ಜ್ಯೋತಿಷ್ಯ: ರತ್ನಗಳು ಮಾತ್ರವಲ್ಲ, ಲೋಹಗಳಲ್ಲೂ ಇದೆ ಶ್ರೀಮಂತರನ್ನಾಗಿಸುವ ಶಕ್ತಿ
ಜ್ಯೋತಿಷ್ಯ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಅಶಾಂತಿ, ಒತ್ತಡ, ಭಯ, ರೋಗ, ಚಿಂತೆ ಹೀಗೆ ಹಲವಾರು ಸಮಸ್ಯೆಗಳಿಂದ ಮನುಷ್ಯ ಜೀವನ ಸಾಗಿಸುತ್ತಿರುತ್ತಾನೆ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯದ ರಾಶಿಚಕ್ರ ಚಿಹ್ನೆಯಲ್ಲಿ ಭವಿಷ್ಯವನ್ನು ತಿಳಿಯಬಹುದು. ಜೊತೆಗೆ ಅನಗತ್ಯ ಹಾಗೂ ಅಶುಭ ಘಟನೆಗಳನ್ನು ತಪ್ಪಿಸಲು ಪರಿಹಾರಗಳನ್ನು ಕಂಡುಕೊಳ್ಳಬಹುದು. ಅಶುಭದ ಪರಿಹಾರಗಳಿಗಾಗಿ ಜ್ಯೋತಿಷ್ಯದಲ್ಲಿ ರತ್ನಗಳನ್ನು ಧರಿಸುವುದು, ಪೂಜಿಸುವುದು, ಮಂತ್ರಗಳನ್ನು ಪಠಿಸುವುದು ಹೀಗೆ ಅನೇಕ ವಿಧಾನಗಳನ್ನು ಉಲ್ಲೇಖಿಸಲಾಗಿದೆ. ರತ್ನದ ಕಲ್ಲುಗಳಿಗೆ ಸಾಮಾನ್ಯವಾಗಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇದೆ ಎಂದು ಹೆಚ್ಚಾಗಿ ನಂಬಲಾಗುತ್ತದೆ. ಜಾತಕದ ದುರ್ಬಲ ಗ್ರಹಗಳನ್ನು ಬಲಪಡಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಲು ರತ್ನದ ಕಲ್ಲುಗಳು ತುಂಬಾ ಸುಲಭ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ರತ್ನಗಳ ಹೊರತಾಗಿ ಲೋಹಗಳು ಸಹ ಬಹಳಷ್ಟು ಪರಿಣಾಮವನ್ನು ಬೀರುತ್ತವೆ ಎಂದು ಕೆಲವೇ ಜನರಿಗೆ ತಿಳಿದಿದೆ.
ವಿಶೇಷ ಅಂದರೆ ಲೋಹವನ್ನು ಧರಿಸಿ ನೀವು ಶ್ರೀಮಂತರಾಗಬಹುದು ಎಂದು ಜ್ಯೋತಿಷ್ಯ ರಾಶಿಚಕ್ರ ಹೇಳುತ್ತದೆ. ರಾಶಿ ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ ರತ್ನದ ಕಲ್ಲುಗಳನ್ನು ಧರಿಸುವುದರಿಂದ ಎಷ್ಟು ಪ್ರಯೋಜನಗಳಿವೆಯೋ ಅದೇ ರೀತಿ ಲೋಹಗಳನ್ನು ರಾಶಿಚಕ್ರದ ಪ್ರಕಾರ ಧರಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಹಾಗಾದ್ರೆ ಯಾವ ರಾಶಿಯ ಜನರು ಶ್ರೀಮಂತರಾಗಲು ಯಾವ ಲೋಹವನ್ನು ಧರಿಸಬೇಕು ಎಂದು ನಮಗೆ ತಿಳಿದಿರಲಿ. ಸಾಂಪ್ರದಾಯಿಕವಾಗಿ ಪಂಚಲೋಹವನ್ನು ಚಿನ್ನ, ಬೆಳ್ಳಿ, ತಾಮ್ರ, ಸತುವು ಹಾಗೂ ಕಬ್ಬಿಣದ ಮಿಶ್ರಲೋಹವೆಂದು ವರ್ಣಿಸಲಾಗುತ್ತದೆ. ಇವು ಮುಖ್ಯವಾದ ಘಟಕಗಳಾಗಿವೆ. ಜೊತೆಗೆ, ಕೆಲವು ಸಂದರ್ಭಗಳಲ್ಲಿ, ಸತುವಿನ ಬದಲಾಗಿ ತವರ ಅಥವಾ ಸೀಸವನ್ನು ಬಳಸಲಾಗುತ್ತದೆ. ಇಂತಹ ಮಿಶ್ರಲೋಹದಿಂದ ತಯಾರಿಸಿದ ಆಭರಣಗಳನ್ನು ಧರಿಸಿದರೆ ಜೀವನದಲ್ಲಿ ಸಮತೋಲನ, ಆತ್ಮವಿಶ್ವಾಸ, ಉತ್ತಮ ಆರೋಗ್ಯ, ಅದೃಷ್ಟ, ಸಮೃದ್ಧಿ ಹಾಗೂ ಮನಃಶಾಂತಿ ಬರುತ್ತದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
ಮೇಷ ರಾಶಿ: ಮೇಷ ರಾಶಿಯ ಜನರು ಮಂಗಳವಾರದಂದು ಚಿನ್ನ ಅಥವಾ ತಾಮ್ರವನ್ನು ಧರಿಸಬೇಕು. ಚಿನ್ನದ ಸರ, ಉಂಗುರ ಅಥವಾ ಓಲೆ, ಮೂಗುತ್ತಿ ಧರಿಸುವುದರಿಂದ ಅವರಿಗೆ ಸಾಕಷ್ಟು ಹಣ ಮತ್ತು ಲಾಭ ದೊರೆಯುತ್ತದೆ.
ವೃಷಭ: ವೃಷಭ ರಾಶಿಯವರು ಬೆಳ್ಳಿಯನ್ನು ಧರಿಸಬೇಕು. ಶುಕ್ರವಾರ ಇದನ್ನು ಧರಿಸಲು ಉತ್ತಮ ಸಮಯವಾಗಿದೆ ಎಂದು ರಾಶಿಚಕ್ರದಲ್ಲಿ ತಿಳಿಸಲಾಗಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕಂಚು ಬಹಳ ಮಂಗಳಕರವಾಗಿದೆ. ಇದನ್ನು ಬುಧವಾರದಂದು ಧರಿಸುವುದು ಉತ್ತಮ.
ಕರ್ಕಾಟಕ: ಕರ್ಕಾಟಕ ರಾಶಿಯ ಜನರು ಸೋಮವಾರ ಬೆಳ್ಳಿ ಕಾಲುಂಗರ/ಗೆಜ್ಜೆಯನ್ನು ಧರಿಸಬೇಕು. ಇದು ಮಂಗಳಕರವಾಗಿದೆ.
ಸಿಂಹ: ಸಿಂಹ ರಾಶಿಯವರಿಗೆ ಚಿನ್ನ ಮತ್ತು ತಾಮ್ರವನ್ನು ಧರಿಸುವುದರಿಂದ ಧನ ಲಾಭವಾಗಲಿದೆ. ಅವರು ಭಾನುವಾರದಂದು ಈ ಲೋಹವನ್ನು ಧರಿಸಬೇಕು.
ಕನ್ಯಾ: ಕನ್ಯಾ ರಾಶಿಯವರಿಗೆ ಚಿನ್ನ ಮತ್ತು ಬೆಳ್ಳಿ ಶುಭಕರ. ಕನ್ಯಾ ರಾಶಿಯವರು ಇದನ್ನು ಯಾವುದೇ ದಿನದಲ್ಲಾದರೂ ಧರಿಸಬಹುದು.
ತುಲಾ: ತುಲಾ ರಾಶಿಯವರಿಗೆ ಬೆಳ್ಳಿ ಶುಭ. ಇದನ್ನು ಧರಿಸುವುದರಿಂದ ಶಾಂತಿ ಹಾಗೂ ಧನ ಪ್ರಾಪ್ತಿಯಾಗುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯ ಜನರು ಮಂಗಳವಾರ ಬೆಳ್ಳಿಯನ್ನು ಧರಿಸಿದ ತಕ್ಷಣ ಲಾಭವನ್ನು ಪಡೆಯಲು ಪ್ರಾರಂಭಿಸುತ್ತಾರೆ.
ಧನು ರಾಶಿ: ಧನು ರಾಶಿಯವರಿಗೆ ಹಿತ್ತಾಳೆ ತುಂಬಾ ಮಂಗಳಕರ. ಹಿತ್ತಾಳೆ ಗುರುವಾರದಂದು ಧರಿಸುವುದು ಸೂಕ್ತ.
ಮಕರ: ಮಕರ ರಾಶಿಯವರಿಗೆ ಅಷ್ಟ ಧಾತುಗಳಿಂದ ಮಾಡಿದ ಉಂಗುರವನ್ನು ಧರಿಸಬೇಕು. ಇದನ್ನು ಶನಿವಾರದಂದು ಧರಿಸುವುದರಿಂದ ಶುಭವಾಗಲಿದೆ.
ಕುಂಭ: ಕುಂಭ ರಾಶಿಯವರೂ ಅಷ್ಟ ಧಾತುಗಳನ್ನು ಧರಿಸುವುದರಿಂದ ಸಾಕಷ್ಟು ಲಾಭವಾಗಲಿದೆ. ಇದನ್ನು ಧರಿಸಲು ಬಯಸದಿದ್ದರೆ, ಸಾಸಿವೆ ಎಣ್ಣೆಯಲ್ಲಿ ಹಾಕಿ ಮತ್ತು ಶನಿವಾರದಂದು ದಾನ ಮಾಡಿ. ಶನಿಯ ಅಶುಭ ಪರಿಣಾಮವು ಕೊನೆಗೊಳ್ಳುತ್ತದೆ ಮತ್ತು ದಿನಗಳು ಬದಲಾಗುತ್ತವೆ.
ಮೀನ: ಮೀನ ರಾಶಿಯವರಿಗೆ ಚಿನ್ನವು ಅತ್ಯಂತ ಮಂಗಳಕರವಾಗಿದೆ. ಗುರುವಾರ ಇದನ್ನು ಧರಿಸಬೇಕು.