ಉತ್ತಮ ಸಂತಾನ ಬೇಕೆ? ಹಾಗಿದ್ರೆ ಈ ರೂಲ್ಸ್ ಪಾಲಿಸಿ
ಯಾರೇ ಪೋಷಕರಿರಲಿ ಆರೋಗ್ಯವಂತ, ಉತ್ತಮ ಸಂತಾನ ಆಗಲಿ ಎಂಬ ಅಪೇಕ್ಷೆ ಇರುತ್ತದೆ. ಮದುವೆ ನಂತರ ಮೊದಲ ರಾತ್ರಿ, ಪ್ರಸ್ತ ಅಥವಾ ಗರ್ಭಾದಾನದ ಮುಹೂರ್ತ ಬಹಳ ಮುಖ್ಯ.
ಇದಕ್ಕಾಗಿಯೇ ವಾರ, ನಕ್ಷತ್ರ, ಲಗ್ನ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಕೋಪದಿಂದ ಇರುವಾಗ ಸೇರಬಾರದು ಎಂಬುದಕ್ಕೆ ನರಕಾಸುರನ ಜನನ ನಮಗೆ ಉದಾಹರಣೆ ಇದೆ.
ಹನ್ನೆರಡು ರಾಶಿಗಳ ಮದುವೆ, ಲವ್ ಭವಿಷ್ಯ 2018
ಇನ್ನು ಹಗಲು ವೇಳೆ ಸೇರಿದರೆ ದುಷ್ಟ ಮಕ್ಕಳ ಜನನ ಆಗುತ್ತದೆ ಎಂಬುದಕ್ಕೆ ರಾವಣನ ಉದಾಹರಣೆ ಇದೆ. ಹಾಗಿದ್ದರೆ ದಂಪತಿ ಯಾವ ಸಮಯದಲ್ಲಿ ಸೇರಿದರೆ ಉತ್ತಮ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಂಬಿಕೆ ವೈಯಕ್ತಿಕವಾದ ವಿಚಾರ.
ಯಾವ ವಾರ ಶ್ರೇಷ್ಠ?
ಸೋಮವಾರ
ಬುಧವಾರ
ಗುರುವಾರ
ಶುಕ್ರವಾರ
ಯಾವ ತಿಥಿ ಇರಬೇಕು?
ಬಿದಿಗೆ
ತದಿಗೆ
ಪಂಚಮಿ
ಸಪ್ತಮಿ
ದಶಮಿ
ಕೃಷ್ಣ ಪಕ್ಷವಾದರೆ ಪಂಚಮಿ ಕೊನೆ
ತಾರಾನುಕೂಲ ಕೇಳಿ ತಿಳಿದುಕೊಳ್ಳಿ
ರೋಹಿಣಿ
ಉತ್ತರಾ
ಹಸ್ತಾ
ಸ್ವಾತಿ
ಅನೂರಾಧ
ಉತ್ತರಾಷಾಢ
ಶ್ರವಣ
ಶತಭಿಷಾ
ಉತ್ತರಾಭಾದ್ರ
ಈ ನಕ್ಷತ್ರಗಳ ಪೈಕಿ ತಾರಾನುಕೂಲ ಯಾವುದಕ್ಕಿದೆ ಎಂದು ಕೇಳಿ ತಿಳಿದುಕೊಳ್ಳಬೇಕು.
ಯಾವ ಲಗ್ನ ಇರಬೇಕು?
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ಧನು
ಮೀನ
ಈ ಲಗ್ನವನ್ನು ಪುರೋಹಿತರ ಮೂಲಕ ನಿರ್ಧಾರ ಮಾಡಿಸಿ. ಲಗ್ನ ಶುದ್ಧಿ ಇರಬೇಕು.
ಯಾವ ರಾತ್ರಿ ಸೇರಬೇಕು?
ಪತ್ನಿ ಋತುವಾದ ಮೊದಲ ನಾಲ್ಕು ರಾತ್ರಿ ಸೇರಬಾರದು. 11, 13, 16ನೇ ರಾತ್ರಿ ಸೇರಬಾರದು. ವೈಜ್ಞಾನಿಕವಾಗಿ ಹೇಳುವುದಾದರೂ 12, 14, 15ನೇ ರಾತ್ರಿಗಳಲ್ಲಿ ಸೇರಿದರೆ ಉತ್ತಮ. ಆ ದಿನ ಬೆಳಗ್ಗೆ ದಂಪತಿ ದೇವಸ್ಥಾನಕ್ಕೆ ತೆರಳಿ ಸತ್ಸಂತಾನಕ್ಕಾಗಿ ಪ್ರಾರ್ಥಿಸಬೇಕು.
ಧರ್ಮ ಶಾಸ್ತ್ರ ಏನು ಹೇಳುತ್ತದೆ?
ಧರ್ಮ ಶಾಸ್ತ್ರದ ಪ್ರಕಾರ, ದೈಹಿಕ ವಾಂಛೆ ತೀರಿಸಿಕೊಳ್ಳಲು ಮಾತ್ರ ಗಂಡ-ಹೆಂಡತಿ ಸೇರುವುದಕ್ಕೆ ನಿಷೇಧವಿದೆ. ಸಂತಾನ ಅಪೇಕ್ಷೆಯಿಂದ ಮಾತ್ರ ಸೇರಬೇಕು ಎಂಬ ನಿಯಮವಿದೆ.
ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380.