ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಡಿಶ್ರೀಗಳು ಭವಿಷ್ಯ ನುಡಿದಿದ್ದ ಬಹುದೊಡ್ಡ ದುರಂತಕ್ಕೆ ಇನ್ನು ಒಂದೇ ದಿನ!

|
Google Oneindia Kannada News

ತಾಳೇಗರಿ ಆಧಾರಿತ ಪ್ರಪಂಚದ ಮುಂದಿನ ಆಗುಹೋಗುಗಳ ಬಗ್ಗೆ ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯವನ್ನು ನಂಬುವವರ ಪಟ್ಟಿ ಬಹುದೊಡ್ಡದು. ಕಳೆದ ವರ್ಷ ಹತ್ತಾರು ಬಾರಿ ಕೋಡಿಶ್ರೀಗಳು ರಾಜಕೀಯ, ನೈಸರ್ಗಿಕ ವಿಕೋಪ, ಕಾಯಿಲೆಗಳು ಮುಂತಾದ ವಿಚಾರದಲ್ಲಿ ಭವಿಷ್ಯವನ್ನು ನುಡಿದಿದ್ದರು.

ಅಕಾಲಿಕ ಮಳೆಯ ವಿಚಾರದಲ್ಲೂ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದರು. ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊತ್ತಲ್ಲದ ಹೊತ್ತಲ್ಲಿ ಮಳೆ ಸುರಿದಿತ್ತು.

Makar Sankranti 2022: ಸೂರ್ಯನ ಸಂಚಾರದಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ Makar Sankranti 2022: ಸೂರ್ಯನ ಸಂಚಾರದಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ

ರಾಷ್ಟ್ರೀಯ ದುರಂತವೊಂದು ಸಂಭವಿಸಲಿದೆ ಎಂದು ಕೋಡಿಶ್ರೀಗಳು ಹೇಳಿದ್ದರು. ಅದರಂತೇ, ಮೂರೂ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ ಹಲವಾರು ಯೋಧರು ಹೆಲಿಕಾಪ್ಟರ್ ಪತನಗೊಂಡು ಮೃತ ಪಟ್ಟಿದ್ದರು.

ಕಳೆದ ಡಿಸೆಂಬರ್ 24ರಂದು ವರ್ಷದ ಕೊನೆಯ ಭವಿಷ್ಯವನ್ನು ನುಡಿದಿದ್ದ ಶ್ರೀಗಳು, ಜನವರಿ ಹದಿನಾಲ್ಕು ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಮತ್ತೊಂದು ಬಹುದೊಡ್ಡ ಅವಘಡ ಸಂಭವಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

 ರಾಷ್ಟ್ರೀಯ ದುರಂತ: ಅದರಂತೇ, ಸಿಡಿಎಸ್ ದುರ್ಮರಣ

ರಾಷ್ಟ್ರೀಯ ದುರಂತ: ಅದರಂತೇ, ಸಿಡಿಎಸ್ ದುರ್ಮರಣ

"ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವು ಹೆಚ್ಚಾಗಲಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ರೋಗ ಕಾಯಿಲೆಗಳು ಹೆಚ್ಚಾಗಲಿದೆ. ರಾಷ್ಟ್ರೀಯ ದುರಂತ ಸಂಭವಿಸಲಿದೆ. ವೈರಸ್ ಹಾವಳಿ ಸದ್ಯಕ್ಕೆ ಮುಗಿಯುವುದಿಲ್ಲ"ಎಂದು ಕೋಡಿಮಠದ ಶ್ರೀಗಳು ಕಳೆದ ವರ್ಷದ ಸೆಪ್ಟಂಬರ್ ಮಾಸಾಂತ್ಯದಲ್ಲಿ ಹಾವೇರಿಯಲ್ಲಿ ಹೇಳಿದ್ದರು. ಅದರಂತೇ, ಸಿಡಿಎಸ್ ದುರ್ಮರಣ, ಓಮಿಕ್ರಾನ್ ಕೇಸ್ ಹೆಚ್ಚಳ ಎಂದು ವ್ಯಾಖ್ಯಾನಿಸಲಾಗುತ್ತಿದೆ.

 ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು

ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು

ಕಳೆದ ಡಿಸೆಂಬರ್ ತಿಂಗಳಲ್ಲಿ ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, "ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು ಹೋಯಿತು. ಇದೀಗ ಮತ್ತೆ ಅಂಥದ್ದೇ ದುರಂತ ಸಂಭವಿಸುವ ಲಕ್ಷಣವಿದೆ, ಸಂಕ್ರಾತಿಯೊಳಗೆ ಮತ್ತೊಂದು ಬಹುದೊಡ್ಡ ಅವಘಡ ಸಂಭವಿಸುವ ಸಾಧ್ಯತೆಗಳಿವೆ"ಎಂದು ಹೇಳಿದ್ದರು.

 ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ

ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ

"ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ"ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ/ಓಮಿಕ್ರಾನ್ ಕೇಸುಗಳ ನಾಗಾಲೋಟ ಮುಂದುವರಿದಿದೆ. ದೇಶದಲ್ಲಿ ಎರಡು ಲಕ್ಷ ಮತ್ತು ರಾಜ್ಯದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕೇಸುಗಳು ದಾಖಲಾಗಲಿದೆ.

 ಸೈಬೀರಿಯಾದಲ್ಲಿ ಇನ್ನೊಂದು ವೈರಸ್ ಹುಟ್ಟಲಿದೆ, ಬಾಬಾ ವಂಗಾಳ ಭವಿಷ್ಯ

ಸೈಬೀರಿಯಾದಲ್ಲಿ ಇನ್ನೊಂದು ವೈರಸ್ ಹುಟ್ಟಲಿದೆ, ಬಾಬಾ ವಂಗಾಳ ಭವಿಷ್ಯ

ಮನುಕುಲಕ್ಕೆ ಎಲ್ಲಿಲ್ಲದ ಕಾಟವನ್ನು ಕೊಡುತ್ತಿರುವ ಕೊರೊನಾ ಹಾವಳಿ ಮುಂದಿನ ವರ್ಷವೂ ಮುಗಿಯದು. ಸೈಬೀರಿಯಾದಲ್ಲಿ ಇನ್ನೊಂದು ವೈರಸ್ ಹುಟ್ಟಲಿದೆ. ತಾಪಮಾನದಲ್ಲಿನ ಬದಲಾವಣೆಯಿಂದ ಈ ವೈರಸ್ ಜನ್ಮತಾಳಲಿದ್ದು ಜಗತ್ತಿಗೆ ಹರಡಲಿದೆ. ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ, ಇದರ ನಿಯಂತ್ರಣ ಇಡೀ ವಿಶ್ವಕ್ಕೆ ಸವಾಲಾಗಲಿದೆ. ಈ ವರ್ಷ ಕಂಡ ಅತಿವೃಷ್ಟಿ ಏನೇನೂ ಅಲ್ಲ, ಮುಂದಿನ ವರ್ಷ ಇನ್ನಷ್ಟು ಜಲಕಂಟಕ ಎದುರಾಗಲಿದೆ ಎಂದು ಬಾಬಾ ವಂಗಾ ಕೂಡಾ ಹಿಂದೆನೇ ಭವಿಷ್ಯ ಬರೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

English summary
One Day Left To Kodimutt Swamiji's Prediction Of Big Tragedy Will Happen During Sankranthi. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X