ಜ್ಯೋತಿಷ್ಯ: ಫೆಬ್ರವರಿ ಮಧ್ಯದಿಂದ ಜೂನ್ ವರೆಗೆ ಯಡಿಯೂರಪ್ಪನವರಿಗೆ ಆತಂಕ
ಈ ವರ್ಷದ ಏಪ್ರಿಲ್ ನಲ್ಲಿ ಮಕರ ರಾಶಿಗೆ ಗುರು ಗ್ರಹದ ಪ್ರವೇಶ ಆಗಲಿದೆ. ಶನಿಯ ಜತೆಗೂಡಿ ಗುರು ಗ್ರಹವು ಅಲ್ಲಿ ಕೆಲ ಇರುತ್ತದೆ. ಅದರ ಪರಿಣಾಮವು ಫೆಬ್ರವರಿ ಮಧ್ಯ ಭಾಗದಿಂದಲೇ ಗೋಚರಿಸಲು ಆರಂಭವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಆ ಬದಲಾವಣೆಯನ್ನು ಗಮನಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಜಾತಕಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರ ಜಾತಕ ದುರ್ಬಲವಾಗಿದೆ.
ಆದ್ದರಿಂದ ಕರ್ನಾಟಕ ರಾಜಕೀಯದಲ್ಲಿ ಸಂಚಲನವೊಂದು ನಡೆಯಲಿದೆ. ಇದು ಫೆಬ್ರವರಿ ತಿಂಗಳ ಆರಂಭ. ಏಪ್ರಿಲ್-ಮೇ-ಜೂನ್ ಈ ಮೂರು ತಿಂಗಳಲ್ಲಿ ಆ ಸಂಚಲನಕ್ಕೆ ರಾಜ್ಯ ಹಾಗೂ ಇಲ್ಲಿನ ಜನರು ಸಾಕ್ಷಿ ಆಗಲಿದ್ದಾರೆ. ಮುಖ್ಯವಾಗಿ ಬಿ. ಎಸ್. ಯಡಿಯೂರಪ್ಪ ಅವರು ನಿರ್ಧಾರವೊಂದನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಜ್ಯ ರಾಜಕಾರಣಕ್ಕೆ ಅವರ ಉತ್ತರಾಧಿಕಾರಿ ಹೆಸರನ್ನು ಸೂಚಿಸುವ ಸಾಧ್ಯತೆ ಕಾಣುತ್ತಿದೆ. ಇದರ ಜತೆ ಜತೆಗೆ ತಮ್ಮ ಕುಟುಂಬದ ವ್ಯಕ್ತಿಯೊಬ್ಬರನ್ನು ರಾಜ್ಯ ರಾಜಕಾರಣಕ್ಕೆ ಸಕ್ರಿಯವಾಗಿ ಕರೆತರುವ ಸಾಧ್ಯತೆ ಇದೆ. ಪಕ್ಷದೊಳಗೆ ಅಥವಾ ಸರ್ಕಾರದೊಳಗೂ ಸ್ಥಾನಮಾನ ಕಲ್ಪಿಸಬಹುದು. ಈ ಅವಧಿಯಲ್ಲಿ ಪಕ್ಷದೊಳಗೆ ಆಂತರಿಕ ಭಿನ್ನಮತ ದೊಡ್ಡ ಮಟ್ಟಕ್ಕೆ ಹೆಚ್ಚಾಗಲಿದೆ.
ಮೈ ಮರೆತರೆ ಹಗರಣದ ಸ್ವರೂಪದಲ್ಲಿ ಅಪಮಾನವೊಂದನ್ನು ಎದುರುಗೊಳ್ಳಬಹುದು. ಇದಕ್ಕೆ ಬೇಕಾದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಒಂದು ಅವಕಾಶ ಇದೆ. ಆದರೆ ಅದರಿಂದ ಬಹಳ ದೊಡ್ಡ ಮಟ್ಟದಲ್ಲಿ ಸಹಾಯ ಆಗಬಹುದು ಎನಿಸುತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗುರು ಶಾಪ ಕಾಣಿಸುತ್ತಿದೆ.
ಅದರ ನಿವಾರಣೆ ಆಗಬೇಕು ಅಂದಲ್ಲಿ, ಈ ಹಿಂದೆ ಅವರು ನೀಡಿದ್ದ ಮಾತೊಂದನ್ನು ನೆನಪಿಸಿಕೊಂಡು, ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಫೆಬ್ರವರಿ ಹದಿನೈದರ ನಂತರ ಅವರ ಆಲೋಚನೆ ಮುಂಚಿನಂತೆ ಇರುವುದಕ್ಕೆ ಅವಕಾಶ ಇರುವುದಿಲ್ಲ. ಆದರೂ ಗುರು ದತ್ತಾತ್ರೇಯರ ಮೊರೆ ಹೋದರೆ ಕೆಲವು ಅಪಾಯಗಳಿಂದ ತಪ್ಪಿಸಿಕೊಳ್ಳುವ ದಾರಿ ಕಾಣಿಸಬಹುದು.
ಬಹು ಕಾಲದಿಂದ ಯಡಿಯೂರಪ್ಪ ಅವರ ಜತೆಯಲ್ಲೇ ಇರುವ ವ್ಯಕ್ತಿಯೊಬ್ಬರ ಸಲಹೆಯೂ ಅಪಾಯಕಾರಿಯಾಗಿ ಪರಿಣಮಿಸಬಹುದು. ಅದರಲ್ಲೂ ಧಾರ್ಮಿಕ ವಿಚಾರದಲ್ಲಿ ಜನರು ಸಿಟ್ಟಿಗೇಳುವಂಥ ನಿರ್ಧಾರವನ್ನು ಸರ್ಕಾರದ ಪರವಾಗಿ ಘೋಷಿಸುವಂಥ ಸಾಧ್ಯತೆಗಳಿವೆ. ಇವೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ, ಜೂನ್ ತನಕ ಇರುವ ಅಪಾಯವನ್ನು ಅವರು ದಾಟಲು ನೆರವಾಗಬಹುದು ಎಂಬ ಕಾರಣಕ್ಕೆ. ಉಳಿದಂತೆ ಆ ದೈವೇಚ್ಛೆ.
(ಈ ಮೇಲ್ಕಂಡ ಅಭಿಪ್ರಾಯವು ಲೇಖಕರವೇ ಹೊರತು ಒನ್ ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ)
ವೈಯಕ್ತಿಕವಾಗಿ
ಭೇಟಿ
ಮಾಡಬೇಕಿದ್ದಲ್ಲಿ
ವಿಳಾಸ
ಮತ್ತು
ಸಂಪರ್ಕ
ಸಂಖ್ಯೆ:
ಶ್ರೀನಿವಾಸನ್
ಪ್ರಧಾನ
ಜ್ಯೋತಿಷ್ಯರು
ಸದ್ಗುರು
ಶ್ರೀ
ಸಾಯಿ
ಜ್ಯೋತಿಷ್ಯ
ಪೀಠ
#
37,
27ನೇ
ಕ್ರಾಸ್,
12ನೇ
ಮುಖ್ಯರಸ್ತೆ
ವಾಸುದೇವ್
ಅಡಿಗಾಸ್
ಹೋಟೆಲ್
ಹತ್ತಿರ
ಜಯನಗರ
4ನೇ
ಬ್ಲಾಕ್,
opp
ಸಿಂಡಿಕೇಟ್
ಬ್ಯಾಂಕ್
ಬೆಂಗಳೂರು
560011
ಸಂಪರ್ಕ
ಸಂಖ್ಯೆ
9886665656-
9886155755