ನಿಮ್ಮ ಕೆಲಸದ ಮೂಲಕವೇ ಉತ್ತರ ನೀಡುವುದಕ್ಕೆ ನಿರ್ಧಾರ ಮಾಡಿ. ಸ್ವಂತಿಕೆಯನ್ನು ಉಳಿಸಿಕೊಳ್ಳಿ.

ಕುಂಭ

ಕುಂಭ

ಅಂದುಕೊಳ್ಳದಂಥ ಖರ್ಚು- ವೆಚ್ಚಗಳು ಕಾಣಿಸಿಕೊಳ್ಳುತ್ತವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಹಲವು ಅಡ್ಡಿ- ಆತಂಕಗಳು ಎದುರಾಗುತ್ತವೆ. ನಿರೀಕ್ಷಿತ ಮೂಲಗಳಿಂದ ಹಣದ ಹರಿವು ಬಾರದೆ ಯೋಜನೆಗಳು ಮುಂದೆ ಸಾಗುವುದೇ ಸಮಸ್ಯೆಯಾಗಲಿದೆ. ಆದ್ದರಿಂದ ಅತಿಯಾದ ಆತ್ಮವಿಶ್ವಾಸ ಬೇಡ.

Recommended Video

ಕೃಷ್ಣನ ಕೈಯಲ್ಲಿರುವ ಕೊಳಲು ಕಿರೀಟದಲ್ಲಿರುವ ನವಿಲುಗರಿ ಯಾವುದರ ಸೂಚಕ? | Oneindia Kannada
ಮೀನ

ಮೀನ

ನಂಬಿದ ಸಿದ್ಧಾಂತಗಳು ನಿಮ್ಮ ಗೌರವ, ಮಾನ, ವರ್ಚಸ್ಸುಗಳನ್ನು ಉಳಿಸುತ್ತವೆ. ಯಾವುದರೊಂದಿಗೆ ರಾಜೀ ಮಾಡಿಕೊಳ್ಳದ ನಿಮ್ಮ ಸ್ವಭಾವವು ಈ ಸಮಯದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕಷ್ಟದ ದಿನಗಳಲ್ಲಿ ನಿಮ್ಮ ಸಹಾಯಕ್ಕೆ ಬಂದವರಿಗೆ ಈಗ ನೀವು ಸಹಾಯ ಮಾಡಬೇಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X